# mangalore (blogs) — RSS Amplifier

Recent posts from the 1 feeds in the RSS Amplifier directory that cover mangalore.

Page: <https://rssamplifier.com/topics/mangalore/blogs>  
Feed: <https://rssamplifier.com/topics/mangalore/blogs.md>

---

## [ಬಂಟ್ವಾಳ : ಫೋಟೋ ಗ್ರಾಫರ್ಸ್ ಎಸೋಸಿಯೇಶನ್ ವತಿಯಿಂದ ಕ್ಷಯರೋಗಿಗೆ ಪೌಷ್ಠಿಕ ಆಹಾರ ಸಾಮಾಗ್ರಿ ವಿತರಣೆ](https://www.karavalitimes.in/2026/08/Food-Kit-Disribute-by-SKPA.html)

_2026-08-22 · karavali Times · Karavali Times_

ಬಂಟ್ವಾಳ, ಆಗಸ್ಟ್ 22, 2026 (ಕರಾವಳಿ ಟೈಮ್ಸ್) : ಸೌತ್ ಕೆನರಾ ಫೆÇೀಟೋಗ್ರಾಫರ್ಸ್ ಎಸೋಸಿಯೇಷನ್ ರಿ. ಬಂಟ್ವಾಳ ವಲಯದ ವತಿಯಿಂದ ಕೈಕಂಬ ಸರಕಾರಿ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಭಾರತ ಸರಕಾರದ ಅಕ್ಷಯ್ ಮಿತ್ರ ಯೋಜನೆಯಡಿಲ್ಲಿನ ಕ್ಷಯರೋಗಿಗೆ ಒಂದು ತಿಂಗಳ ಪೌಷ್ಟಿಕ ಆಹಾರ ಸಾಮಾಗ್ರಿಯನ್ನು ವಿತರಿಸಲಾಯಿತು. ಈ ಸಂದರ್ಭ ವಲಯದ ಅಧ್ಯಕ್ಷ ರಾಜೇಂದ್ರ ಕೆ, ವೈದ್ಯಾಧಿಕಾರಿ ಡಾ ಅಶ್ವಿನಿ ಬಾಲಕೃಷ್ಣ, ಮಾಜಿ ಅಧ್ಯಕ್ಷರುಗಳಾದ ದಯಾನಂದ್ ಬಂಟ್ವಾಳ್, ಹರೀಶ್ ಕುಂದರ್, ಗೌರವಾಧ್ಯಕ್ಷ ಕಿಶೋರ್ ಕುಮಾರ್,…

## [ವಿಟ್ಲ : ಫೋಟೋಗ್ರಾಫರ್ಸ್ ಎಸೋಸಿಯೇಶನ್ ವತಿಯಿಂದ ವಿಶ್ವ ಛಾಯಾಗ್ರಹಣ ದಿನಾಚರಣೆ](https://www.karavalitimes.in/2026/08/Photo-graphers-Day-in-Bantwal.html)

_2026-08-22 · karavali Times · Karavali Times_

ಬಂಟ್ವಾಳ, ಆಗಸ್ಟ್ 22, 2026 (ಕರಾವಳಿ ಟೈಮ್ಸ್) : ಕೆನರಾ ಫೆÇೀಟೋಗ್ರಾಫರ್ಸ್ ಎಸೋಸಿಯೇಷನ್ ರಿ. ದ.ಕ. ಉಡುಪಿ ಜಿಲ್ಲೆ. ಬಂಟ್ವಾಳ ವಲಯದ ವತಿಯಿಂದ ವಿಶ್ವ ಛಾಯಗ್ರಹಣ ದಿನಾಚರಣೆಯನ್ನು ವಿಟ್ಲದ ಐಬಿ (ನಿರೀಕ್ಷಣಾ ಮಂದಿರ) ದಲ್ಲಿ ನಡೆಯಿತು. ಇದೇ ವೇಳೆ ವಲಯದ ಹಿರಿಯ ಛಾಯಾಗ್ರಾಹಕ ಕೃಷ್ಣ ಭಟ್ ಅವರನ್ನು ಗೌರವಿಸಲಾಯಿತು. ಈ ಸಂಧರ್ಭ ವಲಯದ ಅಧ್ಯಕ್ಷ ರಾಜೇಂದ್ರ ಕೆ, ಜಿಲ್ಲಾ ಕ್ರೀಡಾ ಕಾರ್ಯದರ್ಶಿ ಹರೀಶ್ ಕುಂದರ್, ಜಿಲ್ಲಾ ಕಟ್ಟದ ಸಮಿತಿ ಅಧ್ಯಕ್ಷ ಆನಂದ್ ಯಾನ್, ಗೌರವಧ್ಯಕ್ಷ ಕಿಶೋರ್, ಪ್ರಧಾನ…

## [ಪೆರ್ನೆ : ಕಾರು ಡಿಕ್ಕಿ ಹೊಡೆದು ಸ್ಕೂಟರ್ ಸವಾರ ಆಸ್ಪತ್ರೆಗೆ](https://www.karavalitimes.in/2026/08/Accident-in-Perne-Scooter-Driver-Injured.html)

_2026-08-22 · karavali Times · Karavali Times_

ಬಂಟ್ವಾಳ, ಆಗಸ್ಟ್ 22, 2026 (ಕರಾವಳಿ ಟೈಮ್ಸ್) : ತಾಲೂಕಿನ ಪೆರ್ನೆ ಎಂಬಲ್ಲಿ ಹೆದ್ದಾರಿಯಲ್ಲಿ ಯಾವುದೇ ಬ್ಯಾರಿಕೇಡ್, ಸೂಚನಾ ಫಲಕ ಅಳವಡಿಸದೆ ಹಿಟಾಚಿ ಚಾಲಕ ರಸ್ತೆ ಕೆಲಸ ಮಾಡುತ್ತಿದ್ದ ಕಾರಣ ಹೆದ್ದಾರಿಯಲ್ಲಿ ಬರುತ್ತಿದ್ದ ಸ್ಕೂಟರ್ ಚಾಲಕ ನಿಲ್ಲಿಸಿದಾಗ ಹಿಂದಿನಿಂದ ಬರುತ್ತಿದ್ದ ಕಾರು ಡಿಕ್ಕಿ ಹೊಡೆದ ಪರಿಣಾಮ ಸ್ಕೂಟರ್ ಸವಾರ ಗಾಯಗೊಂಡ ಘಟನೆ ಆಗಸ್ಟ್ 21 ರಂದು ಸಂಭವಿಸಿದೆ. ಗಾಯಗೊಂಡ ಸ್ಕೂಟರ್ ಸವಾರನನ್ನು ಕೆದಿಲ ಗ್ರಾಮದ ಗಡಿಯಾರ ನಿವಾಸಿ ಅಬೂಬಕ್ಕರ್ ಎಂದು ಹೆಸರಿಸಲಾಗಿದೆ. ಇವರು…

## [9 ವರ್ಷಗಳಿಂದ ತಲೆಮರೆಸಿಕೊಂಡಿದ್ದ ವಾರಂಟ್ ಆರೋಪಿ ಪೂಂಜಾಲಕಟ್ಟೆ ಪೊಲೀಸರ ಬಲೆಗೆ](https://www.karavalitimes.in/2026/08/Warrant-Accused-Arrest-after-9-Yrs.html)

_2026-08-22 · karavali Times · Karavali Times_

ಬಂಟ್ವಾಳ, ಆಗಸ್ಟ್ 22, 2026 (ಕರಾವಳಿ ಟೈಮ್ಸ್) : ಪೂಂಜಾಲಕಟ್ಟೆ ಪೊಲೀಸ್ ಠಾಣಾ ಪ್ರಕರಣದಲ್ಲಿ ಆರೋಪಿಯಾಗಿ ನ್ಯಾಯಾಲಯಕ್ಕೆ ವಿಚಾರಣೆಗೆ ಹಾಜರಾಗದೇ ಸುಮಾರು 9 ವರ್ಷಗಳಿಂದ ತಲೆಮರೆಸಿಕೊಂಡಿದ್ದ ವಾರೆಂಟ್ ಆರೋಪಿ ಚಿಕ್ಕಮಗಳೂರು ಜಿಲ್ಲೆಯ ಮೂಡಿಗೆರೆ ನಿವಾಸಿ ಶಬೀರ್ ಎಂಬಾತನನ್ನು ಪೊಲೀಸರು ಬಂಧಿಸಿದ್ದಾರೆ. ಪೂಂಜಾಲಕಟ್ಟೆ ಠಾಣಾ ಎಚ್ ಸಿ ರಾಜೇಶ್, ಪಿಸಿ ಚೋಳಪ್ಪ ಸಂಶಿ, ನಾಗರಾಜ್ ಅವರುಗಳು ಆರೋಪಿಯನ್ನು ಚಿಕ್ಕಮಗಳೂರಿನಲ್ಲಿ ದಸ್ತಗಿರಿ ಮಾಡಿ ಆಗಸ್ಟ್ 22 ರಂದು ನ್ಯಾಯಾಲಯಕ್ಕೆ ಹಾಜರುಪಡಿಸಿದ್ದು,…

## [ಮಲ್ಲಿಮೊಗರು ರಸ್ತೆ ಬದಿ ತಡೆಗೋಡೆ ಕುಸಿತ : ಕಳಪೆ ಕಾಮಗಾರಿ ಕಾರಣ ಎಂದ ಸ್ಥಳೀಯರು](https://www.karavalitimes.in/2026/08/Road-Damage-in-Mallimogaru.html)

_2026-08-22 · karavali Times · Karavali Times_

ಬಂಟ್ವಾಳ, ಆಗಸ್ಟ್ 22, 2026 (ಕರಾವಳಿ ಟೈಮ್ಸ್) : ತಾಲೂಕಿನ ಸೋರ್ನಾಡು ಸಮೀಪದ ಭಂಡಸಾಲೆ-ಪಾಲೆದಗುರಿ ರಸ್ತೆ ನಡುವಿನ ಮಲ್ಲಿಮೊಗರು ಎಂಬಲ್ಲಿ ರಸ್ತೆ ಬದಿ ನಿರ್ಮಾಣಗೊಂಡ ತಡೆಗೋಡೆ ಮಳೆಗೆ ಕುಸಿದು ಬಿದ್ದ ಪರಿಣಾಮ ಸ್ಥಳೀಯ ನಿವಾಸಿ ವಿಜಯಲಕ್ಷ್ಮಿ ಸಾಮಾನಿ ಅವರ ಹಟ್ಟಿ ಸಂಪೂರ್ಣ ಹಾ£ಗೀಡಾಗಿದೆ. ಕಳಪೆ ಕಾಮಗಾರಿ ಅನಾಹುತಕ್ಕೆ ಕಾರಣ ಎಂದು ಸ್ಥಳೀಯರು ದೂರಿದ್ದಾರೆ.

## [ದಲಿತರಿಗೆ ಡೀಸಿ ಮನ್ನಾ ಜಮೀನು ಹೇಗೂ ಸಿಗುತ್ತಿಲ್ಲ, ಅಕ್ರಮ-ಸಕ್ರಮ ಮೂಲಕವಾದರೂ ಜಮೀನು ಕೊಡಿ : ದಲಿತ ಮುಖಂಡ ಮೋಹನ್ ಚೆಂಡ್ತಿಮಾರ್ ಡೀಸಿಗೆ ಆಗ್ರಹ](https://www.karavalitimes.in/2026/08/SC-ST-Meeting-by-DC-in-Bantwal.html)

_2026-08-22 · karavali Times · Karavali Times_

ಜಿಲ್ಲಾಧಿಕಾರಿ ನೇತೃತ್ವದಲ್ಲಿ ಬಂಟ್ವಾಳದಲ್ಲಿ ಎಸ್ಸಿ-ಎಸ್ಟಿ ಕುಂದುಕೊರತೆ ಸಭೆ ಬಂಟ್ವಾಳ, ಆಗಸ್ಟ್ 22, 2026 (ಕರಾವಳಿ ಟೈಮ್ಸ್) : ಜಿಲ್ಲೆಯಲ್ಲಿ ದಲಿತರಿಗೆ ಹಲವು ವರ್ಷಗಳಿಂದ ಯಾವುದೇ ಡೀಸಿ ಮನ್ನಾ ಜಮೀನು ಸಾಕಷ್ಟು ಹೋರಾ ಮಾಡಿದರೂ ದೊರೆಯುತ್ತಿಲ್ಲ. ಈಗಾಗಲೇ ದಲಿತ ಕುಟುಂಬಗಳಿಗೆ ದೊರೆತ ಜಮೀನಿನ ಸುತ್ತ ಇರುವ ಅಲ್ಪ ಸ್ವಲ್ಪ ಲಗ್ತಿ ಜಮೀನನ್ನಾದರೂ ಅಕ್ರಮ-ಸಕ್ರಮ ಯೋಜನೆಯ ಮೂಲಕ ದೊರಕಿಸಿಕೊಡಲು ಕ್ರಮ ಕೈಗೊಳ್ಳಿ ಎಂದು ದಲಿತ ಮುಖಂಡ ಮೋಹನ್ ಚೆಂಡ್ತಿಮಾರ್ ಅವರು ಜಿಲ್ಲಾಧಿಕಾರಿ ದರ್ಶನ್ ಅವರಿಗೆ…

## [ಪುತ್ತೂರು ಜೆರಾಕ್ಸ್ ಅಂಗಡಿ ಘರ್ಷಣೆಗೆ ಸಂಬಂಧಿಸಿದಂತೆ ದೂರು-ಪ್ರತಿದೂರು, ಸುಮೋಟೋ ಪ್ರಕರಣಗಳು ದಾಖಲು, ಓರ್ವ ಆರೋಪಿ ಅರೆಸ್ಟ್](https://www.karavalitimes.in/2026/08/Puttur-Clash-3-FIR-One-Arrest.html)

_2026-08-22 · karavali Times · Karavali Times_

ಪುತ್ತೂರು, ಆಗಸ್ಟ್ 22, 2026 (ಕರಾವಳಿ ಟೈಮ್ಸ್) : ಇಲ್ಲಿನ ನಗರ ಠಾಣಾ ವ್ಯಾಪ್ತಿಯ ದರ್ಬೆಯಲ್ಲಿ ಅಗಸ್ಟ್ 21 ರಂದು ಮಧ್ಯಾಹ್ನ ವೇಳೆ ನಡೆದ ಘರ್ಷಣೆಗೆ ಸಂಬಂಧಿಸಿದಂತೆ ಮೂರು ಪ್ರತ್ಯೇಕ ಪ್ರಕರಣಗಳು ದಾಖಲಾಗಿವೆ. ಮೊದಲ ಪ್ರಕರಣದಲ್ಲಿ ಸುಳ್ಯ ಜಾಲ್ಸೂರು ನಿವಾಸಿ ಫಾತಿಮತ್ ಮಿಸ್ವಾನ (32) ಎಂಬವರು ದೂರು ನೀಡಿದ್ದು, ಇವರು ಆಗಸ್ಟ್ 21 ರಂದು ತನ್ನ ಸಹೋದರ ಹಾಗೂ ತಂಗಿಯೊಂದಿಗೆ ಪುತ್ತೂರಿಗೆ ಬಂದಿದ್ದವರು ಮಧ್ಯಾಹ್ನ ವೇಳೆ, ಕೆಲ ದಾಖಲಾತಿಗಳನ್ನು ಪ್ರಿಂಟ್ ತೆಗೆಸಲು ಹಾಗೂ ಲ್ಯಾಮಿನೇಷನ್ ಮಾಡಿಸಲು,…

## [ಪುತ್ತೂರು ಝೆರಾಕ್ಸ್ ಅಂಗಡಿ ಪ್ರಮಾದದಿಂದ ಘರ್ಷಣೆ : ಸೀಸಿ ಟಿವಿ ಫೂಟೇಜ್ ಸಂಗ್ರಹಿಸಿ ಕ್ರಮ, ವದಂತಿ ಹಬ್ಬಿದರೆ ಕಠಿಣ ಕ್ರಮ : ಜಿಲ್ಲಾ ಎಸ್ಪಿ ಎಚ್ಚರಿಕೆ](https://www.karavalitimes.in/2026/08/Crime-news-in-puttur-town-limit.html)

_2026-08-21 · lk · Karavali Times_

ಪುತ್ತೂರು, ಆಗಸ್ಟ್ 22, 2026 (ಕರಾವಳಿ ಟೈಮ್ಸ್) : ಪುತ್ತೂರು-ದರ್ಬೆಯ ಝೆರಾಕ್ಸ್ ಅಂಗಡಿಯಲ್ಲಿ ನಡೆದ ಪ್ರಮಾದಕ್ಕೆ ಸಂಬಂಧಿಸಿದಂತೆ ಎರಡು ಗುಂಪಿನ ನಡುವೆ ಘರ್ಷಣೆ ನಡೆದಿದ್ದು, ಪೊಲೀಸರು ತಕ್ಷಣ ಸ್ಥಳಕ್ಕಾಗಮಿಸಿ ಪರಿಸ್ಥಿತಿ ತಿಳಿಗೊಳಿಸಿದ ಘಟನೆ ಆಗಸ್ಟ್ 21 ರಂದು ಮಧ್ಯಾಹ್ನ ವೇಳೆ ನಡೆದಿದೆ. ಆಗಸ್ಟ್ 21 ರಂದು ಮಧ್ಯಾಹ್ನ ವೇಳೆ ಸುಳ್ಯ ಮಂಡೆಕೋಲು ನಿವಾಸಿಗಳಾದ ಮುಬಾಶಿರ, ಫಾತೀಮಾ ಹಾಗೂ ಮುಬಾಶಿರ್ ಎಂಬವರುಗಳು ಪುತ್ತೂರು ದರ್ಭೆ ಎಂಬಲ್ಲಿರುವ ಅಂಜನಾ ಪೈ ಎಂಬವರ “Dream destination digital…

## [ನೈರುತ್ಯ ರೈಲ್ವೆಯ ಮೈಸೂರು ವಿಭಾಗಕ್ಕೆ ಮಂಗಳೂರು ರೈಲ್ವೇ ಪ್ರದೇಶ ಸೇರ್ಪಡೆ : ಕರಾವಳಿ ಕರ್ನಾಟಕದ ರೈಲ್ವೆ ಬೇಡಿಕೆಗೆ ಐತಿಹಾಸಿಕ ಸ್ಪಂದನೆ ಎಂದ ಸಚಿವ ಸೋಮಣ್ಣ](https://www.karavalitimes.in/2026/08/Mangalore-Now-Mysore-Railway-Devision.html)

_2026-08-21 · karavali Times · Karavali Times_

ಬೆಂಗಳೂರು, ಆಗಸ್ಟ್ 21, 2026 (ಕರಾವಳಿ ಟೈಮ್ಸ್) : ಕರಾವಳಿ ಕರ್ನಾಟಕದ ಸಾರ್ವಜನಿಕರ ಹಾಗೂ ರೈಲು ಪ್ರಯಾಣಿಕರ ಬಹುದಿನಗಳ ಬೇಡಿಕೆಯನ್ನು ಈಡೇರಿಸುವ ನಿಟ್ಟಿನಲ್ಲಿ ಕೇಂದ್ರ ಸರ್ಕಾರವು ಅತ್ಯಂತ ಐತಿಹಾಸಿಕ ಹಾಗೂ ಮಹತ್ವದ ನಿರ್ಧಾರ ಕೈಗೊಂಡಿದೆ ಎಂದು ಕೇಂದ್ರ ರೈಲ್ವೆ ರಾಜ್ಯ ಸಚಿವ ವಿ. ಸೋಮಣ್ಣ ತಿಳಿಸಿದ್ದಾರೆ. ರೈಲ್ವೆ ರಾಜ್ಯ ಸಚಿವರಾಗಿ ಅಧಿಕಾರ ವಹಿಸಿಕೊಂಡ ತಕ್ಷಣವೇ ಮಂಗಳೂರು ಪ್ರದೇಶದ ಆಡಳಿತಾತ್ಮಕ ಗೊಂದಲಗಳನ್ನು ನಿವಾರಿಸುವುದು ತಮ್ಮ ಪ್ರಮುಖ ಆದ್ಯತೆಗಳಲ್ಲಿ ಒಂದಾಗಿತ್ತು ಎಂದು ಸಚಿವರು…

## [ಬಂಟ್ವಾಳ : ವಂದೇ ಭಾರತ್ ಪ್ರಾಯೋಗಿಕ ಸಂಚಾರ ಹಾಗೂ ಅಮೃತ ಭಾರತ್ ನಿಲ್ದಾಣ ಯೋಜನೆ ಕಾಮಗಾರಿ ಪರಿಶೀಲಿಸಿದ ರೈಲ್ವೆ ಪ್ರಧಾನ ವ್ಯವಸ್ಥಾಪಕ ಅನಂತ್](https://www.karavalitimes.in/2026/08/Ananth-Visit-Bantwal-Railway-Station.html)

_2026-08-21 · karavali Times · Karavali Times_

ಬಂಟ್ವಾಳ, ಆಗಸ್ಟ್ 21, 2026 (ಕರಾವಳಿ ಟೈಮ್ಸ್) : ನೈಋತ್ಯ ರೈಲ್ವೆಯ ಪ್ರಧಾನ ವ್ಯವಸ್ಥಾಪಕ ಪಿ. ಅನಂತ್ ಅವರು ಸಕಲೇಶಪುರ-ಸುಬ್ರಹ್ಮಣ್ಯ ರೋಡ್ ವಿಭಾಗದಲ್ಲಿ ವಂದೇ ಭಾರತ್ ರೈಲಿನ ಪ್ರಾಯೋಗಿಕ ಸಂಚಾರವನ್ನು ಪರಿಶೀಲಿಸಿ, ವಿಭಾಗದಲ್ಲಿ ಕೈಗೊಳ್ಳಲಾಗುತ್ತಿರುವ ವಿವಿಧ ಮೂಲಸೌಕರ್ಯ ಹಾಗೂ ಪ್ರಯಾಣಿಕರ ಸೌಲಭ್ಯಗಳ ಕಾಮಗಾರಿಗಳನ್ನು ಪರಿಶೀಲಿಸಿದರು. ಪಶ್ಚಿಮ ಘಟ್ಟಗಳ ಮೂಲಕ ಹಾದುಹೋಗುವ ಸಕಲೇಶಪುರ-ಸುಬ್ರಹ್ಮಣ್ಯ ರೋಡ್ ರೈಲು ಮಾರ್ಗವು ಇಳಿಜಾರು, ಸುರಂಗಗಳು, ಸೇತುವೆಗಳು ಹಾಗೂ ತಿರುವುಗಳನ್ನು ಒಳಗೊಂಡಿರುವ…

## [Meet Claude, an AI assistant (Sponsored)](https://crawlproof.com/a/kgcy2LGJrHdR)

_2026-08-21 · **Sponsored**_

Chat with Claude at claude.ai — a conversational AI assistant.

## [ದ.ಕ. ಜಿಲ್ಲೆಯಲ್ಲಿ ಮಳೆ ರಜೆ ಸರಿದೂಗಿಸಲು ಸೆಪ್ಟೆಂಬರ್ 2ನೇ ವಾರದಿಂದ ಶನಿವಾರ ಪೂರ್ತಿ ತರಗತಿ, ಇತರೆ ದಿನ ಸಂಜೆ ಒಂದು ಹೆಚ್ಚುವರಿ ತರಗತಿ ನಡೆಸಲು ಶಿಕ್ಷಣ ಇಲಾಖೆ ಆದೇಶ](https://www.karavalitimes.in/2026/08/Extra-Class-in-DK-from-Sep-2nd-Week.html)

_2026-08-21 · karavali Times · Karavali Times_

ಮಂಗಳೂರು, ಆಗಸ್ಟ್ 21, 2026 (ಕರಾವಳಿ ಟೈಮ್ಸ್) : ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಮಳೆ ಹಿನ್ನಲೆಯಲ್ಲಿ ನೀಡಲಾಗಿರುವ ರಜೆಗಳನ್ನು ಸರಿದೂಗಿಸಲು ಸೆಪ್ಟೆಂಬರ್ ತಿಂಗಳ 2ನೇ ಶನಿವಾರದಿಂದ ಶನಿವಾರ ಅಪರಾಹ್ನ ಪೂರ್ಣ ಹೆಚ್ಚುವರಿ ಬೋಧನಾ ತರಗತಿ ನಡೆಸಲು ಹಾಗೂ ಇತರೆ ದಿನಗಳಲ್ಲಿ ವಿದ್ಯಾರ್ಥಿಗಳಿಗೆ ತೊಂದರೆಯಾಗದಂತೆ ಸಂಜೆ ಹೆಚ್ಚುವರಿ ಒಂದು ತರಗತಿ ನಡೆಸಿ ಬೋಧನಾ ಅವಧಿ ಸರಿದೂಗಿಸುವಂತೆ ದಕ್ಷಿಣ ಕನ್ನಡ ಜಿಲ್ಲಾ ಶಾಲಾ ಶಿಕ್ಷಣ ಇಲಾಖೆಯ ಉಪನಿದೇರ್ಶಕರು ಆದೇಶಿಸಿದ್ದಾರೆ.

## [ಬೆಳ್ಳಾರೆ ಠಾಣಾ ಪೋಕ್ಸೋ ಪ್ರಕರಣದ ಆರೋಪಿಗೆ ಶಿಕ್ಷೆ ವಿಧಿಸಿ ನ್ಯಾಯಾಲಯ ಆದೇಶ](https://www.karavalitimes.in/2026/08/Bellare-Pocso-Judgement-5-Yrs-Punishment.html)

_2026-08-21 · karavali Times · Karavali Times_

ಮಂಗಳೂರು, ಆಗಸ್ಟ್ 21, 2026 (ಕರಾವಳಿ ಟೈಮ್ಸ್) : ಬೆಳ್ಳಾರೆ ಪೋಲೀಸ್ ಠಾಣೆಯಲ್ಲಿ 2020 ರಲ್ಲಿ ದಾಖಲಾಗಿದ್ದ ಪೋಕ್ಸೋ ಪ್ರಕರಣದ ಆರೋಪಿಗೆ ನ್ಯಾಯಾಲಯ 5 ವರ್ಷಗಳ ಜೈಲು ಶಿಕ್ಷೆ ವಿಧಿಸಿ ತೀರ್ಪಿತ್ತಿದೆ. ಶಿಕ್ಷೆಗೊಳಗಾದ ಅಪರಾಧಿಯನ್ನು ಕಡಬ ಕುದ್ಮಾರು ನಿವಾಸಿ ಅಬ್ದುಲ್ಲಾ (64) ಎಂದು ಹೆಸರಿಸಲಾಗಿದೆ. ಅಬ್ದುಲ್ಲಾ ವಿರುದ್ದ ಬೆಳ್ಳಾರೆ ಪೊಲೀಸ್ ಠಾಣೆಯಲ್ಲಿ ಅಪರಾಧ ಕ್ರಮಾಂಕ 12/2020 ಕಲಂ 354(ಎ1), 506 ಐಪಿಸಿ ಹಾಗೂ ಕಲಂ 8 ಪೋಕ್ಸೋ ಕಾಯ್ದೆ-2012 ರಂತೆ ಪ್ರಕರಣದಲ್ಲಿ ಮಂಗಳೂರಿನ 7ನೇ…

## [ಅಲ್ಪಸಂಖ್ಯಾತ ವರ್ಗಗದ ವೃತ್ತಿಪರ ಕೋರ್ಸ್ ವಿದ್ಯಾರ್ಥಿಗಳ ಹಾಸ್ಟೆಲ್ ಪ್ರವೇಶಕ್ಕೆ ಅರ್ಜಿ ಆಹ್ವಾನ](https://www.karavalitimes.in/2026/08/Minority-Hostel-for-Professional-Course.html)

_2026-08-21 · karavali Times · Karavali Times_

ಮಂಗಳೂರು, ಆಗಸ್ಟ್ 21, 2026 (ಕರಾವಳಿ ಟೈಮ್ಸ್) : 2026-27ನೇ ಸಾಲಿನ ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಯ ಮೆಟ್ರಿಕ್ ನಂತರದ ವಿದ್ಯಾರ್ಥಿನಿಲಯಗಳಲ್ಲಿ (ಕೇವಲ ವೃತ್ತಿಪರ ಪದವಿ ಕೋರ್ಸಿನ ವಿದ್ಯಾರ್ಥಿಗಳಿಗೆ ಮಾತ್ರ) ರಾಜ್ಯ ವಿದ್ಯಾರ್ಥಿನಿಲಯ ತಂತ್ರಾಂಶದಲ್ಲಿ ಪ್ರವೇಶಾತಿಗೆ ಅರ್ಜಿ ಆಹ್ವಾನಿಸಲಾಗಿದೆ. ಅರ್ಜಿ ಸಲ್ಲಿಸಲು ಸೆಪ್ಟೆಂಬರ್ 15 ಕೊನೆಯ ದಿನ. ರಾಜ್ಯ ಹಾಸ್ಟೆಲ್ ಪೆÇೀರ್ಟಲ್ ಮೂಲಕ ಆನ್ ಲೈನ್ ಅರ್ಜಿ ಸಲ್ಲಿಸಬಹುದು. ಹೆಚ್ಚಿನ ಮಾಹಿತಿಗೆ ಅಲ್ಪಸಂಖ್ಯಾತರ ನಿರ್ದೇಶನಾಲಯದ ವೆಬ್ ಸೈಟ್ ಅಥವಾ…

## [ಅಪ್ರಾಪ್ತ ವಿದ್ಯಾರ್ಥಿನಿಯನ್ನು ಹಿಂಬಾಲಿಸಿದ ವ್ಯಕ್ತಿಯನ್ನು ಬಂಧಿಸಿದ ಬಂಟ್ವಾಳ ನಗರ ಪೊಲೀಸರು](https://www.karavalitimes.in/2026/08/Crime-News-in-Bantwal-Town-Limit.html)

_2026-08-21 · karavali Times · Karavali Times_

ಬಂಟ್ವಾಳ, ಆಗಸ್ಟ್ 21, 2026 (ಕರಾವಳಿ ಟೈಮ್ಸ್) : ಅಪ್ರಾಪ್ತ ಪ್ರಾಯದ ವಿದ್ಯಾರ್ಥಿನಿಯನ್ನು ಹಿಂಬಾಲಿಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿಯನ್ನು ಬಂಟ್ವಾಳ ನಗರ ಠಾಣಾ ಪೊಲೀಸರು ಬಂಧಿಸಿದ್ದಾರೆ. ಬಂಧಿತ ಆರೋಪಿಯನ್ನು ಸರಪಾಡಿ ನಿವಾಸಿ ಜಯಂತ್ (47) ಎಂದು ಹೆಸರಿಸಲಾಗಿದೆ. ಈ ಬಗ್ಗೆ ಬಾಲಕಿಯ ತಾಯಿ ಪೊಲೀಸರಿಗೆ ದೂರು ನೀಡಿದ್ದು, ಇವರ 16 ವರ್ಷ ಪ್ರಾಯದ ಅಪ್ರಾಪ್ತ ಮಗಳು ವಿದ್ಯಾಭ್ಯಾಸ ಮಾಡಿಕೊಂಡಿದ್ದು, ಕೆಲ ದಿನಗಳ ಹಿಂದಿನಿಂದ ಮಧ್ಯ ವಯಸ್ಸಿನ ಅಪರಿಚಿತರಾದ ಆರೋಪಿ ಬಾಲಕಿಯನ್ನು ಬಸ್ಸಿನಲ್ಲಿ…

## [ಅಪ್ರಾಪ್ತ ಶಾಲಾ ಬಾಲಕಿಯ ಅತ್ಯಾಚಾರ : ರಿಕ್ಷಾ ಚಾಲಕನ ಬಂಧಿಸಿದ ವೇಣೂರು ಪೊಲೀಸರು](https://www.karavalitimes.in/2026/08/Student-Rape-Case-in-Venur-Limit.html)

_2026-08-21 · karavali Times · Karavali Times_

ವೇಣೂರು, ಆಗಸ್ಟ್ 21, 2026 (ಕರಾವಳಿ ಟೈಮ್ಸ್) : ಅಪ್ರಾಪ್ತ ಶಾಲಾ ಬಾಲಕಿಯನ್ನು ಅತ್ಯಾಚಾರ ನಡೆಸಿದ ಪ್ರಕರಣದ ಆರೋಪಿಯನ್ನು ವೇಣೂರು ಪೊಲೀಸರು ಬಂಧಿಸಿದ್ದಾರೆ. ಬಂಧಿತ ಆರೋಪಿಯನ್ನು ವೇಣೂರು ನಿವಾಸಿ, ಅಟೊ ಚಾಲಕ ಜಮಾಲುದ್ದೀನ್ ಎಂದು ಹೆಸರಿಸಲಾಗಿದೆ. ಈತ 14 ವರ್ಷ ಪ್ರಾಯದ ಅಪ್ರಾಪ್ತ ಶಾಲಾ ಬಾಲಕಿಯನ್ನು ತನ್ನ ಅಟೋ ರಿಕ್ಷಾದಲ್ಲಿ ಶಾಲೆಗೆ ಕರೆದುಕೊಂಡು ಹೋಗುತ್ತಿದ್ದ. ಈ ವೇಳೆ ಆರೋಪಿಯು ಅನುಚಿತವಾಗಿ ವರ್ತಿಸುತ್ತಿದ್ದು, ಈ ಬಗ್ಗೆ ಬಾಲಕಿಯು ಪ್ರತಿರೋಧಿಸಿದಾಗ ಆರೋಪಿಯು ಜೀವಬೆದರಿಕೆ…

## [ದೇವಸ್ಥಾನದ ಕಾಣಿಕೆ ಹುಂಡಿ ಕಳ್ಳತನ ಮಾಡಿದ್ದವನ ಬಂಧಿಸಿದ ಮುಲ್ಕಿ ಪೊಲೀಸರು](https://www.karavalitimes.in/2026/08/Temple-Theft-Case-Traced-by-Mulki-Police.html)

_2026-08-20 · karavali Times · Karavali Times_

ಮುಲ್ಕಿ, ಆಗಸ್ಟ್ 20, 2026 (ಕರಾವಳಿ ಟೈಮ್ಸ್) : ಮುಲ್ಕಿ ಪೊಲೀಸ್ ಠಾಣಾ ವ್ಯಾಪ್ತಿಯ ಚಂದ್ರಮೌಳೇಶ್ವರ ದೇವಸ್ಥಾನದಲ್ಲಿ ಕಾಣಿಕೆ ಹುಂಡಿ ಕಳ್ಳತನ ಮಾಡಿದ ಆರೋಪಿಯನ್ನು ಬಂಧಿಸಿರುವ ಪೊಲೀಸರು ಆರೋಪಿಯಿಂದ ಕಳುವಾದ ಸ್ವತ್ತುಗಳನ್ನು ವಶಪಡಿಸಿಕೊಂಡಿದ್ದಾರೆ. ಬಂಧಿತ ಆರೋಪಿಯನ್ನು ಕೊಡಗು ಜಿಲ್ಲೆಯ, ಮಡಿಕೇರಿ ತಾಲೂಕಿನ, ಅಯ್ಯಂಗೇರಿ ಅಂಚೆ ವ್ಯಾಪ್ತಿಯ, ಸಣ್ಣಪುಲಿಕೊಟ್ಟ ಗ್ರಾಮದ ಕುಬೇರಂಗಡಿ-ಅಜ್ಜಿಮಡ ನಿವಾಸಿ ದಿವಂಗತ ಗೋಪಾಲ ಎಂಬವರ ಪುತ್ರ ರವಿಕುಮಾರ್ ಅಲಿಯಾಸ್ ರವಿ ಎಚ್ ಜಿ (20) ಎಂದು…

## [ಮಾದಕ ವಸ್ತು ಸೇವಿಸಿ ತೂರಾಡುತ್ತಿದ್ದ ವ್ಯಕ್ತಿ ಪೂಂಜಾಲಕಟ್ಟೆ ಪೊಲೀಸರ ವಶಕ್ಕೆ](https://www.karavalitimes.in/2026/08/blog-post_20.html)

_2026-08-20 · karavali Times · Karavali Times_

ಬಂಟ್ವಾಳ, ಆಗಸ್ಟ್ 20, 2026 (ಕರಾವಳಿ ಟೈಮ್ಸ್) : ಮಾದಕ ವಸ್ತು ಸೇವಿಸಿ ಸಾರ್ವಜನಿಕ ಸ್ಥಳದಲ್ಲಿ ತೇಲಾಡುತ್ತಿದ್ದ ವ್ಯಕ್ತಿಯನ್ನು ಪೂಂಜಾಲಕಟ್ಟೆ ಪೊಲೀಸರು ವಶಕ್ಕೆ ಪಡೆದುಕೊಂಡ ಘಟನೆ ಬೆಳ್ತಂಗಡಿ ತಾಲೂಕಿನ ಮಾಲಾಡಿ ಗ್ರಾಮದ ಮಡಂತ್ಯಾರು ಎಂಬಲ್ಲಿ ಆಗಸ್ಟ್ 19 ರಂದು ಮಧ್ಯಾಹ್ನ ನಡೆದಿದೆ. ಬಂಧಿತ ವ್ಯಕ್ತಿಯನ್ನು ಬೆಳ್ತಂಗಡಿ ತಾಲೂಕಿನ ಪುತ್ತಿಲ ಗ್ರಾಮದ ನಿವಾಸಿ ಅಬ್ದುಲ್ ಸಲೀಂ (34) ಎಂದು ಹೆಸರಿಸಲಾಗಿದೆ. ಪೂಂಜಾಲಕಟ್ಟೆ ಪೊಲೀಸ್ ಠಾಣಾ ಪಿಎಸ್ಸೈ ರಾಜೇಶ್ ಕೆ ವಿ ಅವರು ಸಿಬ್ಬಂದಿಗಳೊಂದಿಗೆ…

## [10ನೇ ಮೈಲಿಕಲ್ಲು : ಹೆದ್ದಾರಿ ದಾಟುತ್ತಿದ್ದ ವ್ಯಕ್ತಿಗೆ ಕಾರು ಡಿಕ್ಕಿ ಹೊಡೆದು ಗಾಯ](https://www.karavalitimes.in/2026/08/Accident-in-Pudu-one-Injured.html)

_2026-08-20 · karavali Times · Karavali Times_

ಬಂಟ್ವಾಳ, ಆಗಸ್ಟ್ 20, 2026 (ಕರಾವಳಿ ಟೈಮ್ಸ್) : ಪುದು ಗ್ರಾಮದ ಹತ್ತನೇ ಮೈಲಿಕಲ್ಲು ಎಂಬಲ್ಲಿ ಹೆದ್ದಾರಿ ದಾಟುತ್ತಿದ್ದ ವೇಳೆ ಕಾರು ಡಿಕ್ಕಿ ಹೊಡೆದು ವ್ಯಕ್ತಿಯೋರ್ವರು ಗಾಯಗೊಂಡ ಘಟನೆ ಆಗಸ್ಟ್ 18 ರಂದು ಸಂಭವಿಸಿದೆ. ಗಾಯಗೊಂಡವರನ್ನು ಮಂಗಳೂರು-ಮೂಡುಶೆಡ್ಡೆ ನಿವಾಸಿ ಮೊಹಮ್ಮದ್ (62) ಎಂದು ಹೆಸರಿಸಲಾಗಿದೆ. ಇವರು ರಸ್ತೆ ದಾಟಿ ಡಿವೈಡರ್ ಬಳಿ ತಲುಪುವಷ್ಟರಲ್ಲಿ ಬಿ ಸಿ ರೋಡು ಕಡೆಯಿಂದ ಸುಬ್ರಮಣ್ಯ ಎಂಬವರು ಚಲಾಯಿಸಿಕೊಂಡು ಬಂದ ಕಾರು ಡಿಕ್ಕಿ ಹೊಡೆದು ಈ ಅಪಘಾತ ಸಂಭವಿಸಿದೆ. ಅಪಘಾತದಿಂದ…

## [ಯುವ ಜನತೆಗೆ ಮತದಾನದ ಹಕ್ಕು ಒದಗಿಸಿದ ರಾಜೀವ್ ಗಾಂಧಿ ಹಾಗೂ ರೈತನಿಗೆ ಭೂಮಿಯ ಒಡೆತನ ನೀಡಿದ ದೇವರಾಜ ಅರಸು ಜನರ ಹೃದಯದಲ್ಲಿ ಅಮರ : ರೈ](https://www.karavalitimes.in/2026/08/Fruits-Distribute-by-Congress-.html)

_2026-08-20 · karavali Times · Karavali Times_

ಬಂಟ್ವಾಳದಲ್ಲಿ ಕಾಂಗ್ರೆಸ್ ಪ್ರಚಾರ ಸಮಿತಿಯಿಂದ ರೋಗಿಗಳಿಗೆ ಹಣ್ಣು ಹಂಪಲು ವಿತರಣೆ ಬಂಟ್ವಾಳ, ಆಗಸ್ಟ್ 20, 2026 (ಕರಾವಳಿ ಟೈಮ್ಸ್) : ದೇಶದಲ್ಲಿ ಯುವಜನತೆಗೆ ಮತದಾನದ ಹಕ್ಕು ಒದಗಿಸಿದ ಮಾಜಿ ಪ್ರಧಾನಿ ರಾಜೀವ್ ಗಾಂಧಿ ಮತ್ತು ಉಳುವ ರೈತನಿಗೆ ಭೂಮಿಯ ಒಡೆತನ ನೀಡಿದ ಮಾಜಿ ಮುಖ್ಯಮಂತ್ರಿ ದೇವರಾಜ ಅರಸು ಅವರ ನೆನಪು ಜನರ ಹೃದಯದಲ್ಲಿ ಅಚ್ಚಳಿಯದೆ ಉಳಿದಿದೆ ಎಂದು ಮಾಜಿ ಸಚಿವ, ಕೆಪಿಸಿಸಿ ಉಪಾಧ್ಯಕ್ಷ ಬಿ ರಮಾನಾಥ ರೈ ಹೇಳಿದರು. ದಕ್ಷಿಣ ಕನ್ನಡ ಜಿಲ್ಲಾ ಕಾಂಗ್ರೆಸ್ ಪ್ರಚಾರ ಸಮಿತಿ ವ್ಯಾಪ್ತಿಯ…

## [ಮಣಿನಾಲ್ಕೂರು : ವ್ಯಾಪಾರದ ಹಣ ಸಂಗ್ರಹಿಸಿ ತೆರಳುತ್ತಿದ್ದ ವ್ಯಕ್ತಿಯ ತಡೆದು ತಲವಾರು ತೋರಿ ಎಂಟೂವರೆ ಲಕ್ಷ ಹಣ ದೋಚಿದ ನಾಲ್ವರ ತಂಡ](https://www.karavalitimes.in/2026/08/Darode-Crime-in-Mulkaje-Maada.html)

_2026-08-20 · karavali Times · Karavali Times_

ಬಂಟ್ವಾಳ, ಆಗಸ್ಟ್ 20, 2026 (ಕರಾವಳಿ ಟೈಮ್ಸ್) : ವ್ಯಾಪಾರದ ಹಣ ಸಂಗ್ರಹ ಮಾಡಿ ಬೈಕಿನಲ್ಲಿ ತೆರಳುತ್ತಿದ್ದ ವ್ಯಕ್ತಿಯನ್ನು ಎರಡು ಬೈಕುಗಳಲ್ಲಿ ಬಂದ ನಾಲ್ವರ ತಂಡವೊಂದು ತಲವಾರು ತೋರಿಸಿ ಬೆದರಿಸಿ ಲಕ್ಷಾಂತರ ರೂಪಾಯಿ ನಗದು ಹಣ ದರೋಡೆಗೈದು ಪರಾರಿಯಾದ ಘಟನೆ ಮಣಿನಾಲ್ಕೂರು ಗ್ರಾಮದ ಮುಲ್ಕಾಜೆಮಾಡ ಎಂಬಲ್ಲಿ ಆಗಸ್ಟ್ 20 ರಂದು ಮಟ ಮಟ ಮಧ್ಯಾಹ್ನ ವೇಳೆ ಸಂಭವಿಸಿದೆ. ಮಂಗಳೂರು ಸಮೀಪದ ಅಡ್ಯಾರ್-ಕಣ್ಣೂರು ನಿವಾಸಿ ಮಯ್ಯದ್ದಿ (40) ಎಂಬವರೇ ದರೋಡೆಗೊಳಗಾದ ವ್ಯಕ್ತಿ. ಇವರು ಕಣ್ಣೂರಿನಲ್ಲಿರುವ…

## [Stop CI/CD & Supply-Chain Attacks (Sponsored)](https://crawlproof.com/a/2R8joc9sK2DG)

_2026-08-20 · **Sponsored**_

Per-PR: 17 CI/CD checks and package malware scans with inline Check Run findings.

## [ಮಾದಕ ವಸ್ತು ಸಾಗಾಟ ಪ್ರಕರಣದಲ್ಲಿ ಮತ್ತಿಬ್ಬರಿಗೆ ಲಾಕ್ ಹಾಕಿದ ಮಂಗಳೂರು ಪೊಲೀಸರು : ಭಾರೀ ಪ್ರಮಾಣದ ಮಾಲು ವಶಕ್ಕೆ](https://www.karavalitimes.in/2026/08/Drugs-Case-2-Arrest-by-Mnglre-Police.html)

_2026-08-19 · karavali Times · Karavali Times_

ಮಂಗಳೂರು, ಆಗಸ್ಟ್ 19, 2026 (ಕರಾವಳಿ ಟೈಮ್ಸ್) : ಎರಡು ಪ್ರತ್ಯೇಕ ಪ್ರಕರಣಗಳಲ್ಲಿ ಮಾದಕ ವಸ್ತು ಪ್ರಕರಣ ಬೇಧಿಸಿರುವ ಮಂಗಳೂರು ಪೊಲೀಸರು ಎಂಡಿಎಂಎ ಸಹಿತ ಇಬ್ಬರನ್ನು ಬಂಧಿಸಿದ್ದಾರೆ. ಆಗಸ್ಟ್ 18 ರಂದು ಮಂಗಳೂರು ಪೂರ್ವ ಪೆÇಲೀಸ್ ಠಾಣಾ ವ್ಯಾಪ್ತಿಯ ಪಂಪ್ ವೆಲ್ ನಿಂದ ನಂತೂರು ಕಡೆಗೆ ತೆರಳುವ ಸರ್ವಿಸ್ ರಸ್ತೆಯ ಬದಿಯಲ್ಲಿ, ಸುಮಾರು 30-35 ವರ್ಷ ಪ್ರಾಯದ ವ್ಯಕ್ತಿಯೊಬ್ಬರು ಆಟೋ ರಿಕ್ಷಾದಲ್ಲಿ ಣೀಷೇಧಿತ ಮಾದಕ ವಸ್ತುವಾದ ಎಂಡಿಎಂಎ ಹೊಂದಿಕೊಂಡು ಅಕ್ರಮವಾಗಿ ಮಾರಾಟ ಮಾಡುತ್ತಿರುವುದಾಗಿ ಮಂಗಳೂರು…

## [ದ್ವಿಚಕ್ರ ವಾಹನ ಕಳವು ಪ್ರಕರಣ ಬೇಧಿಸಿ ವಾಹನ ಸಹಿತ ಆರೋಪಿ ಬಂಧಿಸಿದ ಉರ್ವ ಪೊಲೀಸರು](https://www.karavalitimes.in/2026/08/Scooter-Theft-Case-Traced.html)

_2026-08-19 · karavali Times · Karavali Times_

ಮಂಗಳೂರು, ಆಗಸ್ಟ್ 19, 2026 (ಕರಾವಳಿ ಟೈಮ್ಸ್) : ದ್ವಿಚಕ್ರ ವಾಹನ ಕಳ್ಳನೋರ್ವನನ್ನು ತಿಂಗಳ ಅಂತರದಲ್ಲಿ ಉರ್ವ ಪೊಲೀಸರು ಪತ್ತೆ ಹಚ್ಚಿ ಬಂಧಿಸಿದ್ದಾರೆ. ಬಂಧಿತ ಆರೋಪಿಯನ್ನು ಉಳ್ಳಾಲ-ಕೋಡಿಯ ಬೈತುಲ್ ಕೌಸರ್ ನ್ಯೂ ತೋಟ ಹೌಸ್ ನಿವಾಸಿ ದಿವಂಗತ ಇಬ್ರಾಹಿಂ ಎಂಬವರ ಪುತ್ರ ಮುಹಮ್ಮದ್ ಫೈಝಲ್ ಯಾನೆ ತೋಟ ಫೈಝಲ್ (40) ಎಂದು ಹೆಸರಿಸಲಾಗಿದೆ. ನಗರದ ಉರ್ವ ಪೊಲೀಸ್ ಠಾಣಾ ವ್ಯಾಪ್ತಿಯ ಕೋಡಿಕ್ಕಲ್ ಎಂಬಲ್ಲಿ ಮನೆಯೊಂದರ ಎದುರು ಪಾರ್ಕ್ ಮಾಡಿದ್ದ ಕೆಎ19 ಇಬಿ2226 ನೋಂದಣಿ ಸಂಖ್ಯೆಯ ಹೋಂಡಾ ಡಿಯೋ ಸ್ಕೂಟರ್…

## [ಬ್ರಹ್ಮರಕೂಟ್ಲು : ಮಂದಿರದ ಕಾಣಿಕೆ ಡಬ್ಬಿಯ ಹಣ ಕದಿಯುತ್ತಿದ್ದ ಅಪರಿಚಿತನನ್ನು ಹಿಡಿದು ಪೊಲೀಸರಿಗೊಪ್ಪಿಸಿದ ಸ್ಥಳೀಯರು](https://www.karavalitimes.in/2026/08/blog-post_19.html)

_2026-08-19 · karavali Times · Karavali Times_

ಬಂಟ್ವಾಳ, ಆಗಸ್ಟ್ 19, 2026 (ಕರಾವಳಿ ಟೈಮ್ಸ್) : ಬ್ರಹ್ಮರಕೂಟ್ಲು ಶ್ರೀ ಮೂಕಾಂಬಿಕಾ ರಾಮ ಭಜನಾ ಮಂದಿರದ ಕಾಣಿಕೆ ಡಬ್ಬಿ ಅಡ್ಡ ಹಾಕಿ ಹಣ ಕದಿಯುತ್ತಿದ್ದ ಅಪರಿಚಿತ ವ್ಯಕ್ತಿಯನ್ನು ಸ್ಥಳೀಯರು ಹಿಡಿದು ಪೊಲೀಸರಿಗೆ ಒಪ್ಪಿಸಿದ ಘಟನೆ ಆಗಸ್ಟ್ 18 ರಂದು ಸಂಭವಿಸಿದೆ. ಇಲ್ಲಿನ ರಾಮ ಭಜನಾ ಮಂದಿರಕ್ಕೆ ಆಡಳಿತ ಸಮಿತಿ ಸದಸ್ಯ ದಿನಕರ ಎಂಬವರು ಆಗಸ್ಟ್ 18 ರಂದು ಬೆಳಿಗ್ಗೆ 11.30-11.45ರ ವೇಳೆಗೆ ಸೀಯಾಳ ಇಡಲೆಂದು ತೆರಳಿದಾಗ ಅಪರಿಚಿತ ವ್ಯಕ್ತಿ ಕಾಣಿಕೆ ಡಬ್ಬಿಯನ್ನು ಅಡ್ಡ ಹಾಕಿ ಅದರಲ್ಲಿದ್ದ ಹಣ…

## [ಕರಿಯಂಗಳ : ವಿದ್ಯುತ್ ಟ್ರಾನ್ಸ್ ಫಾರ್ಮರ್ ಬಳಿ ಅವಿವಾಹಿತ ಮೃತದೇಹ ಪತ್ತೆ](https://www.karavalitimes.in/2026/08/UDR-Crime-in-Kariyangala-Vilage.html)

_2026-08-19 · karavali Times · Karavali Times_

ಬಂಟ್ವಾಳ, ಆಗಸ್ಟ್ 19, 2026 (ಕರಾವಳಿ ಟೈಮ್ಸ್) : ಕರಿಯಂಗಳ ಗ್ರಾಮದ ತಂತ್ರಿಬೆಟ್ಟು ಬಳಿಯ ವಿದ್ಯುತ್ ಟ್ರಾನ್ಸ್ ಫಾರ್ಮರ್ ಬಳಿ ವ್ಯಕ್ತಿಯೋರ್ವರ ಮೃತದೇಹ ಸಂಶಯಾಸ್ಪದವಾಗಿ ಪತ್ತೆಯಾದ ಘಟನೆ ಆಗಸ್ಟ್ 17 ರಂದು ಸಂಭವಿಸಿದೆ. ಮೃತರ ಇಲ್ಲಿನ ನಿವಾಸಿ ಹರೀಶ್ ಟಿ (38) ಎಂದು ಹೆಸರಿಸಲಾಗಿದೆ. ಇವರು ಅವಿವಾಹಿತರಾಗಿದ್ದು, ಇಲೆಕ್ಟ್ರಿಷಿಯನ್ ವೃತ್ತಿ ಮಾಡುತ್ತಿರುವುದಾಗಿದೆ. ಆಗಸ್ಟ್ 16 ರಂದು ಕೆಲಸಕ್ಕೆ ಹೋಗಿ ಬಂದು ರಾತ್ರಿ ಮಲಗಿದ್ದ ಇವರು ಬೆಳಗ್ಗೆ ನೋಡುವಾಗ ಮನೆಯಲ್ಲಿರಲಿಲ್ಲ. ಬೆಳಿಗ್ಗೆ…

## [ಬಡಗಬೆಳ್ಳೂರು : ಮನೆಯಂಗಳದಲ್ಲಿ ಕುಸಿದು ಬಿದ್ದು ಯುವತಿ ಮೃತ್ಯು](https://www.karavalitimes.in/2026/08/UDR-Crime-in-Badagabellur.html)

_2026-08-19 · karavali Times · Karavali Times_

ಬಂಟ್ವಾಳ, ಆಗಸ್ಟ್ 19, 2026 (ಕರಾವಳಿ ಟೈಮ್ಸ್) : ಉಸಿರಾಟಕ್ಕೆ ತೊಂದರೆಯಾಗುತ್ತಿದೆ ಎಂದು ಮನೆಯಂಗಳದಲ್ಲಿ ಕುಸಿದು ಬಿದ್ದ ಯುವತಿಯೋರ್ವಳು ಚಿಕಿತ್ಸೆ ಫಲಿಸದೆ ಮೃತಪಟ್ಟ ಘಟನೆ ಬಡಗಬೆಳ್ಳೂರು ಗ್ರಾಮದ ಗುಂಡಾಲ ಎಂಬಲ್ಲಿ ಆಗಸ್ಟ್ 16 ರಂದು ಸಂಭವಿಸಿದೆ. ಮೃತ ಯುವತಿಯನ್ನು ಶ್ರೀಮತಿ ಶೋಭಾ ಜಿ ಎನ್ (31) ಎಂದು ಹೆಸರಿಸಲಾಗಿದೆ. ಈಕೆ ತನ್ನ ಅಣ್ಣ ಶಶಿಕುಮಾರ್ ಅವರ ಮನೆಗೆ ದೈವದ ಕಾರ್ಯಕ್ರಮಕ್ಕೆಂದು ಬಂದಿದ್ದು, ಆಗಸ್ಟ್ 16 ರಂದು ಮನೆಯಲ್ಲಿ ದೈವಗಳ ಕಾರ್ಯಕ್ರಮ ಪ್ರಾರಂಭವಾಗಿರುವ ಸಮಯ ಉಸಿರಾಡಲು…

