RSS Amplifier

News source

ವಿಶ್ವ ಕನ್ನಡಿಗ ನ್ಯೂಸ್

ಇದು ದಮನಿತರ ಧ್ವನಿ

vknews.inSource feed ↗32 articles

Overdue Last read · last published · next check
Last read 3 days ago, longer than this feed's 1 hour schedule.

Written by

Latest articles

ಮಾದಕ ವಸ್ತು, ಕ್ರಿಕೆಟ್ ಬೆಟ್ಟಿಂಗ್ ವಿರುದ್ಧ ಜನಜಾಗೃತಿ ಅಗತ್ಯ ಯುವಕರ ಭವಿಷ್ಯ ರಕ್ಷಣೆಗೆ ಕುಟುಂಬ, ಸಮಾಜದ ಸಹಕಾರ ಮುಖ್ಯ ವಾರ್ಡ್, ಮೊಹಲ್ಲಾಗಳಲ್ಲಿ ಅನುಮಾನಾಸ್ಪದ ಚಟುವಟಿಕೆಗಳ ಬಗ್ಗೆ ಪೊಲೀಸರಿಗೆ ಮಾಹಿತಿ ನೀಡಿ

🖋️ ಶಬ್ಬೀರ್ ಅಹ್ಮದ್ ಶ್ರೀನಿವಾಸಪುರ ಗಾಂಜಾ ಸೇರಿದಂತೆ ಮಾದಕ ವಸ್ತುಗಳ ಬಳಕೆ ಹಾಗೂ ಕ್ರಿಕೆಟ್ ಬೆಟ್ಟಿಂಗ್‌ನಂತಹ ವ್ಯಸನಕಾರಿ ಚಟುವಟಿಕೆಗಳು ಯುವಜನರ ಭವಿಷ್ಯಕ್ಕೆ ಸವಾಲಾಗಿದ್ದು, ಇವುಗಳ ವಿರುದ್ಧ ಸಮಾಜದಲ್ಲಿ ನಿರಂತರ ಜನಜಾಗೃತಿ ಮೂಡಿಸುವ ಅಗತ್ಯವಿದೆ. ಮಾದಕ ವಸ್ತುಗಳ ಬಳಕೆಯಿಂದ ವ್ಯಕ್ತಿಯ ಆರೋಗ್ಯ, ಶಿಕ್ಷಣ, ಉದ್ಯೋಗ ಹಾಗೂ ಸಾಮಾಜಿಕ ಜೀವನದ ಮೇಲೆ ದುಷ್ಪರಿಣಾಮ ಬೀರುವ ಸಾಧ್ಯತೆಯಿದ್ದರೆ, ಬೆಟ್ಟಿಂಗ್‌ನಿಂದ ಆರ್ಥಿಕ ನಷ್ಟದ ಜೊತೆಗೆ ಮಾನಸಿಕ ಒತ್ತಡ ಮತ್ತು ಕೌಟುಂಬಿಕ ಸಮಸ್ಯೆಗಳು ಎದುರಾಗುವ…

ಕುರಾನ್ ಸ್ಪರ್ಧೆಯಲ್ಲಿ ಗೆದ್ದ ಕ್ರೈಸ್ತ ವ್ಯಕ್ತಿ..! : ಉಮ್ರಾ ಯಾತ್ರೆಯನ್ನು ಮುಸ್ಲಿಂ ನೆರೆಹೊರೆಯವರಿಗೆ ಉಡುಗೊರೆಯಾಗಿ ನೀಡಿದ ಮಾನವೀಯತೆ..

ಕೈರೋ (www.vknews.in): ಈಜಿಪ್ಟ್‌ನಲ್ಲಿ ಕ್ರೈಸ್ತ ವ್ಯಕ್ತಿಯೊಬ್ಬರು ಕುರಾನ್ ಕುರಿತ ಧಾರ್ಮಿಕ ಸ್ಪರ್ಧೆಯಲ್ಲಿ ಭಾಗವಹಿಸಿ ಉಚಿತ ಉಮ್ರಾ ಯಾತ್ರೆ ಗೆದ್ದಿದ್ದು, ಆ ಬಹುಮಾನವನ್ನು ತಮ್ಮ ಮುಸ್ಲಿಂ ನೆರೆಹೊರೆಯವರಿಗೆ ನೀಡಲು ಮುಂದಾಗಿರುವ ಘಟನೆ ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ಮೆಚ್ಚುಗೆಗೆ ಪಾತ್ರವಾಗಿದೆ. ಮಿನಾ ಎಂಬ ವ್ಯಕ್ತಿ ಇಸ್ಲಾಮಿಕ್ ಧರ್ಮ ಪ್ರಚಾರಕ ಡಾ. ಅಯ್ಮನ್ ಅಬು ಒಮರ್ ನಡೆಸುತ್ತಿದ್ದ ಸಾಮಾಜಿಕ ಮಾಧ್ಯಮದ ಲೈವ್ ಕಾರ್ಯಕ್ರಮವೊಂದನ್ನು ವೀಕ್ಷಿಸುತ್ತಿದ್ದ ವೇಳೆ, ತಮ್ಮ ನೆರೆಹೊರೆಯ ಉಮ್…

ಬ್ರೆಜಿಲ್‌ನ ಮಾಜಿ ಖ್ಯಾತ ಫುಟ್‌ಬಾಲ್ ಆಟಗಾರ ರಾಬರ್ಟೊ ಕಾರ್ಲೋಸ್ ಇಸ್ಲಾಂಗೆ ಮತಾಂತರ..? – ಟರ್ಕಿಶ್ ಸಂಸದರ ಪೋಸ್ಟ್‌ನಿಂದ ಭಾರೀ ಚರ್ಚೆ..

ಇಸ್ತಾನ್‌ಬುಲ್ (www.vknews.in): ಬ್ರೆಜಿಲ್‌ನ ಮಾಜಿ ಖ್ಯಾತ ಫುಟ್‌ಬಾಲ್ ಆಟಗಾರ ರಾಬರ್ಟೊ ಕಾರ್ಲೋಸ್ ಇಸ್ಲಾಂಗೆ ಮತಾಂತರಗೊಂಡಿದ್ದಾರೆ ಎಂಬ ಸುದ್ದಿ ಸಾಮಾಜಿಕ ಮಾಧ್ಯಮಗಳಲ್ಲಿ ಭಾರೀ ಚರ್ಚೆಗೆ ಕಾರಣವಾಗಿದೆ. ಟರ್ಕಿಯ ಆಡಳಿತಾರೂಢ ಜಸ್ಟಿಸ್ ಅಂಡ್ ಡೆವಲಪ್‌ಮೆಂಟ್ ಪಾರ್ಟಿಯ (AKP) ಸಂಸದ ಅಲಿ ಶಾಹಿನ್ ಅವರು ಸಾಮಾಜಿಕ ಮಾಧ್ಯಮದಲ್ಲಿ ಮಾಡಿರುವ ಪೋಸ್ಟ್ ಈ ಚರ್ಚೆಗೆ ಕಾರಣವಾಗಿದೆ. ವಿಶ್ವದ 500 ಪ್ರಭಾವಿ ಮುಸ್ಲಿಮರಲ್ಲಿ ಒಬ್ಬರೆಂದು ಗುರುತಿಸಲ್ಪಟ್ಟಿರುವ ಶೇಖ್ ಜಿಹಾದ್ ಹಮದ್ ಅವರೊಂದಿಗಿನ ಭೇಟಿಯ…

ಮನೆಯ ಹಾಲ್‌ನಲ್ಲಿ ನೇಣುಬಿಗಿದು ವ್ಯಕ್ತಿ ಆತ್ಮ*ಹತ್ಯೆ – ಅಬ್ದುಲ್ ಸಲೀಂ ಮೃತಪಟ್ಟ ಯುವಕ..

ಕುಂಬಳೆ (www.vknews.in): ಮನೆಯ ಹಾಲ್‌ನಲ್ಲಿ ವ್ಯಕ್ತಿಯೋರ್ವರು ನೇಣುಬಿಗಿದು ಆತ್ಮಹತ್ಯೆ ಮಾಡಿಕೊಂಡ ಸ್ಥಿತಿಯಲ್ಲಿ ಪತ್ತೆಯಾಗಿರುವ ಘಟನೆ ಕುಂಬಳೆಯಲ್ಲಿ ನಡೆದಿದೆ. ಮೃತರನ್ನು ಇಚ್ಲಂಗೋಡು ಚಿತ್ತೂರು ನಿವಾಸಿ ದಿ. ಕುಂಞಿಪಳ್ಳಿ ಅವರ ಪುತ್ರ ಅಬ್ದುಲ್ ಸಲೀಂ (33) ಎಂದು ಗುರುತಿಸಲಾಗಿದೆ. ಅಬ್ದುಲ್ ಸಲೀಂ ಅವರ ತಾಯಿ ಆಯಿಷಾಬಿ ಅವರು ಮಗಳ ಮನೆಗೆ ತೆರಳಿದ್ದರು. ಹೀಗಾಗಿ ರಾತ್ರಿ ಅಬ್ದುಲ್ ಸಲೀಂ ಅವರು ಮನೆಯಲ್ಲಿ ಒಬ್ಬರೇ ಇದ್ದರು ಎನ್ನಲಾಗಿದೆ. ಬೆಳಗ್ಗೆ ಸ್ಥಳೀಯರು ಮನೆಗೆ ತೆರಳಿ ನೋಡಿದಾಗ, ಮನೆಯ…

ಗೋಣಿಚೀಲದಲ್ಲಿ ಮಹಿಳೆಯ ಮೃತದೇಹ ಪತ್ತೆ: ನಾಪತ್ತೆಯಾದ ಮಹಿಳೆಯದ್ದೇ ಎಂಬ ಶಂಕೆ; ಪತಿ ನಾಪತ್ತೆ..

ಮಲಪ್ಪುರಂ (www.vknews.in): ತಿರೂರು ಹೊಳೆ ಸಮೀಪ ಗೋಣಿಚೀಲದಲ್ಲಿ ಕಟ್ಟಿ, ಕಲ್ಲುಗಳನ್ನು ತುಂಬಿ ಮುಳುಗಿಸಿಟ್ಟ ಸ್ಥಿತಿಯಲ್ಲಿ ಮಹಿಳೆಯೊಬ್ಬರ ಮೃತದೇಹ ಪತ್ತೆಯಾಗಿರುವ ಘಟನೆ ನಡೆದಿದೆ. ಇತ್ತೀಚೆಗೆ ನಾಪತ್ತೆಯಾಗಿದ್ದ ಮಹಿಳೆಯ ಮೃತದೇಹವಾಗಿರಬಹುದು ಎಂದು ಪೊಲೀಸರು ಶಂಕಿಸಿದ್ದಾರೆ. ಮೀನುಗಾರಿಕೆಗೆ ತೆರಳಲು ಸಿದ್ಧವಾಗುತ್ತಿದ್ದ ‘ಸಮರ್‌ಕಂದ್’ ದೋಣಿಯ ಕಾರ್ಮಿಕರು ನಿನ್ನೆ ಮಧ್ಯಾಹ್ನ ಹೊಳೆ ಸಮೀಪ ಗೋಣಿಚೀಲವೊಂದನ್ನು ಗಮನಿಸಿದ್ದಾರೆ. ಅನುಮಾನಗೊಂಡು ಪರಿಶೀಲಿಸಿದಾಗ ಅದರೊಳಗೆ ಮನುಷ್ಯರ ದೇಹವಿರುವುದು…

ವಿಟಿಲಿಗೋ ಚಿಕಿತ್ಸೆಗೆ ಯುಎಇಯಲ್ಲಿ ಹೊಸ ಔಷಧಿ: ‘ರಿನ್ವೋಕ್’ಗೆ ಅನುಮೋದನೆ..

ದುಬೈ (www.vknews.in): ವಿಭಾಗೇತರ (ನಾನ್-ಸೆಗ್ಮೆಂಟಲ್) ವಿಟಿಲಿಗೋ ಚಿಕಿತ್ಸೆಗೆ ‘ರಿನ್ವೋಕ್’ (Rinvoq) ಔಷಧಿಗೆ ಯುನೈಟೆಡ್ ಅರಬ್ ಎಮಿರೇಟ್ಸ್ (ಯುಎಇ) ಅನುಮೋದನೆ ನೀಡಿದೆ. ಈ ರೀತಿಯ ಮೌಖಿಕ ಚಿಕಿತ್ಸೆಗೆ ಅನುಮೋದನೆ ನೀಡಿದ ವಿಶ್ವದ ಮೊದಲ ದೇಶ ಯುಎಇ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಎಮಿರೇಟ್ಸ್ ಡ್ರಗ್ ಎಸ್ಟಾಬ್ಲಿಷ್‌ಮೆಂಟ್ ಈ ಔಷಧಿಗೆ ಅನುಮೋದನೆ ನೀಡಿದ್ದು, ದೇಹದ ವಿವಿಧ ಭಾಗಗಳಲ್ಲಿ ವಿಟಿಲಿಗೋ ಕಾಣಿಸಿಕೊಂಡಿರುವ ಹಾಗೂ ವ್ಯವಸ್ಥಿತ ಚಿಕಿತ್ಸೆಯ ಅಗತ್ಯವಿರುವ 12 ವರ್ಷ ಮತ್ತು ಅದಕ್ಕಿಂತ…

ಸ್ನೇಹಿತರೊಂದಿಗೆ ಕೊಳದಲ್ಲಿ ಸ್ನಾನ: 17 ವರ್ಷದ ವಿದ್ಯಾರ್ಥಿ ಮುಳುಗಿ ಮೃತ್ಯು – ಸಾಹಲ್ ಮೃತಪಟ್ಟ ವಿದ್ಯಾರ್ಥಿ..

ಕೋಝಿಕ್ಕೋಡ್ (www.vknews.in): ಸ್ನೇಹಿತರೊಂದಿಗೆ ಪಂಚಾಯಿತಿ ಕೊಳದಲ್ಲಿ ಸ್ನಾನ ಮಾಡುತ್ತಿದ್ದ 17 ವರ್ಷದ ವಿದ್ಯಾರ್ಥಿಯೊಬ್ಬ ನೀರಿನಲ್ಲಿ ಮುಳುಗಿ ಮೃತಪಟ್ಟಿರುವ ಘಟನೆ ಪೆರುಮಣ್ಣದಲ್ಲಿ ನಡೆದಿದೆ. ಮೃತರನ್ನು ಕುರುಮೊಟ್ಟುಮ್ಮಲ್ ನಿವಾಸಿ ಸಾಹಲ್ (17) ಎಂದು ಗುರುತಿಸಲಾಗಿದೆ. ಸ್ನೇಹಿತರೊಂದಿಗೆ ಪೆರುಮಣ್ಣದ ಪಂಚಾಯಿತಿ ಕೊಳಕ್ಕೆ ಸ್ನಾನಕ್ಕೆ ತೆರಳಿದ್ದ ವೇಳೆ ಈ ದುರ್ಘಟನೆ ಸಂಭವಿಸಿದೆ ಎನ್ನಲಾಗಿದೆ. ನೀರಿನಲ್ಲಿ ಮುಳುಗಿದ ಸಾಹಲ್ ಅವರನ್ನು ಮೇಲಕ್ಕೆತ್ತಿದರೂ, ಚಿಕಿತ್ಸೆ ಫಲಕಾರಿಯಾಗದೆ…

ಹಾಸನ: ನೇಣು ಬಿಗಿದ ಸ್ಥಿತಿಯಲ್ಲಿ ಯುವತಿ ಶವ ಪತ್ತೆ; ಸಾವಿನ ಸುತ್ತ ಅನುಮಾನದ ಹುತ್ತ..

ಹಾಸನ (www.vknews.in): ಜಿಲ್ಲೆಯ ಚನ್ನರಾಯಪಟ್ಟಣದ ಅಂಬಿಕ ನಗರದಲ್ಲಿ 19 ವರ್ಷದ ಯುವತಿಯೊಬ್ಬಳು ನೇಣು ಬಿಗಿದ ಸ್ಥಿತಿಯಲ್ಲಿ ಮೃತಪಟ್ಟಿರುವ ಘಟನೆ ನಡೆದಿದೆ. ಯುವತಿಯ ಸಾವಿನ ಸುತ್ತ ಹಲವು ಅನುಮಾನಗಳು ವ್ಯಕ್ತವಾಗಿದ್ದು, ಪ್ರಿಯಕರನಿಂದ ಕಿರುಕುಳ ನೀಡಲಾಗುತ್ತಿತ್ತು ಎಂಬ ಆರೋಪವೂ ಕೇಳಿಬಂದಿದೆ. ಮೃತ ಯುವತಿಯನ್ನು ರಚಿತಾ (19) ಎಂದು ಗುರುತಿಸಲಾಗಿದೆ. ಸಾಕಮ್ಮ-ಮಂಜಶೆಟ್ಟಿ ದಂಪತಿಯ ಪುತ್ರಿಯಾಗಿರುವ ರಚಿತಾ ಬಿಎ ವ್ಯಾಸಂಗ ಮಾಡುತ್ತಿದ್ದರು. ಮನೆಯಲ್ಲಿ ಅನುಮಾನಾಸ್ಪದವಾಗಿ ಮೃತಪಟ್ಟಿರುವ…

ಪನ್ನೀರ್ ಪ್ರಿಯರಿಗೆ ಶಾಕ್: ರಾಜ್ಯಾದ್ಯಂತ ‘ಅನಲಾಗ್ ಪನ್ನೀರ್’ ಬಳಕೆಗೆ 1 ವರ್ಷ ನಿಷೇಧ..!

ಬೆಂಗಳೂರು (www.vknews.in): ಪನ್ನೀರ್ ಪ್ರಿಯರು ಹಾಗೂ ಸಾರ್ವಜನಿಕರ ಆರೋಗ್ಯದ ಹಿತದೃಷ್ಟಿಯಿಂದ ರಾಜ್ಯ ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಇಲಾಖೆ ಮಹತ್ವದ ನಿರ್ಧಾರ ಕೈಗೊಂಡಿದೆ. ಹೋಟೆಲ್, ರೆಸ್ಟೋರೆಂಟ್ ಹಾಗೂ ವಿವಿಧ ಆಹಾರ ಸಂಸ್ಥೆಗಳಲ್ಲಿ ಕೃತಕವಾಗಿ ತಯಾರಿಸುವ ‘ಅನಲಾಗ್ ಪನ್ನೀರ್’ ಬಳಕೆಯನ್ನು ಒಂದು ವರ್ಷದ ಅವಧಿಗೆ ನಿಷೇಧಿಸಿ ಆದೇಶ ಹೊರಡಿಸಿದೆ. ಸಾಮಾನ್ಯವಾಗಿ ಅಸಲಿ ಪನ್ನೀರ್ ಅನ್ನು ಸಂಪೂರ್ಣವಾಗಿ ಹಾಲು ಮತ್ತು ಹಾಲಿನ ಉತ್ಪನ್ನಗಳಿಂದ ತಯಾರಿಸಲಾಗುತ್ತದೆ. ಆದರೆ ಕಡಿಮೆ ವೆಚ್ಚದಲ್ಲಿ…

ಕೇವಲ ₹200ಕ್ಕಾಗಿ ಮಂಗಳಮುಖಿಯ ಭೀಕರ ಕೊಲೆ: ಕೃತ್ಯ ನಡೆದ ಕೆಲವೇ ಗಂಟೆಗಳಲ್ಲಿ ಆರೋಪಿ ಬಂಧನ..

ಬೆಂಗಳೂರು (www.vknews.in): ಕೇವಲ ₹200 ಹಣಕ್ಕಾಗಿ ಮಂಗಳಮುಖಿಯೊಬ್ಬರನ್ನು ಡ್ರ್ಯಾಗರ್‌ನಿಂದ ಇರಿದು ಬರ್ಬರವಾಗಿ ಹತ್ಯೆ ಮಾಡಿರುವ ಘಟನೆ ಬೆಂಗಳೂರಿನ ಮೆಜೆಸ್ಟಿಕ್‌ನ ಬಿಎಂಟಿಸಿ ಬಸ್ ನಿಲ್ದಾಣದ ಬಳಿ ಆಗಸ್ಟ್ 21ರ ರಾತ್ರಿ ನಡೆದಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಉಪ್ಪಾರಪೇಟೆ ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆ. ಮೃತರನ್ನು ದೇವಿ ಎಂದು ಗುರುತಿಸಲಾಗಿದೆ. ರಾಮಮೂರ್ತಿ ನಗರದ ನಿವಾಸಿ ಗೌತಮ್ (29) ಬಂಧಿತ ಆರೋಪಿ ಎಂದು ಪೊಲೀಸರು ತಿಳಿಸಿದ್ದಾರೆ. ತಡರಾತ್ರಿ ಸುಮಾರು 2.30ರಿಂದ 3 ಗಂಟೆಯ…

80ನೇ ಭಾರತದ ರಾಷ್ಟ್ರೀಯ ಸ್ವಾತಂತ್ರ್ಯೋತ್ಸವದ ಅಂಗವಾಗಿ ಅಲ್ ಹಸ್ಸಾದಲ್ಲಿ AMC ಸಂಸ್ಥೆಯಿಂದ ಯಶಸ್ವಿ ರಕ್ತದಾನ ಶಿಬಿರ

ಅಲ್ ಹಸ್ಸ(www.vknews.in): ಭಾರತದ 80ನೇ ಸ್ವಾತಂತ್ರ್ಯೋತ್ಸವದ ಶುಭ ಸಂದರ್ಭದಲ್ಲಿ, ‘ಅಲ್ ಹಸ್ಸ ಮಂಗಳೂರಿಯನ್ಸ್ ಕಮ್ಯೂನಿಟಿ’ (AMC) ಆಶ್ರಯದಲ್ಲಿ ಸಾರ್ವಜನಿಕ ರಕ್ತದಾನ ಶಿಬಿರವು ಆಗಸ್ಟ್ 21, 2026ರಂದು ಸೌದಿ ಅರೇಬಿಯಾದ ಅಲ್ ಹಸ್ಸದಲ್ಲಿರುವ ಮೆಟರ್ನಿಟಿ & ಚಿಲ್ಡ್ರನ್ ಹಾಸ್ಪಿಟಲ್‌ನಲ್ಲಿ ಯಶಸ್ವಿಯಾಗಿ ನಡೆಯಿತು. ​60 ವರ್ಷ ಪ್ರಾಯದ ಹಿರಿಯರಾದ ಉಮರುಲ್ ಫಾರೂಕ್ ಅಡ್ಡೂರು ಅವರು ರಕ್ತದಾನ ಮಾಡುವ ಮೂಲಕ ಶಿಬಿರಕ್ಕೆ ಚಾಲನೆ ನೀಡಿ, ಇಂದಿನ ಯುವ ಪೀಳಿಗೆಗೆ ಮಾದರಿಯಾದರು. ​ಕಾರ್ಯಕ್ರಮದಲ್ಲಿ…

ಜಡಿ ಮಳೆಯಲ್ಲೂ ಮಕ್ಕಳ ಪ್ರತಿಭೆಗೆ ಕೊಡೆ ಹಿಡಿದ ಶಿಕ್ಷಕಿ – ನರಿಮೊಗರು ಶಾಲೆಯ ಶೀಲತಾ ಮೇಡಂ ರವರ ಬದ್ಧತೆಗೆ ಅಭಿನಂದನೆಗಳ ಮಹಾಪೂರ

(www.vknews. in) ಜಡಿ ಮಳೆಯಲ್ಲೂ ಮಕ್ಕಳ ಪ್ರತಿಭೆಗೆ ಕೊಡೆ ಹಿಡಿದ ಶಿಕ್ಷಕಿ – ನರಿಮೊಗರು ಶಾಲೆಯ ಶೀಲತಾ ಮೇಡಂ ಅವರ ಸೇವೆಗೆ ಅಭಿನಂದನೆಗಳ ಮಹಾಪೂರ ದೈಹಿಕ ಶಿಕ್ಷಣ ಶಿಕ್ಷಕಿಯಾಗಿದ್ದರೂ ಶಾಲೆಯ ಸರ್ವತೋಮುಖ ಅಭಿವೃದ್ಧಿಗೆ ನಿರಂತರ ಶ್ರಮ; ಪ್ರಭಾರ ಶಿಕ್ಷಕಿಯಾಗಿದ್ದ ಅವಧಿಯಲ್ಲೂ ಶಾಲೆಯ ಚಿತ್ರಣ ಬದಲಿಸಿದ ಸಾಧನೆ 80ನೇ ಸ್ವಾತಂತ್ರ್ಯೋತ್ಸವದ ದಿನ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡಿದ ಒಂದು ದೃಶ್ಯ ಎಲ್ಲರ ಮನಸೂರೆಗೊಂಡಿದೆ. ಜಡಿ ಮಳೆಯ ನಡುವೆಯೂ ಪುಟ್ಟ ಮಕ್ಕಳು ತಮ್ಮ ಮುದ್ದಾದ ಶೈಲಿಯಲ್ಲಿ ಭಾಷಣ…

ಸೌದಿ ಅರೇಬಿಯಾ: ಮರಣದಂಡನೆಗೆ ಮುನ್ನ ಕ್ಷಮಾಪಣೆ; ತನ್ನ ಮಗನ ಕೊಲೆಗಾರನನ್ನು ಶಿರಚ್ಛೇದ ಸ್ಥಳದಲ್ಲಿಯೇ ಕ್ಷಮಿಸಿದ ತಂದೆ

ತಬುಕ್(www..vknews.in): ಮರಣದಂಡನೆಗೆ ಕೆಲವೇ ಕ್ಷಣಗಳು ಉಳಿದಿರುವಾಗ, ಕೊಲೆ ಆರೋಪಿ ಸೌದಿ ಯುವಕನಿಗೆ ಹೊಸ ಜೀವಮಾನ ನೀಡಿದ ಘಟನೆ ತಬೂಕಿನಿಂದ ವರದಿಯಾಗಿದೆ. ಕೊಲೆಯಾದ ಯುವಕನ ತಂದೆ ಕೊನೆಯ ಕ್ಷಣದಲ್ಲಿ ಕರುಣೆಯ ಹಸ್ತ ಚಾಚಿದಾಗ ಆರೋಪಿ ಅಬ್ದುಲ್ ಅಜೀಜ್ ಅಬ್ದುಲ್ಲಾ ಹುಸೇನ್ ಅಲ್-ಅಟಾವಿ ಎಂಬ ಯುವಕ ಸಾವಿನ ಅಂಚಿನಿಂದ ಮತ್ತೆ ಬದುಕಿದ. ತನ್ನ ಮಗನನ್ನು ಕೊಂದ ವ್ಯಕ್ತಿಗೆ ಶಿರಚ್ಛೇಧಕ್ಕಿಂದ ಬೇರೆ ಶಿಕ್ಷೆ ಇಲ್ಲ ಎಂದು ಪಟ್ಟು ಹಿಡಿದಿದ್ದ ಕೊಲೆಗೀಡಾಗಿದ್ಗ ವ್ಯಕ್ತಿಯ ತಂದೆ ಇಬ್ರಾಹಿಂ ಸಲಾಮಾ…

ವರಮಹಾಲಕ್ಷ್ಮಿ ಹಬ್ಬದ ಹಾರ್ದಿಕ ಶುಭಾಶಯಗಳು ಹಾಗೂ ಮಾನವೀಯತೆ ಸಂದೇಶ..

​ ಮೈಸೂರು/ಕೊಡಗು (www.vknews.in) : ​ನಾಡಿನ ಸಮಸ್ತ ಜನತೆಗೆ ‘ಮಾನವೀಯತೆ ಚಾರಿಟೇಬಲ್ ಟ್ರಸ್ಟ್’ ವತಿಯಿಂದ ಧನ-ಧಾನ್ಯ, ಐಶ್ವರ್ಯ ಹಾಗೂ ಸುಖ-ಶಾಂತಿ ನೀಡುವ ಪವಿತ್ರ ವರಮಹಾಲಕ್ಷ್ಮಿ ಹಬ್ಬದ ಹೃತ್ಪೂರ್ವಕ ಶುಭಾಶಯಗಳು. ​ವರಮಹಾಲಕ್ಷ್ಮಿ ಎಂದರೆ ಕೇವಲ ಸಂಪತ್ತನ್ನು ಕರುಣಿಸುವ ದೇವಿಯಷ್ಟೇ ಅಲ್ಲ, ದಯೆ, ಕರುಣೆ ಮತ್ತು ಪರೋಪಕಾರದ ಸಂಕೇತ. ಪ್ರತಿಯೊಬ್ಬರ ಮನೆಯಲ್ಲಿ ಮಹಾಲಕ್ಷ್ಮಿ ನೆಲೆಸುವಂತೆ, ಪ್ರತಿಯೊಬ್ಬರ ಮನದಲ್ಲಿ ‘ಮಾನವೀಯತೆ’ ನೆಲೆಸಬೇಕು ಎಂಬುದು ನಮ್ಮ ಆಶಯ. ​ಜನತೆಗೆ ನಮ್ಮ ಸಂಸ್ಥೆಯ…

“ಕ್ಷಮಿಸಿ ಅಪ್ಪ-ಅಮ್ಮ, ಮುಂದಿನ ಜನ್ಮದಲ್ಲಿ ವೈದ್ಯನಾಗುತ್ತೇನೆ”: ಡೆತ್‌ನೋಟ್ ಬರೆದಿಟ್ಟು 19 ವರ್ಷದ NEET ಆಕಾಂಕ್ಷಿ ಆತ್ಮಹತ್ಯೆ..

ಛತ್ರಪತಿ ಸಂಭಾಜಿನಗರ (www.vknews.in): “ನಾನು ಮುಂದಿನ ಜನ್ಮದಲ್ಲಿ ಖಂಡಿತ ವೈದ್ಯನಾಗುತ್ತೇನೆ” ಎಂದು ಡೆತ್‌ನೋಟ್ ಬರೆದಿಟ್ಟು 19 ವರ್ಷದ NEET ಆಕಾಂಕ್ಷಿಯೊಬ್ಬರು ಆತ್ಮಹತ್ಯೆ ಮಾಡಿಕೊಂಡಿರುವ ದಾರುಣ ಘಟನೆ ಮಹಾರಾಷ್ಟ್ರದ ಛತ್ರಪತಿ ಸಂಭಾಜಿನಗರ ಜಿಲ್ಲೆಯಲ್ಲಿ ನಡೆದಿದೆ. ಮೃತರನ್ನು ಸೂರಜ್ ಸುಭಾಷ್ ಶಿಂದೆ (19) ಎಂದು ಗುರುತಿಸಲಾಗಿದೆ. ವೈಜಪುರ ತಾಲೂಕಿನ ಖಂಡಾಲಾದಲ್ಲಿರುವ ತಮ್ಮ ನಿವಾಸದಲ್ಲಿ ಅವರು ಮೃತಪಟ್ಟ ಸ್ಥಿತಿಯಲ್ಲಿ ಪತ್ತೆಯಾಗಿದ್ದಾರೆ. NEET ತಯಾರಿ ವೇಳೆ ಒತ್ತಡ..? ಸೂರಜ್ ಅವರು…

ಬೈಕಿಗೆ ಶಾಲಾ ಬಸ್ ಢಿಕ್ಕಿ: 25 ವರ್ಷದ ಯುವಕ ಮೃತ್ಯು – ಶಮ್ಮಾಸ್ ಅಬ್ದುಲ್ಲಾ ಮೃತಪಟ್ಟ ಯುವಕ..

ಕಾಸರಗೋಡು (www.vknews.in): ಶಾಲಾ ಬಸ್ ಮತ್ತು ಬೈಕ್ ನಡುವೆ ಸಂಭವಿಸಿದ ಅಪಘಾತದಲ್ಲಿ ಯುವಕನೋರ್ವ ಮೃತಪಟ್ಟ ಘಟನೆ ಗುರುವಾರ ಬೆಳಗ್ಗೆ ಬೋವಿಕ್ಕಾನ ಸಮೀಪದ ಪೊವ್ವಲ್ ಮಾಸ್ತಿಕುಂಡು ಎಂಬಲ್ಲಿ ನಡೆದಿದೆ. ಮೃತರನ್ನು ಗಾಳಿಮುಖ ನೆಟ್ಟಣಿಗೆಯ ಹೊಸಹಿತ್ತಿಲು ನಿವಾಸಿ ಎಸ್. ಶಮ್ಮಾಸ್ ಅಬ್ದುಲ್ಲಾ (25) ಎಂದು ಗುರುತಿಸಲಾಗಿದೆ. ಶಮ್ಮಾಸ್ ಅವರು ಚೆರ್ಕಳ ಕಡೆಯಿಂದ ಗಾಳಿಮುಖದತ್ತ ಬೈಕ್‌ನಲ್ಲಿ ತೆರಳುತ್ತಿದ್ದ ವೇಳೆ ಮಾಸ್ತಿಕುಂಡು ಬಳಿ ಎದುರಿನಿಂದ ಬರುತ್ತಿದ್ದ ಖಾಸಗಿ ಶಾಲಾ ಬಸ್ ಬೈಕ್‌ಗೆ ಢಿಕ್ಕಿ…

ಪ್ರಾಂಶುಪಾಲೆಗೆ 27 ಬಾರಿ ಇರಿದು ಹತ್ಯೆಗೈದ ಪ್ರಕರಣ ; 10ನೇ ತರಗತಿಯ ಇಬ್ಬರು ವಿದ್ಯಾರ್ಥಿಗಳ ಬಂಧನ..!

ನಲ್ಗೊಂಡ (www.vknews.in): ಹಣ ಹಾಗೂ ಐಷಾರಾಮಿ ಜೀವನಶೈಲಿಗಾಗಿ ಶಾಲಾ ಪ್ರಾಂಶುಪಾಲೆ ಹಾಗೂ ನಿರ್ದೇಶಕಿ ಕಲ್ಲು ರೂಪಾ ರೆಡ್ಡಿ (48) ಅವರನ್ನು ಬರ್ಬರವಾಗಿ ಹತ್ಯೆ ಮಾಡಿದ ಆರೋಪದ ಮೇಲೆ 10ನೇ ತರಗತಿಯ ಇಬ್ಬರು ವಿದ್ಯಾರ್ಥಿಗಳನ್ನು ತೆಲಂಗಾಣ ಪೊಲೀಸರು ಬಂಧಿಸಿದ್ದಾರೆ. ನಲ್ಗೊಂಡ ಜಿಲ್ಲೆಯ ಕೊಂಡಮಲ್ಲೇಪಲ್ಲಿಯ ನಾಗಾರ್ಜುನ ಪಬ್ಲಿಕ್ ಶಾಲೆಯ ಪ್ರಾಂಶುಪಾಲೆ ಹಾಗೂ ನಿರ್ದೇಶಕಿಯಾಗಿದ್ದ ರೂಪಾ ರೆಡ್ಡಿ ಅವರು ಆಗಸ್ಟ್ 12ರ ಬೆಳಗ್ಗೆ ತಮ್ಮ ನಿವಾಸದಲ್ಲಿ 27 ಇರಿತದ ಗಾಯಗಳೊಂದಿಗೆ ಮೃತಪಟ್ಟ ಸ್ಥಿತಿಯಲ್ಲಿ…

ಅತ್ತೆ-ನಾದಿನಿ ಕಿರುಕುಳಕ್ಕೆ ಬೇಸತ್ತು 2 ವರ್ಷದ ಮಗುವಿನೊಂದಿಗೆ ತಾಯಿ ಆತ್ಮಹತ್ಯೆ: ನೇತ್ರದಾನಕ್ಕೆ ಕುಟುಂಬದ ನಿರ್ಧಾರ..

ಹಾಸನ (www.vknews.in): ಪ್ರೀತಿಸಿ ಮದುವೆಯಾಗಿದ್ದಕ್ಕೆ ಪತಿಯ ಕುಟುಂಬದಿಂದ ನಿರಂತರ ಮಾನಸಿಕ ಕಿರುಕುಳ ಹಾಗೂ ಕೌಟುಂಬಿಕ ಕಲಹ ಎದುರಿಸುತ್ತಿದ್ದ ಯುವತಿಯೊಬ್ಬರು ತನ್ನ ಎರಡು ವರ್ಷದ ಮಗುವಿನೊಂದಿಗೆ ಆತ್ಮಹತ್ಯೆ ಮಾಡಿಕೊಂಡಿರುವ ದಾರುಣ ಘಟನೆ ಆಲೂರು ಪಟ್ಟಣದ ಹೌಸಿಂಗ್ ಬೋರ್ಡ್ ಕಾಲೋನಿಯಲ್ಲಿ ನಡೆದಿದೆ. ಮೃತರನ್ನು ಅನುಪಮಾ (27) ಹಾಗೂ ಅವರ ಎರಡು ವರ್ಷದ ಪುತ್ರ ಆರ್ಯನ್ ಎಂದು ಗುರುತಿಸಲಾಗಿದೆ. ಪ್ರೀತಿಸಿ ಮದುವೆಯಾಗಿದ್ದ ದಂಪತಿ.. ಆಲೂರು ತಾಲೂಕಿನ ಸಿಂಗಾಪುರ ಗ್ರಾಮದ ಅಕ್ಕಪಕ್ಕದ ಮನೆಯವರಾಗಿದ್ದ…

5ನೇ ತರಗತಿ ಬಾಲಕಿಯರಿಗೆ ಮೂತ್ರ ಕುಡಿಸಿದ ಸಹಪಾಠಿ..! – ದೂರು ನೀಡಿದಾಗ ‘10 ರೂ. ಚಾಕೊಲೇಟ್ ತಿನ್ನಿ’ ಎಂದ ಮುಖ್ಯೋಪಾಧ್ಯಾಯರು..!

ಗುಣಾ (www.vknews.in): ಮಧ್ಯಪ್ರದೇಶದ ಗುಣಾ ಜಿಲ್ಲೆಯ ಸರ್ಕಾರಿ ಪ್ರಾಥಮಿಕ ಶಾಲೆಯೊಂದರಲ್ಲಿ 5ನೇ ತರಗತಿಯ ಇಬ್ಬರು ವಿದ್ಯಾರ್ಥಿನಿಯರಿಗೆ ಸಹಪಾಠಿ ಬಾಲಕನೊಬ್ಬ ನೀರಿನ ಬಾಟಲಿಯಲ್ಲಿದ್ದ ಮೂತ್ರವನ್ನು ಕುಡಿಸಿದ ಆರೋಪ ಕೇಳಿಬಂದಿದೆ. ಈ ಬಗ್ಗೆ ಬಾಲಕಿಯರು ಮುಖ್ಯೋಪಾಧ್ಯಾಯರಿಗೆ ದೂರು ನೀಡಿದಾಗ, “ಬಾಯಿಯಲ್ಲಿ ಕೆಟ್ಟ ವಾಸನೆ ಬಂದರೆ 10 ರೂಪಾಯಿಯ ಚಾಕೊಲೇಟ್ ತಿನ್ನಿ” ಎಂದು ನಿರ್ಲಕ್ಷ್ಯದ ಹೇಳಿಕೆ ನೀಡಿದ್ದಾರೆ ಎನ್ನಲಾಗಿದೆ. ಅರಾನ್ ತಾಲೂಕಿನ ಶಾಲೆಯಲ್ಲಿ ಸೋಮವಾರ ಈ ಘಟನೆ ನಡೆದಿದೆ ಎಂದು…

SHOCKING NEWS: ಬ್ಯಾಂಕ್‌ ಎದುರೇ ಪತ್ನಿಗೆ ಗುಂಡಿಕ್ಕಿ ಹತ್ಯೆ: ಬಳಿಕ ತಂಗಿಯನ್ನೂ ಕೊಂದು ಪತಿ ಆತ್ಮಹತ್ಯೆ..!

ಲಕ್ನೋ (www.vknews.in) : ಉತ್ತರ ಪ್ರದೇಶದ ರಾಜಧಾನಿ ಲಕ್ನೋದಲ್ಲಿ ಕೌಟುಂಬಿಕ ಕಲಹದ ಹಿನ್ನೆಲೆಯಲ್ಲಿ ಭೀಕರ ಘಟನೆ ನಡೆದಿದೆ. ಬ್ಯಾಂಕ್‌ ಉದ್ಯೋಗಿಯೊಬ್ಬರು ತಮ್ಮ ಪತ್ನಿಯನ್ನು ಕಚೇರಿ ಬಳಿ ಗುಂಡಿಕ್ಕಿ ಹತ್ಯೆ ಮಾಡಿದ ಬಳಿಕ ಮನೆಗೆ ತೆರಳಿ ತಂಗಿಯನ್ನೂ ಗುಂಡಿಕ್ಕಿ ಕೊಂದು, ತಾವೂ ಗುಂಡು ಹಾರಿಸಿಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಗೋಮತಿನಗರದಲ್ಲಿ ನಡೆದಿದೆ. ಮೃತರನ್ನು ಎಸ್‌ಬಿಐ ಉದ್ಯೋಗಿ ಮಾನಸ್ ವಾಜಪೇಯಿ (38), ಅವರ ಪತ್ನಿ ಹಾಗೂ ಐಸಿಐಸಿಐ ಬ್ಯಾಂಕ್‌ ಉದ್ಯೋಗಿ ದಿವ್ಯಾ ಮಿಶ್ರಾ ಮತ್ತು…

ಪತಿಯ ಮನೆಯಲ್ಲಿ ಮಹಿಳೆ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆ: ವರದಕ್ಷಿಣೆ ಕಿರುಕುಳದ ಆರೋಪ; ಕುಟುಂಬದಿಂದ ನಿಗೂಢ ಸಾವಿನ ಶಂಕೆ..

ಕೊಟ್ಟಾಯಂ (www.vknews.in): ಪತಿಯ ಮನೆಯಲ್ಲಿ ಮಹಿಳೆಯೊಬ್ಬರು ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾದ ಘಟನೆ ಕೊಟ್ಟಾಯಂನಲ್ಲಿ ನಡೆದಿದೆ. ಮೃತರನ್ನು ಪೆರುಂಬವೂರು ಮೂಲದ ಆರ್ಯ ಎಂದು ಗುರುತಿಸಲಾಗಿದೆ. ಪ್ರಕರಣದ ಸಾವಿನ ಬಗ್ಗೆ ನಿಗೂಢತೆ ಇದೆ ಎಂದು ಮೃತರ ಕುಟುಂಬ ಆರೋಪಿಸಿದೆ. ಆರ್ಯ ಅವರು ನಟ್ಟಕಂ ನಿವಾಸಿ ದೀಪಕ್ ಬಾಬು ಅವರನ್ನು ವಿವಾಹವಾಗಿದ್ದರು. ಮದುವೆಯ ಬಳಿಕ ಪತಿಯ ತಾಯಿ ಹಾಗೂ ಅಜ್ಜಿ ವರದಕ್ಷಿಣೆ ವಿಚಾರವಾಗಿ ಕಿರುಕುಳ ನೀಡುತ್ತಿದ್ದರು ಎಂದು ಮಹಿಳೆಯ ಸಂಬಂಧಿಕರು ಆರೋಪಿಸಿದ್ದಾರೆ.…

ಶಿಕ್ಷಕರ ಹೊಡೆತಕ್ಕೆ 6 ವರ್ಷದ ಬಾಲಕ ಸಾವು..? – ತರಗತಿಯಲ್ಲೇ ಕುಸಿದು ಬಿದ್ದ ಪ್ರಥಮ ತರಗತಿ ವಿದ್ಯಾರ್ಥಿ..

ಅಮರಾವತಿ (www.vknews.in): ಮನೆಕೆಲಸ ಪೂರ್ಣಗೊಳಿಸದ ಕಾರಣ ಶಿಕ್ಷಕರೊಬ್ಬರು ಕೋಲಿನಿಂದ ಹೊಡೆದ ಬಳಿಕ ಆರು ವರ್ಷದ ಬಾಲಕ ತರಗತಿಯಲ್ಲೇ ಕುಸಿದು ಬಿದ್ದು ಮೃತಪಟ್ಟಿರುವ ಘಟನೆ ವಿಶಾಖಪಟ್ಟಣಂನ ಒನ್ ಟೌನ್ ಪ್ರದೇಶದ ಲಿಟಲ್ ಗಾರ್ಡನ್ ಶಾಲೆಯಲ್ಲಿ ನಡೆದಿದೆ. ಮೃತ ಬಾಲಕನನ್ನು ಪ್ರಣಯ್ ತೇಜ ಎಂದು ಗುರುತಿಸಲಾಗಿದ್ದು, ಆತ ಶಾಲೆಯ ಪ್ರಥಮ ತರಗತಿಯ ವಿದ್ಯಾರ್ಥಿಯಾಗಿದ್ದನು. ಮನೆಕೆಲಸ ಬರೆಯದ ಕಾರಣ ಶಿಕ್ಷಕರು ಬಾಲಕನಿಗೆ ಕೋಲಿನಿಂದ ಹೊಡೆದಿದ್ದಾರೆ ಎಂದು ಆರೋಪಿಸಲಾಗಿದೆ. ತರಗತಿಯಲ್ಲೇ ಅಸ್ವಸ್ಥ.. ಹೊಡೆತದ…

ಸೌದಿ ಅರೇಬಿಯಾ:ಸುಡು ಬಿಸಿಲಿನಿಂದ ಮುಕ್ತಿ; ಮರುಭೂಮಿ ನಾಡಿಗೆ ಶೀಘ್ರವೇ ಚಳಿಗಾಲದ ಆಗಮನ

ರಿಯಾದ್(www.vknews.in): ಸೌದಿ ಅರೇಬಿಯಾದ ಸುಡುವ ಶಾಖಕ್ಕೆ ವಿದಾಯ ಹೇಳುವ ಸಮಯ ಸನ್ನಿಹಿತವಾಗಿದೆ. ರಾಷ್ಟ್ರೀಯ ಹವಾಮಾನ ಕೇಂದ್ರದ ಅಧಿಕೃತ ವಕ್ತಾರ ಹುಸೇನ್ ಅಲ್-ಕಹ್ತಾನಿ, ಸುಡುವ ಶಾಖವು ಮುಗಿದು ಶರತ್ಕಾಲ ಬರುವ ಸಮಯ ಸನ್ನಿಹಿತವಾಗಿದೆ ಎಂದರು. ಹವಾಮಾನ ವೀಕ್ಷಣೆಯ ಪ್ರಕಾರ, ಶರತ್ಕಾಲವು ಸೆಪ್ಟೆಂಬರ್ 1 ರಂದು ಪ್ರಾರಂಭವಾಗುತ್ತದೆ. ಸೆಪ್ಟೆಂಬರ್ ಬೇಸಿಗೆ ಮತ್ತು ಶರತ್ಕಾಲದ ನಡುವಿನ ಪರಿವರ್ತನೆಯ ಹಂತದ ಆರಂಭವೆಂದು ಹೇಳಲಾಗುತ್ತಿದ್ದು, ಮುಂದಿನ ತಿಂಗಳುಗಳಲ್ಲಿ ಹೆಚ್ಚು ಮಧ್ಯಮ ಹವಾಮಾನ…

ಕೋಲಾರದಲ್ಲಿ ‘ಭಾರತ್ ಜೋಡೋ ಯುವ ಸಂಘ’ಗಳ ರಚನೆಗೆ ಚಾಲನೆ ಯುವಜನರ ನೋಂದಣಿಗೆ ಸಿಇಒ ಡಾ. ಪ್ರವೀಣ್ ಪಿ. ಬಾಗೇವಾಡಿ ಸೂಚನೆ

ಕೋಲಾರ (www.vknews.in): ರಾಜ್ಯ ಸರ್ಕಾರದ ಮಹತ್ವಾಕಾಂಕ್ಷಿ ಯೋಜನೆಯಾದ ‘ಭಾರತ್ ಜೋಡೋ ಯುವ ಸಂಘ’ಗಳ ರಚನೆಗೆ ಕೋಲಾರ ಜಿಲ್ಲೆಯಲ್ಲಿ ಚಾಲನೆ ನೀಡಲಾಗಿದ್ದು, ಈ ತಿಂಗಳ ಅಂತ್ಯದೊಳಗೆ ಅಗತ್ಯ ಕಾರ್ಯಕಾರಿ ಸಮಿತಿಗಳನ್ನು ರಚಿಸಲು ಅರ್ಹ ಯುವಕ – ಯುವತಿಯರನ್ನು ಹೆಚ್ಚಿನ ಸಂಖ್ಯೆಯಲ್ಲಿ ನೋಂದಾಯಿಸಿಕೊಳ್ಳುವಂತೆ ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಡಾ.ಪ್ರವೀಣ್ ಪಿ. ಬಾಗೇವಾಡಿ ಸೂಚಿಸಿದರು. ಯುವಜನರಲ್ಲಿ ಕ್ರೀಡೆ, ಸಂಸ್ಕೃತಿ, ವೈಜ್ಞಾನಿಕ ಮನೋಭಾವ, ಆರೋಗ್ಯ, ನಾಯಕತ್ವ ಹಾಗೂ ಸಾಮಾಜಿಕ…

ಎಲೆಕ್ಟ್ರಿಕ್ ವಿಮಾನ ಹಾರಾಟಕ್ಕೆ ಸಜ್ಜು: ಕೇವಲ ₹500 ವಿದ್ಯುತ್ ವೆಚ್ಚದಲ್ಲಿ 27 ನಿಮಿಷ ಪ್ರಯಾಣ.. ! – ಟಿಕೆಟ್ ಬೆಲೆ ಕೇಳಿದ್ರೆ ಶಾಕ್ ಆಗ್ತೀರಾ..!

ನವದೆಹಲಿ (www.vknews.in) : ವಿಮಾನ ಪ್ರಯಾಣವನ್ನು ಸಾಮಾನ್ಯ ಜನರಿಗೂ ಕೈಗೆಟುಕುವ ದರದಲ್ಲಿ ಒದಗಿಸುವ ನಿಟ್ಟಿನಲ್ಲಿ ಎಲೆಕ್ಟ್ರಿಕ್ ವಿಮಾನ ತಂತ್ರಜ್ಞಾನ ಹೊಸ ನಿರೀಕ್ಷೆ ಮೂಡಿಸಿದೆ. ಅಮೆರಿಕದ ಹಾರ್ಟ್ ಏರೋಸ್ಪೇಸ್ ಅಭಿವೃದ್ಧಿಪಡಿಸಿರುವ X1 ಎಲೆಕ್ಟ್ರಿಕ್ ವಿಮಾನವು ಪ್ರಾಯೋಗಿಕ ಹಾರಾಟ ನಡೆಸಿದ್ದು, 27 ನಿಮಿಷಗಳ ಹಾರಾಟಕ್ಕೆ ಕೇವಲ 5 ಅಮೆರಿಕನ್ ಡಾಲರ್‌ನಷ್ಟು ವಿದ್ಯುತ್ ವೆಚ್ಚವಾಗಿದೆ ಎಂದು ವರದಿಯಾಗಿದೆ. ಪ್ಲಾಟ್ಸ್‌ಬರ್ಗ್ ವಿಮಾನ ನಿಲ್ದಾಣದಲ್ಲಿ ನಡೆದ ಪರೀಕ್ಷಾರ್ಥ ಹಾರಾಟದಲ್ಲಿ X1 ವಿಮಾನವು…

‘ಒಂದು ತಿಂಗಳ ಹಿಂದೆ ನಾನು ದೇಶದ್ರೋಹಿಯಾಗಿದ್ದೆ ಅಲ್ಲವೇ?’ – NDA ಆಹ್ವಾನಕ್ಕೆ ಅಭಿಜೀತ್ ದೀಪ್ಕೆ ವ್ಯಂಗ್ಯ..!

ನವದೆಹಲಿ: (www.vknews.in) ಬಿಜೆಪಿ ಬೆಂಬಲಿತ ಎನ್‌ಡಿಎ ಮೈತ್ರಿಕೂಟದ ಅಂಗಪಕ್ಷವಾದ ರಿಪಬ್ಲಿಕನ್ ಪಾರ್ಟಿ ಆಫ್ ಇಂಡಿಯಾ (ಎ)ಗೆ ಸೇರ್ಪಡೆಯಾಗುವಂತೆ ಕೇಂದ್ರ ಸಚಿವ ರಾಮದಾಸ್ ಅಠಾವಳೆ ನೀಡಿರುವ ಆಹ್ವಾನಕ್ಕೆ ‘ಕಾಕ್ರಾಚ್ ಜನತಾ ಪಾರ್ಟಿ’ (CJP) ಸಂಸ್ಥಾಪಕ ಅಭಿಜೀತ್ ದೀಪ್ಕೆ ವ್ಯಂಗ್ಯಭರಿತ ಪ್ರತಿಕ್ರಿಯೆ ನೀಡಿದ್ದಾರೆ. ಅಠಾವಳೆ ಅವರ ಆಹ್ವಾನದ ಕುರಿತ ವರದಿಯನ್ನು ಇನ್‌ಸ್ಟಾಗ್ರಾಮ್‌ನಲ್ಲಿ ಹಂಚಿಕೊಂಡಿರುವ ಅಭಿಜೀತ್ ದೀಪ್ಕೆ, “ಕೇವಲ ಒಂದು ತಿಂಗಳ ಹಿಂದೆ ನಾನು ನಿಮಗೆ ದೇಶದ್ರೋಹಿಯಂತೆ…

BIG NEWS : 9 ಸಿಮ್ ಕಾರ್ಡ್ ಹೊಂದಿರುವವರಿಗೆ ಶಾಕ್: 10ನೇ ಸಿಮ್‌ಗೆ ಬ್ರೇಕ್.. – DoTನಿಂದ ಹೊಸ ನಿಯಮ..!

ನವದೆಹಲಿ: (www.vknews.in) ಮೊಬೈಲ್ ಸಿಮ್ ಬಳಕೆದಾರರಿಗೆ ಕೇಂದ್ರ ಸರ್ಕಾರ ಹೊಸ ನಿಯಮ ಜಾರಿಗೆ ತರಲು ಮುಂದಾಗಿದೆ. ಒಬ್ಬ ವ್ಯಕ್ತಿಯ ಹೆಸರಿನಲ್ಲಿ ಈಗಾಗಲೇ 9 ಮೊಬೈಲ್ ಸಂಪರ್ಕಗಳು ಇದ್ದರೆ, ಇನ್ನು ಮುಂದೆ 10ನೇ ಸಿಮ್ ಕಾರ್ಡ್ ಪಡೆಯಲು ಸಾಧ್ಯವಾಗುವುದಿಲ್ಲ. ಈ ಕುರಿತು ದೂರಸಂಪರ್ಕ ಇಲಾಖೆ (DoT) ಟೆಲಿಕಾಂ ಕಂಪನಿಗಳಿಗೆ ನಿರ್ದೇಶನ ನೀಡಿದೆ. ಆಗಸ್ಟ್ 24ರಿಂದ ಕಟ್ಟುನಿಟ್ಟಿನ ಜಾರಿ.. DoTನ ಹೊಸ ನಿರ್ದೇಶನದಂತೆ, 2026ರ ಆಗಸ್ಟ್ 24ರಿಂದ 9 ಸಿಮ್‌ಗಳ ಗರಿಷ್ಠ ಮಿತಿಯನ್ನು ತಲುಪಿರುವ ಗ್ರಾಹಕರು…

ಅಭಿಜಿತ್ ದೀಪ್ಕೆ ಜೊತೆ ಗಾಂಧೀಜಿ ಮರಿಮೊಮ್ಮಗ ತುಷಾರ್ ಗಾಂಧಿ ಭೇಟಿ: ‘ಬಾಪು ತತ್ತ್ವಗಳನ್ನು ಅಳವಡಿಸಿಕೊಂಡ ಯುವಪೀಳಿಗೆ’ಗೆ ಮೆಚ್ಚುಗೆ..!

ನವದೆಹಲಿ: (www.vknews.in) ಮಹಾತ್ಮ ಗಾಂಧೀಜಿಯವರ ಮರಿಮೊಮ್ಮಗ ತುಷಾರ್ ಗಾಂಧಿ ಅವರು ಜಂತರ್‌ ಮಂತರ್‌ನಲ್ಲಿ ನಡೆದ ಯುವಜನರ ಪ್ರತಿಭಟನೆಯನ್ನು ಉಲ್ಲೇಖಿಸಿ, ಇಂದಿನ Gen Z ಯುವಪೀಳಿಗೆ ರಾಷ್ಟ್ರಪಿತನ ಸತ್ಯ ಮತ್ತು ಅಹಿಂಸೆಯ ತತ್ವಗಳನ್ನು ನಿಜವಾದ ಅರ್ಥದಲ್ಲಿ ಅಳವಡಿಸಿಕೊಂಡಿದೆ ಎಂದು ಪ್ರಶಂಸೆ ವ್ಯಕ್ತಪಡಿಸಿದ್ದಾರೆ. ಕಾಕ್‌ರೋಚ್ ಜನತಾ ಪಾರ್ಟಿ (CJP) ಸಂಸ್ಥಾಪಕ ಅಭಿಜಿತ್ ದೀಪ್ಕೆ ಅವರೊಂದಿಗೆ ನಡೆದ ಸಭೆಯ ಬಳಿಕ ಮಾಧ್ಯಮಗಳೊಂದಿಗೆ ಮಾತನಾಡಿದ ತುಷಾರ್ ಗಾಂಧಿ, ಈವರೆಗೆ ಗಾಂಧೀಜಿಯವರನ್ನು…

BIG NEWS : ಗೃಹಲಕ್ಷ್ಮಿ ಫಲಾನುಭವಿಗಳಿಗೆ ಮಹತ್ವದ ಸುದ್ದಿ: ಶೀಘ್ರದಲ್ಲೇ ಅರ್ಜಿ ಮರುಪರಿಶೀಲನೆ ಆರಂಭ..!

ಬೆಂಗಳೂರು: (www.vknews.in) ಗೃಹಲಕ್ಷ್ಮಿ ಯೋಜನೆಯಡಿ ಅರ್ಜಿ ಸಲ್ಲಿಸಿರುವ ಫಲಾನುಭವಿಗಳಿಗೆ ರಾಜ್ಯ ಸರ್ಕಾರ ಮಹತ್ವದ ಮಾಹಿತಿ ನೀಡಿದೆ. ಯೋಜನೆಯಡಿ ಸಲ್ಲಿಕೆಯಾಗಿರುವ ಅರ್ಜಿಗಳಲ್ಲಿನ ವಿವರಗಳನ್ನು ಮತ್ತೊಮ್ಮೆ ಪರಿಶೀಲಿಸುವ ಪ್ರಕ್ರಿಯೆಗೆ ಶೀಘ್ರದಲ್ಲೇ ಚಾಲನೆ ನೀಡಲು ಸರ್ಕಾರ ಸಿದ್ಧತೆ ನಡೆಸಿದೆ. ಅರ್ಜಿ ಮರುಪರಿಶೀಲನೆಗಾಗಿ ಸೇವಾ ಸಿಂಧು ಕೇಂದ್ರಗಳ ಜತೆಗೆ ಮನೆಮನೆಗೆ ತೆರಳಿ ಫಲಾನುಭವಿಗಳ ಮಾಹಿತಿ ಪರಿಶೀಲಿಸುವ ವ್ಯವಸ್ಥೆಯನ್ನೂ ಕೈಗೊಳ್ಳಲಾಗುತ್ತಿದೆ ಎಂದು ತಿಳಿದುಬಂದಿದೆ. ಅರ್ಹ…

BIG NEWS : ಇರಾನ್‌ ಯುದ್ಧದಿಂದ ಅಮೆರಿಕದ ಸಾಲದ ಹೊರೆ ಮತ್ತಷ್ಟು ಹೆಚ್ಚಳ: $40 ಟ್ರಿಲಿಯನ್ ಗಡಿ ದಾಟಿದ ಸಾಲ..!

ವಾಷಿಂಗ್ಟನ್: (www.vknews.in) ಅಮೆರಿಕದ ರಾಷ್ಟ್ರೀಯ ಸಾಲವು ಹೊಸ ದಾಖಲೆ ನಿರ್ಮಿಸಿದ್ದು, ಇದೇ ಮೊದಲ ಬಾರಿಗೆ $40 ಟ್ರಿಲಿಯನ್ (40 ಲಕ್ಷ ಕೋಟಿ ಡಾಲರ್) ಗಡಿಯನ್ನು ದಾಟಿದೆ. ನಿರಂತರವಾಗಿ ಹೆಚ್ಚುತ್ತಿರುವ ರಕ್ಷಣಾ ವೆಚ್ಚ, ಸೋಶಿಯಲ್ ಸೆಕ್ಯೂರಿಟಿ, ಮೆಡಿಕೇರ್ ಸೇರಿದಂತೆ ಸಾಮಾಜಿಕ ಕಲ್ಯಾಣ ಯೋಜನೆಗಳ ವೆಚ್ಚ ಹಾಗೂ ಫೆಡರಲ್ ಕೊರತೆಯ ಮೇಲಿನ ಬಡ್ಡಿ ಪಾವತಿ ಹೆಚ್ಚಳವು ಸಾಲದ ಪ್ರಮಾಣ ಏರಿಕೆಗೆ ಪ್ರಮುಖ ಕಾರಣಗಳಾಗಿವೆ. ಮಾರ್ಚ್‌ನಲ್ಲಿ ಅಮೆರಿಕದ ರಾಷ್ಟ್ರೀಯ ಸಾಲ $39 ಟ್ರಿಲಿಯನ್ ತಲುಪಿತ್ತು. ಕೇವಲ…

ನಾಥೂರಾಮ್ ಗೋಡ್ಸೆ RSS ಸದಸ್ಯರಾಗಿದ್ದರು ಎಂದ ಸಾವರ್ಕರ್ ಮೊಮ್ಮಗ; ಸ್ಪಷ್ಟನೆಗೆ ಕಾಂಗ್ರೆಸ್ ಆಗ್ರಹ..

ಮುಂಬೈ (www.vknews.in): ಮಹಾತ್ಮ ಗಾಂಧೀಜಿ ಹತ್ಯೆ ಪ್ರಕರಣದ ಪ್ರಮುಖ ಆರೋಪಿ ನಾಥೂರಾಮ್ ಗೋಡ್ಸೆ ಅವರು ರಾಷ್ಟ್ರೀಯ ಸ್ವಯಂಸೇವಕ ಸಂಘದ (RSS) ಸದಸ್ಯರಾಗಿದ್ದರು ಎಂದು ವಿ.ಡಿ. ಸಾವರ್ಕರ್ ಅವರ ಮೊಮ್ಮಗ ಸತ್ಯಕಿ ಸಾವರ್ಕರ್ ಹೇಳಿರುವುದು ಇದೀಗ ರಾಜಕೀಯ ಚರ್ಚೆಗೆ ಕಾರಣವಾಗಿದೆ. ಈ ಹೇಳಿಕೆ ಕುರಿತು RSS ಸ್ಪಷ್ಟನೆ ನೀಡಬೇಕು ಎಂದು ಕಾಂಗ್ರೆಸ್ ಆಗ್ರಹಿಸಿದೆ. ರಾಹುಲ್ ಗಾಂಧಿ ವಿರುದ್ಧದ ಮಾನನಷ್ಟ ಪ್ರಕರಣದ ವಿಚಾರಣೆ ವೇಳೆ ಪ್ರತಿವಾದಿ ವಕೀಲರ ಪ್ರಶ್ನೆಗೆ ಉತ್ತರಿಸಿದ ಸತ್ಯಕಿ ಸಾವರ್ಕರ್, ನಾಥೂರಾಮ್…

ಪ್ರಶ್ನೆಪತ್ರಿಕೆ ಸೋರಿಕೆ, ‘ಚಂದಾ ಚೋರಿ’ ವಿರುದ್ಧ ರಾಷ್ಟ್ರವ್ಯಾಪಿ ಪ್ರತಿಭಟನೆಗೆ ಕಾಂಗ್ರೆಸ್ ನಿರ್ಧಾರ; ‘ವಂದೇ ಮಾತರಂ’ ಮೊದಲ ಎರಡು ಚರಣಗಳಿಗೆ ಮಾತ್ರ ಸೀಮಿತ..

ನವದೆಹಲಿ (www.vknews.in): ನೀಟ್ ಸೇರಿದಂತೆ ಸ್ಪರ್ಧಾತ್ಮಕ ಪರೀಕ್ಷೆಗಳ ಪ್ರಶ್ನೆಪತ್ರಿಕೆ ಸೋರಿಕೆ, ರಾಮಮಂದಿರ ದೇಣಿಗೆಯಲ್ಲಿ ಅಕ್ರಮದ ಆರೋಪ ಸೇರಿದಂತೆ ಹಲವು ವಿಷಯಗಳನ್ನು ಮುಂದಿಟ್ಟುಕೊಂಡು ರಾಷ್ಟ್ರವ್ಯಾಪಿ ಪ್ರತಿಭಟನೆ ನಡೆಸಲು ಕಾಂಗ್ರೆಸ್ ನಿರ್ಧರಿಸಿದೆ. ಇದರ ಜೊತೆಗೆ ಪಕ್ಷದ ಕಾರ್ಯಕ್ರಮಗಳಲ್ಲಿ ‘ವಂದೇ ಮಾತರಂ’ ಗೀತೆಯ ಮೊದಲ ಎರಡು ಚರಣಗಳನ್ನು ಮಾತ್ರ ಹಾಡಲು ಕಾಂಗ್ರೆಸ್ ಕಾರ್ಯಕಾರಿ ಸಮಿತಿ (CWC) ನಿರ್ಣಯ ಕೈಗೊಂಡಿದೆ. ಕಾಂಗ್ರೆಸ್ ಕಾರ್ಯಕಾರಿ ಸಮಿತಿಯ ಸುಮಾರು ನಾಲ್ಕು ಗಂಟೆಗಳ…