RSS Amplifier

News source

Samyukta Karnataka

News that connects you to Karnataka since 1921

samyuktakarnataka.inSource feed ↗20 articles

Overdue Last read · last published · next check
Last read 6 hours ago, longer than this feed's 1 hour schedule.

Written by

Latest articles

ರಸ್ತೆಗಳಲ್ಲಿ ಅಪಘಾತ ರಹಿತ ಸುರಕ್ಷಿತ ಸಂಚಾರಕ್ಕೆ ಅಗತ್ಯವಿರುವ ಸೌಲಭ್ಯಗಳನ್ನು ಒದಗಿಸಿ: ಜಿಲ್ಲಾಧಿಕಾರಿ

ದಾಂಡೇಲಿ (ಉತ್ತರ ಕನ್ನಡ) ಸಂ.ಕ. ಸಮಾಚಾರ : ಜಿಲ್ಲೆಯ ರಾಷ್ಟ್ರೀಯ ಹೆದ್ದಾರಿಗಳಲ್ಲಿ ಸಾರ್ವಜನಿಕರು ಮತ್ತು ವಾಹನಗಳ ಅಪಘಾತ ರಹಿತ ಸುರಕ್ಷಿತ ಸಂಚಾರಕ್ಕೆ ಅಗತ್ಯವಿರುವ ಹಾಗೂ ಪೊಲೀಸ್ ಇಲಾಖೆಯಿಂದ ಸೂಚಿಸುವ ಎಲ್ಲಾ ಅಗತ್ಯ ಮುನ್ನೆಚ್ಚರಿಕಾ ಕ್ರಮಗಳನ್ನು ಕೈಗೊಳ್ಳುವಂತೆ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಅಧಿಕಾರಿಗಳಿಗೆ ಜಿಲ್ಲಾಧಿಕಾರಿ ಕೆ.ಲಕ್ಷ್ಮಿಪ್ರಿಯಾ ಸೂಚನೆ ನೀಡಿದರು. ಅವರು ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ನಡೆದ ರಸ್ತೆ ಸುರಕ್ಷತಾ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.…

ಪದ್ಮಶ್ರೀ ಪುರಸ್ಕೃತ ಹಿರಿಯ ನಟಿ ಸೌಕಾರ್ ಜಾನಕಿ ಇನ್ನಿಲ್ಲ

ಹಿರಿಯ ನಟಿ ಸೌಕಾರ್ ಜಾನಕಿ ನಿಧನ: 94ನೇ ವಯಸ್ಸಿನಲ್ಲಿ ದಕ್ಷಿಣ ಭಾರತದ ಚಿತ್ರರಂಗದ ಹಿರಿಯ ಕಲಾವಿದೆಗೆ ವಿದಾಯ ಚೆನ್ನೈ: ದಕ್ಷಿಣ ಭಾರತದ ಚಿತ್ರರಂಗದ ಹಿರಿಯ ಹಾಗೂ ಗೌರವಾನ್ವಿತ ಕಲಾವಿದರಲ್ಲಿ ಒಬ್ಬರಾಗಿದ್ದ ಸೌಕಾರ್ ಜಾನಕಿ ಅವರು ಶುಕ್ರವಾರ (ಆಗಸ್ಟ್ 21) ಚೆನ್ನೈನಲ್ಲಿ ನಿಧನರಾಗಿದ್ದಾರೆ. ಅವರಿಗೆ 94 ವರ್ಷ ವಯಸ್ಸಾಗಿತ್ತು. ವಯೋಸಹಜ ಆರೋಗ್ಯ ಸಮಸ್ಯೆಗಳಿಂದ ಬಳಲುತ್ತಿದ್ದ ಅವರು ಇತ್ತೀಚೆಗೆ ಚೆನ್ನೈನ ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದು, ತೀವ್ರ ನಿಗಾ ಘಟಕದಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು.…

RBI ಮಂಡಳಿಗೆ ಸೋಮನಾಥ್ ಎಂಟ್ರಿ: 4 ವರ್ಷಗಳ ಅವಧಿಗೆ ನೇಮಕ

ನವದೆಹಲಿ: ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ISRO)ಯ ಮಾಜಿ ಅಧ್ಯಕ್ಷ ಎಸ್. ಸೋಮನಾಥ್ ಅವರಿಗೆ ಇದೀಗ ಮತ್ತೊಂದು ಮಹತ್ವದ ಜವಾಬ್ದಾರಿ ದೊರೆತಿದೆ. ಅವರನ್ನು ಭಾರತೀಯ ರಿಸರ್ವ್ ಬ್ಯಾಂಕ್‌ (RBI)ನ ಕೇಂದ್ರ ಮಂಡಳಿಯಲ್ಲಿ ಅರೆಕಾಲಿಕ, ಅನಧಿಕೃತ (Part-time, Non-official) ನಿರ್ದೇಶಕರಾಗಿ ಕೇಂದ್ರ ಸರ್ಕಾರ ನೇಮಕ ಮಾಡಿದೆ. ಆರ್‌ಬಿಐ ಪ್ರಕಟಿಸಿರುವ ಮಾಹಿತಿಯ ಪ್ರಕಾರ, 2026ರ ಆಗಸ್ಟ್ 20ರಿಂದ ನಾಲ್ಕು ವರ್ಷಗಳ ಅವಧಿಗೆ ಸೋಮನಾಥ್ ಅವರ ನೇಮಕಾತಿ ಜಾರಿಗೆ ಬಂದಿದೆ. ಮುಂದಿನ ಆದೇಶದವರೆಗೆ ಅಥವಾ…

ಚೀನಾದ ಬಿಲಿಬಿಲಿ ಗ್ಲೋಬಲ್ ಎಂಟ್ರಿ: ವಿದೇಶಿ ಕ್ರಿಯೇಟರ್‌ಗಳತ್ತ ಚಿತ್ತ

YouTubeಗೆ ಎದುರಾಳಿಯಾಗಿ ಬಿಲಿಬಿಲಿ; ಚೀನಾದ ಹೊರಗೆ ಹೊಸ ಆ್ಯಪ್, ಇಂಗ್ಲಿಷ್ ವೆಬ್‌ಸೈಟ್‌ ಯೋಜನೆ ಬೀಜಿಂಗ್: ಚೀನಾದ ಜನಪ್ರಿಯ ವಿಡಿಯೋ ಹಂಚಿಕೆ ವೇದಿಕೆ ಬಿಲಿಬಿಲಿ (Bilibili) ಇದೀಗ ತನ್ನ ವ್ಯಾಪ್ತಿಯನ್ನು ಚೀನಾದ ಗಡಿಗಳಾಚೆಗೆ ವಿಸ್ತರಿಸಲು ಮಹತ್ವದ ಹೆಜ್ಜೆ ಇಟ್ಟಿದೆ. ಜಾಗತಿಕ ವಿಡಿಯೋ ಸ್ಟ್ರೀಮಿಂಗ್ ಮಾರುಕಟ್ಟೆಯಲ್ಲಿ ಈಗಾಗಲೇ ಪ್ರಬಲವಾಗಿರುವ ಯೂಟ್ಯೂಬ್‌ಗೆ ಪರ್ಯಾಯವಾಗಿ ಬೆಳೆಯುವ ಉದ್ದೇಶದೊಂದಿಗೆ ಬಿಲಿಬಿಲಿ ತನ್ನ ಅಂತರರಾಷ್ಟ್ರೀಯ ವಿಸ್ತರಣಾ ಯೋಜನೆಯನ್ನು ವೇಗಗೊಳಿಸುತ್ತಿದೆ. ಇತ್ತೀಚಿನ…

ವಿದ್ಯಾರ್ಥಿ ಪರ ನ್ಯಾಯಕ್ಕಾಗಿ ಪೊಲೀಸ್ ಠಾಣೆಯಲ್ಲೇ ರಾಹುಲ್ ಪ್ರತಿಭಟನೆ

ಜಂತರ್ ಮಂತರ್ ಪ್ರತಿಭಟನೆ: ಗಾಯಗೊಂಡ ವಿದ್ಯಾರ್ಥಿಯೊಂದಿಗೆ ಪೊಲೀಸ್ ಠಾಣೆಯಲ್ಲಿ ರಾಹುಲ್ ಗಾಂಧಿ ಧರಣಿ ನವದೆಹಲಿ: ಜಂತರ್ ಮಂತರ್‌ನಲ್ಲಿ ಜುಲೈ 20ರಂದು ನಡೆದ ವಿದ್ಯಾರ್ಥಿಗಳ ಪ್ರತಿಭಟನೆ ವೇಳೆ ಗಾಯಗೊಂಡಿದ್ದ ವಿದ್ಯಾರ್ಥಿ ಸಾಹಿಲ್ ಲೋಚವ್ ಅವರಿಗೆ ನ್ಯಾಯ ಒದಗಿಸಬೇಕು ಎಂದು ಆಗ್ರಹಿಸಿ ಲೋಕಸಭೆಯ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಶುಕ್ರವಾರ ದೆಹಲಿಯ ಪಾರ್ಲಿಮೆಂಟ್ ಸ್ಟ್ರೀಟ್ ಪೊಲೀಸ್ ಠಾಣೆಯಲ್ಲಿ ಧರಣಿ ನಡೆಸಿದರು. ವಿದ್ಯಾರ್ಥಿಯ ದೂರಿನ ಆಧಾರದ ಮೇಲೆ ಎಫ್‌ಐಆರ್ ದಾಖಲಿಸಿ, ಘಟನೆಗೆ…

‘ಮಡ್ಗಾಂವ್ ಎಕ್ಸ್‌ಪ್ರೆಸ್’ ಬಳಿಕ ‘ವೈಬ್’ ಸೃಷ್ಟಿಸಲು ಹೊರಟ ಕುನಾಲ್!

ಮುಂಬೈ: ಬಾಲಿವುಡ್‌ನಲ್ಲಿ ನಟನಾಗಿ ಗುರುತಿಸಿಕೊಂಡಿರುವ ಕುನಾಲ್ ಕೆಮ್ಮು, ‘ಮಡ್ಗಾಂವ್ ಎಕ್ಸ್‌ಪ್ರೆಸ್’ ಚಿತ್ರದ ಯಶಸ್ಸಿನ ಬಳಿಕ ಮತ್ತೊಮ್ಮೆ ನಿರ್ದೇಶಕರಾಗಿ ಪ್ರೇಕ್ಷಕರ ಮುಂದೆ ಬರಲು ಸಜ್ಜಾಗಿದ್ದಾರೆ. ಅವರ ಮುಂದಿನ ನಿರ್ದೇಶನದ ಚಿತ್ರಕ್ಕೆ ‘ವೈಬ್’ ಎಂದು ಹೆಸರಿಡಲಾಗಿದ್ದು, ಸಿನಿಮಾ ಸೆಪ್ಟೆಂಬರ್ 18ರಂದು ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಲಿದೆ ಎಂದು ಘೋಷಿಸಲಾಗಿದೆ. ಕುನಾಲ್ ಕೆಮ್ಮು ನಿರ್ದೇಶನದ ಮೊದಲ ಸಿನಿಮಾ ‘ಮಡ್ಗಾಂವ್ ಎಕ್ಸ್‌ಪ್ರೆಸ್’ ಪ್ರೇಕ್ಷಕರಿಂದ ಉತ್ತಮ ಪ್ರತಿಕ್ರಿಯೆ…

ಕಾರಿನಲ್ಲಿ ಅಕ್ರಮವಾಗಿ ಸಾಗಿಸಲಾಗುತ್ತಿದ್ದ ₹9 ಕೋಟಿ ನಗದು IT ವಶ

ಬೆಂಗಳೂರು: ಬೆಂಗಳೂರಿನಿಂದ ಹೊಸೂರು ಕಡೆಗೆ ಕಾರಿನಲ್ಲಿ ಸಾಗಿಸಲಾಗುತ್ತಿದ್ದ ಸುಮಾರು ₹9 ಕೋಟಿ ಲೆಕ್ಕವಿಲ್ಲದ ನಗದನ್ನು ಆದಾಯ ತೆರಿಗೆ ಅಧಿಕಾರಿಗಳು ವಶಪಡಿಸಿಕೊಂಡಿರುವ ಘಟನೆ ನಗರದಲ್ಲಿ ನಡೆದಿದೆ. ಎಲೆಕ್ಟ್ರಾನಿಕ್ ಸಿಟಿ ಸಮೀಪದ ಹೊಸೂರು ರಸ್ತೆಯಲ್ಲಿ ಆಗಸ್ಟ್ 18ರಂದು ಈ ಕಾರ್ಯಾಚರಣೆ ನಡೆದಿದೆ. ಬೆಂಗಳೂರಿನ ಆದಾಯ ತೆರಿಗೆ ಉಪ ನಿರ್ದೇಶಕ ಜಗದೀಶ್ ಅವರ ಕೋರಿಕೆಯ ಮೇರೆಗೆ ಎಲೆಕ್ಟ್ರಾನಿಕ್ ಸಿಟಿ ಪೊಲೀಸರು ರಾತ್ರಿ ಸುಮಾರು 10.30ರ ವೇಳೆಗೆ ಹೊಸೂರು ರಸ್ತೆಯ ಬಿಇಟಿಎಲ್ ಟೋಲ್ ನಂತರದ ಸಿಗ್ನಲ್ ಬಳಿ…

ತುಂಗಭದ್ರಾ ಹಿನ್ನೀರಿನಲ್ಲಿ ನಾಪತ್ತೆಯಾಗಿದ್ದ ಮೂವರ ಮೃತದೇಹ ಪತ್ತೆ

ದಿನಕ್ಕೊಂದು ಮೃತದೇಹ ಪತ್ತೆಯಾದ ಶೋಧ ಕಾರ್ಯಾಚರಣೆ; ನಾಕಲ್ ಮಂಟಪದ ಬಳಿ 3ನೇ ಮೃತದೇಹ ಪತ್ತೆ ಸಂಕ ಸಮಾಚಾರ ತಂಬ್ರಹಳ್ಳಿ. (ವಿಜಯನಗರ) : ಹಗರಿಬೊಮ್ಮನಹಳ್ಳಿ ತಾಲ್ಲೂಕಿನ ತಂಬ್ರಹಳ್ಳಿ ಸಮೀಪದ ತುಂಗಭದ್ರಾ ಹಿನ್ನೀರಿನಲ್ಲಿ ಮೀನು ಹಿಡಿಯಲು ತೆರಳಿ ನಾಪತ್ತೆಯಾಗಿದ್ದ ಮೂವರು ಯುವಕರ ಮೃತದೇಹಗಳು ಮೂರು ದಿನಗಳ ನಿರಂತರ ಶೋಧ ಕಾರ್ಯಾಚರಣೆಯ ನಂತರ ಪತ್ತೆಯಾಗಿವೆ. ಮೀನು ಹಿಡಿಯಲು ತೆರಳಿದ್ದ ಮೂವರು ಯುವಕರು ತುಂಗಭದ್ರಾ ಹಿನ್ನೀರಿನಲ್ಲಿ ಮುಳುಗಿ ನಾಪತ್ತೆಯಾಗಿದ್ದರು. ಘಟನೆ ಬೆಳಕಿಗೆ ಬರುತ್ತಿದ್ದಂತೆ…

ಕಳ್ಳತನ ತಡೆಗೆ ಉತ್ತರ ಕನ್ನಡ ಜಿಲ್ಲಾ ಪೊಲೀಸರ ‘ರಕ್ಷಾ’ ಕಾರ್ಯಕ್ರಮ

ದಾಂಡೇಲಿ (ಉತ್ತರ ಕನ್ನಡ) ಸಂ.ಕ. ಸಮಾಚಾರ: ಉತ್ತರ ಕನ್ನಡ ಜಿಲ್ಲೆಯಲ್ಲಿ ಮನೆಗಳ ಕಳ್ಳತನ ತಡೆಗಟ್ಟುವ ಹಾಗೂ ಸಾರ್ವಜನಿಕರ ಮನೆಗಳನ್ನು ಸುರಕ್ಷಿತವಾಗಿಡುವ ಉದ್ದೇಶದಿಂದ ಉತ್ತರ ಕನ್ನಡ ಜಿಲ್ಲಾ ಪೊಲೀಸ್ ಇಲಾಖೆ ‘ರಕ್ಷಾ’ (Locked House Beat System) ಎಂಬ ವಿಶೇಷ ಕಾರ್ಯಕ್ರಮವನ್ನು ಆರಂಭಿಸಿದೆ. ಈ ಕುರಿತು ಮಾಹಿತಿ ನೀಡಿರುವ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ದೀಪನ್ ಅವರು, ಜಿಲ್ಲೆಯ ನಗರ ಹಾಗೂ ಪಟ್ಟಣ ಪ್ರದೇಶಗಳಲ್ಲಿ ಕುಟುಂಬ ಸಮೇತ ಮನೆ ಬಿಟ್ಟು ಬೇರೆ ಊರಿಗೆ ತೆರಳುವ ಸಾರ್ವಜನಿಕರು ಈ…

ಕಂಟೆಂಟ್ ಕ್ರಿಯೇಟರ್‌ಗಳಿಗೆ ಭರ್ಜರಿ ಆಫರ್: ಸಿಗಲಿದೆ ಲಕ್ಷಾಂತರ ರೂ.!

ಡಿಜಿಟಲ್ ಪ್ರಚಾರಕ್ಕೆ ಬಿಹಾರ ಸರ್ಕಾರದ ಒತ್ತು : ಸೋಶಿಯಲ್ ಮೀಡಿಯಾ ಇನ್‌ಫ್ಲುಯೆನ್ಸರ್‌ಗಳಿಗೆ ಬಿಹಾರ ಸರ್ಕಾರದ ಭರ್ಜರಿ ಆಫರ್ – ವಿಡಿಯೋ ವೀಕ್ಷಣೆ ಆಧರಿಸಿ ಹಣ ಪಾವತಿ ಪಾಟ್ನಾ: ಸಾಮಾಜಿಕ ಮಾಧ್ಯಮಗಳಲ್ಲಿ ಸರ್ಕಾರದ ಯೋಜನೆಗಳು, ಅಭಿವೃದ್ಧಿ ಕಾರ್ಯಗಳು ಮತ್ತು ಜನಪರ ಕಾರ್ಯಕ್ರಮಗಳ ಕುರಿತು ಮಾಹಿತಿ ನೀಡುವ ಕಂಟೆಂಟ್ ಕ್ರಿಯೇಟರ್‌ಗಳು ಹಾಗೂ ಸೋಶಿಯಲ್ ಮೀಡಿಯಾ ಇನ್‌ಫ್ಲುಯೆನ್ಸರ್‌ಗಳಿಗೆ ಬಿಹಾರ ಸರ್ಕಾರ ಹೊಸ ರೀತಿಯ ಪ್ರೋತ್ಸಾಹ ನೀಡಲು ಮುಂದಾಗಿದೆ. ಸರ್ಕಾರಿ ಮಾಧ್ಯಮ ನಿಯಮಗಳ ಅಡಿಯಲ್ಲಿ ಆನ್‌ಲೈನ್…

ಕರ್ನಾಟಕ ನಾಟಕ ಅಕಾಡೆಮಿ 2026-27ರ ಪ್ರಶಸ್ತಿ ಪ್ರಕಟ: ಮುಖ್ಯಮಂತ್ರಿ ಚಂದ್ರುಗೆ ಜೀವಮಾನ ಸಾಧನೆ ಗೌರವ

ಬೆಂಗಳೂರು: ಕರ್ನಾಟಕ ನಾಟಕ ಅಕಾಡೆಮಿಯು 2026-27ನೇ ಸಾಲಿನ ಜೀವಮಾನ ಸಾಧನೆ ಗೌರವ ಪ್ರಶಸ್ತಿ, ವಾರ್ಷಿಕ ಪ್ರಶಸ್ತಿ ಹಾಗೂ ವಿವಿಧ ದತ್ತಿನಿಧಿ ಪ್ರಶಸ್ತಿಗಳ** ಪಟ್ಟಿಯನ್ನು ಆಗಸ್ಟ್ 20ರಂದು ಪ್ರಕಟಿಸಿದೆ. ರಂಗಭೂಮಿ, ಕಲೆ, ಸಾಂಸ್ಕೃತಿಕ ಕ್ಷೇತ್ರ ಹಾಗೂ ನಾಟಕ ಚಟುವಟಿಕೆಗಳಿಗೆ ಹಲವು ವರ್ಷಗಳಿಂದ ಗಣನೀಯ ಕೊಡುಗೆ ನೀಡಿರುವ ಸಾಧಕರನ್ನು ಗುರುತಿಸಿ ಈ ಪ್ರಶಸ್ತಿಗಳನ್ನು ನೀಡಲಾಗುತ್ತಿದೆ. ಈ ಬಾರಿಯ ಪ್ರಶಸ್ತಿ ಪಟ್ಟಿಯಲ್ಲಿ ಕನ್ನಡ ರಂಗಭೂಮಿ ಮತ್ತು ಸಿನಿಮಾ ಕ್ಷೇತ್ರದ ಹಿರಿಯ ನಟ, ರಂಗಕರ್ಮಿ ಡಾ.…

NEET ಪ್ರತಿಭಟನೆ: ಪೊಲೀಸ್ ಕ್ರಮದ ತನಿಖೆಗೆ ಸುಪ್ರೀಂ ಸಮಿತಿ ರಚನೆ

NEET ಪ್ರತಿಭಟನೆ ವೇಳೆ ಪೊಲೀಸ್ ಬಲಪ್ರಯೋಗ ಆರೋಪ: ಸುಪ್ರೀಂ ಕೋರ್ಟ್‌ನಿಂದ 5 ಸದಸ್ಯರ ಸಮಿತಿ ರಚನೆ ನವದೆಹಲಿ: NEET ಪರೀಕ್ಷಾ ಪ್ರಶ್ನೆಪತ್ರಿಕೆ ಸೋರಿಕೆ ಆರೋಪಕ್ಕೆ ಸಂಬಂಧಿಸಿದಂತೆ ವಿದ್ಯಾರ್ಥಿಗಳು ನಡೆಸಿದ ಪ್ರತಿಭಟನೆಯ ಸಂದರ್ಭದಲ್ಲಿ ಪೊಲೀಸ್ ಹಾಗೂ ಭದ್ರತಾ ಸಿಬ್ಬಂದಿ ಅತಿಯಾದ ಬಲಪ್ರಯೋಗ ಮಾಡಿದ್ದಾರೆಂಬ ಆರೋಪಗಳ ಕುರಿತು ತನಿಖೆ ನಡೆಸಲು ಸುಪ್ರೀಂ ಕೋರ್ಟ್ ಐದು ಸದಸ್ಯರ ಉನ್ನತ ಮಟ್ಟದ ಸಮಿತಿಯನ್ನು ರಚಿಸಿದೆ. ಮಾಜಿ ಸುಪ್ರೀಂ ಕೋರ್ಟ್ ನ್ಯಾಯಮೂರ್ತಿ ಆರ್. ಸುಭಾಷ್ ರೆಡ್ಡಿ ನೇತೃತ್ವದಲ್ಲಿ…

ಕಸ್ತೂರಿ ರಂಗನ್ ವರದಿ ತಿರಸ್ಕರಿಸಲು ಕೇಂದ್ರಕ್ಕೆ ರಾಜ್ಯದ ಶಿಫಾರಸು

ಕಸ್ತೂರಿ ರಂಗನ್ ವರದಿ ತಿರಸ್ಕಾರಕ್ಕೆ ರಾಜ್ಯದ ಶಿಫಾರಸು: ವಿಧಾನಸಭೆಯಲ್ಲಿ ಸರ್ಕಾರದ ನಿಲುವು ಸ್ಪಷ್ಟ ಬೆಂಗಳೂರು: ಕರ್ನಾಟಕದ ಸಾವಿರಕ್ಕೂ ಹೆಚ್ಚು ಗ್ರಾಮಗಳು ಹಾಗೂ ಪಶ್ಚಿಮಘಟ್ಟ ಪ್ರದೇಶದ ಮೇಲೆ ಪರಿಣಾಮ ಬೀರುವ ಕಸ್ತೂರಿ ರಂಗನ್ ವರದಿ ಕರಡು ಅಧಿಸೂಚನೆ ಕುರಿತು ವಿಧಾನಸಭೆಯಲ್ಲಿ ಮಹತ್ವದ ಚರ್ಚೆ ನಡೆಯಿತು. ವಿರಾಜಪೇಟೆ ಶಾಸಕ ಹಾಗೂ ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿ ಎ.ಎಸ್. ಪೊನ್ನಣ್ಣ ಅವರು ನಿಯಮ 69ರ ಅಡಿ ವಿಷಯ ಪ್ರಸ್ತಾಪಿಸಿ, ಪಶ್ಚಿಮಘಟ್ಟ ಭಾಗದ ರೈತರು ಮತ್ತು ಸಾರ್ವಜನಿಕರ ಆತಂಕ…

ಖನಿಜ ಕ್ಷೇತ್ರಕ್ಕೆ ಹೊಸ ದಿಕ್ಕು: 35 ವರ್ಷಗಳ ತೆರಿಗೆ ಸಂಘರ್ಷಕ್ಕೆ ಅಂತ್ಯ ಹಾಡುತ್ತಿದೆಯೇ 2026ರ ಮಸೂದೆ?

ಭಾರತದ ಆರ್ಥಿಕ ಭದ್ರತೆಯು ಕೇವಲ ಉದ್ಯಮ ಅಥವಾ ಕೃಷಿಯ ಮೇಲೆ ನಿಂತಿಲ್ಲ; ಅದು ಭೂಮಿಯ ಆಳದಲ್ಲಿರುವ ಖನಿಜಗಳ ಮೇಲೂ ಅವಲಂಬಿತವಾಗಿದೆ. ಉಕ್ಕು, ರಕ್ಷಣೆ, ಎಲೆಕ್ಟ್ರಿಕ್ ವಾಹನಗಳು (EV), ಮತ್ತು ನವೀಕರಿಸಬಹುದಾದ ಇಂಧನ ಕ್ಷೇತ್ರಗಳಿಗೆ ಅಗತ್ಯವಾದ ಖನಿಜಗಳ ಪೂರೈಕೆಯಲ್ಲಿ ಸ್ವಾವಲಂಬನೆ ಸಾಧಿಸುವುದು ದೇಶದ ಅತೀ ದೊಡ್ಡ ಆದ್ಯತೆಯಾಗಿದೆ. ಈ ನಿಟ್ಟಿನಲ್ಲಿ, ದಶಕಗಳಿಂದ ಗಣಿಗಾರಿಕೆ ಕ್ಷೇತ್ರವನ್ನು ಕಾಡುತ್ತಿದ್ದ ‘ತೆರಿಗೆ ಗೊಂದಲ’ಕ್ಕೆ ಪೂರ್ಣವಿರಾಮ ಇಡಲು ಕೇಂದ್ರ ಸರ್ಕಾರವು ‘ಗಣಿ ಮತ್ತು ಖನಿಜ…

ದಾವಣಗೆರೆ: ದಂಪತಿ ಸೇರಿ 2 ಮಕ್ಕಳು ನಾಪತ್ತೆ- CCTVಯಲ್ಲಿ ದೃಶ್ಯ ಸೆರೆ

ಬೆಂಗಳೂರಿಗೆ ಹೋಗಿ ಬರುವುದಾಗಿ ಹೇಳಿ ತೆರಳಿದ್ದ ಒಂದೇ ಕುಟುಂಬದ ನಾಲ್ವರು ನಾಪತ್ತೆ; ದಾವಣಗೆರೆಯಲ್ಲಿ ಆತಂಕ ದಾವಣಗೆರೆ: ಬೆಂಗಳೂರಿಗೆ ಹೋಗಿ ಬರುವುದಾಗಿ ಹೇಳಿ ಮನೆಯಿಂದ ತೆರಳಿದ್ದ ಒಂದೇ ಕುಟುಂಬದ ನಾಲ್ವರು ನಾಪತ್ತೆಯಾಗಿರುವ ಘಟನೆ ದಾವಣಗೆರೆಯಲ್ಲಿ ಆತಂಕಕ್ಕೆ ಕಾರಣವಾಗಿದೆ. ದಾವಣಗೆರೆ ಹೊರವಲಯದ ಬನಶಂಕರಿ ಬಡಾವಣೆಯ ನಿವಾಸಿಗಳಾದ ರಮೇಶ್‌ಕುಮಾರ್ (38), ಅವರ ಪತ್ನಿ ಜಯಶೀಲಾ (36), ಪುತ್ರ ಹಿತೇಶ್ (9) ಹಾಗೂ ಪುತ್ರಿ ಪ್ರೇರಣಾ (3) ಕಾಣೆಯಾಗಿದ್ದಾರೆ. ಆಗಸ್ಟ್ 14ರಂದು ಬೆಂಗಳೂರಿಗೆ ತೆರಳಿ…

ನಿಂತಿದ್ದ ಲಾರಿಗೆ ಕಾರು ಡಿಕ್ಕಿ: ಮೂವರು ಸಾವು, ಮೂವರಿಗೆ ಗಾಯ

ಹಾವೇರಿ: ನಿಂತಿದ್ದ ಲಾರಿಗೆ ಕಾರು ಡಿಕ್ಕಿ ಹೊಡೆದ ಪರಿಣಾಮ ಮೂವರು ಸ್ಥಳದಲ್ಲೇ ಮೃತಪಟ್ಟಿದ್ದು, ಮೂವರು ಗಾಯಗೊಂಡಿರುವ ಘಟನೆ ಹಾವೇರಿ ಜಿಲ್ಲೆಯ ರಾಣೇಬೆನ್ನೂರು ತಾಲ್ಲೂಕಿನ ಚಳಗೇರಿ ಗ್ರಾಮದ ಬಳಿಯ ರಾಷ್ಟ್ರೀಯ ಹೆದ್ದಾರಿ-48ರಲ್ಲಿ ಗುರುವಾರ ನಡೆದಿದೆ. ಚಳಗೇರಿ ಟೋಲ್ ಸಮೀಪದ ನಿಸರ್ಗ ಡಾಬಾ ಎದುರು ಈ ಭೀಕರ ಅಪಘಾತ ಸಂಭವಿಸಿದೆ. ರಾಣೇಬೆನ್ನೂರಿನಿಂದ ದಾವಣಗೆರೆ ಕಡೆಗೆ ಕಾರಿನಲ್ಲಿ ತೆರಳುತ್ತಿದ್ದ ವೇಳೆ ರಸ್ತೆ ಬದಿಯಲ್ಲಿ ನಿಂತಿದ್ದ ಲಾರಿಗೆ ಕಾರು ಡಿಕ್ಕಿ ಹೊಡೆದಿದೆ ಎನ್ನಲಾಗಿದೆ. ಅಪಘಾತದಲ್ಲಿ…

ವಿಶ್ವದ ಅತಿ ಎತ್ತರದ ಸೇತುವೆ ಮೇಲೂ ‘ವಂದೇ ಭಾರತ್’ ವೇಗ ಏರಿಕೆ!

ವಿಶ್ವದ ಅತಿ ಎತ್ತರದ ರೈಲು ಸೇತುವೆ ಮೇಲೆ 100 ಕಿಮೀ ವೇಗದಲ್ಲಿ ವಂದೇ ಭಾರತ್; ಕತ್ರಾ-ಬನಿಹಾಲ್ ರೈಲು ಸಂಚಾರಕ್ಕೆ ಹೊಸ ವೇಗ ಜಮ್ಮು-ಕಾಶ್ಮೀರ: ಭಾರತೀಯ ರೈಲ್ವೆಯ ಮಹತ್ವಾಕಾಂಕ್ಷೆಯ ಉಧಂಪುರ-ಶ್ರೀನಗರ-ಬಾರಾಮುಲ್ಲಾ ರೈಲು ಸಂಪರ್ಕ (USBRL) ಯೋಜನೆಯಲ್ಲಿ ಮತ್ತೊಂದು ಮಹತ್ವದ ಮೈಲಿಗಲ್ಲು ಸಾಧಿಸಲಾಗಿದೆ. ಜಮ್ಮು-ಕಾಶ್ಮೀರದ 111 ಕಿ.ಮೀ ಉದ್ದದ ಕತ್ರಾ-ಬನಿಹಾಲ್ ರೈಲು ವಿಭಾಗದಲ್ಲಿ ರೈಲುಗಳ ಗರಿಷ್ಠ ಅನುಮತಿಸಲಾದ ವೇಗವನ್ನು ಗಂಟೆಗೆ 100 ಕಿ.ಮೀಗೆ ಹೆಚ್ಚಿಸಲು ರೈಲ್ವೆ ಸಚಿವಾಲಯ ಅನುಮೋದನೆ ನೀಡಿದೆ.…

ದಕ್ಷಿಣ ವಲಯ ಮಂಡಳಿ ಸಭೆ: ಕರ್ನಾಟಕದ ಧ್ವನಿ ಮೊಳಗಿಸಿದ ಡಿಕೆಶಿ

‘ಬಲವಾದ ಭಾರತಕ್ಕೆ ಬಲವಾದ ದಕ್ಷಿಣ’: ಮಹಾಬಲಿಪುರಂ ಸಭೆಯಲ್ಲಿ ಕರ್ನಾಟಕದ ಪ್ರಮುಖ ಬೇಡಿಕೆಗಳ ಮಂಡನೆ – ₹65 ಸಾವಿರ ಕೋಟಿ ನಷ್ಟ: ಕರ್ನಾಟಕದ ತೆರಿಗೆ ಪಾಲು ಮರುಸ್ಥಾಪನೆಗೆ ಡಿ.ಕೆ. ಶಿವಕುಮಾರ್‌ ಒತ್ತಾಯ ಮಹಾಬಲಿಪುರಂ: ಕೇಂದ್ರ ಗೃಹ ಸಚಿವ ಹಾಗೂ ಸಹಕಾರ ಸಚಿವ ಅಮಿತ್ ಶಾ ಅವರ ಅಧ್ಯಕ್ಷತೆಯಲ್ಲಿ ತಮಿಳುನಾಡಿನ ಮಹಾಬಲಿಪುರಂನಲ್ಲಿ ನಡೆದ 31ನೇ ದಕ್ಷಿಣ ವಲಯ ಮಂಡಳಿ ಸಭೆಯಲ್ಲಿ ಕರ್ನಾಟಕದ ಪ್ರಮುಖ ಬೇಡಿಕೆಗಳು ಮತ್ತು ರಾಜ್ಯದ ಹಿತಾಸಕ್ತಿಗಳಿಗೆ ಸಂಬಂಧಿಸಿದ ಹಲವು ವಿಚಾರಗಳನ್ನು ಮುಖ್ಯಮಂತ್ರಿ ಡಿ.ಕೆ.…

ಮಂಡ್ಯದಲ್ಲಿ ಸೈನ್‌ಬೋರ್ಡ್‌ಗೆ ಡಿಕ್ಕಿ ಹೊಡೆದು ಬಸ್ ಪಲ್ಟಿ, ಇಬ್ಬರು ಸಾವು

ಮಂಡ್ಯದಲ್ಲಿ ಭೀಕರ ಬಸ್ ಅಪಘಾತ: ಸೈನ್‌ಬೋರ್ಡ್‌ಗೆ ಡಿಕ್ಕಿ ಹೊಡೆದು ಪಲ್ಟಿ, ಇಬ್ಬರು ಸಾವು; 20ಕ್ಕೂ ಹೆಚ್ಚು ಮಂದಿಗೆ ಗಾಯ ಮಂಡ್ಯ: ಹೆದ್ದಾರಿಯ ಸೈನ್‌ಬೋರ್ಡ್‌ಗೆ ಖಾಸಗಿ ಬಸ್ ಡಿಕ್ಕಿ ಹೊಡೆದು ನಿಯಂತ್ರಣ ತಪ್ಪಿ ಪಲ್ಟಿಯಾದ ಪರಿಣಾಮ ಇಬ್ಬರು ಸ್ಥಳದಲ್ಲೇ ಮೃತಪಟ್ಟಿದ್ದು, 20ಕ್ಕೂ ಹೆಚ್ಚು ಪ್ರಯಾಣಿಕರು ಗಾಯಗೊಂಡಿರುವ ಘಟನೆ ಮಂಡ್ಯ ಜಿಲ್ಲೆಯ ನಾಗಮಂಗಲ ತಾಲೂಕಿನಲ್ಲಿ ನಡೆದಿದೆ. ಮಂಗಳೂರಿನಿಂದ ಬೆಂಗಳೂರಿನತ್ತ ತೆರಳುತ್ತಿದ್ದ ಖಾಸಗಿ ಬಸ್‌ ಬೆಳ್ಳೂರು ಟೋಲ್ ಸಮೀಪ ಹೆದ್ದಾರಿಯಲ್ಲಿ ಸಂಚರಿಸುತ್ತಿದ್ದ…

ಬಳ್ಳಾರಿಯಲ್ಲಿ ಭಾರೀ ಅಕ್ರಮ ಔಷಧ ದಂಧೆ ಬಯಲು: ಔಷಧ ಜಪ್ತಿ

ಬಳ್ಳಾರಿಯಲ್ಲಿ ಬೃಹತ್ ಅಕ್ರಮ ಔಷಧ ದಂಧೆ ಬಯಲು : ಪರವಾನಗಿ ಇಲ್ಲದೆ ಕೋಟಿಗೂ ಅಧಿಕ ಮೌಲ್ಯದ ಔಷಧ ಸಂಗ್ರಹ; ₹84 ಲಕ್ಷದಷ್ಟು ಔಷಧ ಜಪ್ತಿ ಬಳ್ಳಾರಿ: ನಗರದ ವಿವಿಧೆಡೆ ಪರವಾನಗಿ ಪಡೆಯದೆ ಬೃಹತ್ ಪ್ರಮಾಣದಲ್ಲಿ ಔಷಧಿಗಳನ್ನು ಸಂಗ್ರಹಿಸಿ, ಕಳ್ಳಸಂತೆಯಲ್ಲಿ ಅರ್ಧ ಬೆಲೆಗೆ ಮಾರಾಟ ಮಾಡುತ್ತಿದ್ದ ಆರೋಪದ ಹಿನ್ನೆಲೆಯಲ್ಲಿ ಔಷಧ ನಿಯಂತ್ರಣ ಇಲಾಖೆ ಅಧಿಕಾರಿಗಳು ನಡೆಸಿದ ದಾಳಿಯಲ್ಲಿ ಕೋಟಿಗೂ ಅಧಿಕ ಮೌಲ್ಯದ ಔಷಧ ದಂಧೆ ಬಯಲಾಗಿದೆ. ನಗರದಲ್ಲಿ ‘ಮಹಾವೀರ್ ಮೆಡಿಕಲ್’ ಹೆಸರಿನಲ್ಲಿ ನಡೆಯುತ್ತಿದ್ದ ಎನ್ನಲಾದ…