RSS Amplifier

News source

News First Live - News First is a Pioneering 24x7 Kannada News Channel : Latest Posts

RSS Feed

newsfirstlive.comSource feed ↗84 articles

Live Last read · last published · next check

Written by

Latest articles

ನಾಗೇಂದ್ರ ರಾಜೀನಾಮೆ ‘ಕರ್ಮದ ಫಲ’: ಜನಾರ್ದನ ರೆಡ್ಡಿ ವಾಗ್ದಾಳಿ

ಬಳ್ಳಾರಿ: ಮಾಜಿ ಸಚಿವ ನಾಗೇಂದ್ರ ರಾಜೀನಾಮೆ ವಿಚಾರವಾಗಿ ಶಾಸಕ ಜನಾರ್ದನ ರೆಡ್ಡಿ ಕಾಂಗ್ರೆಸ್ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ್ದಾರೆ. ವಾಲ್ಮೀಕಿ ಅಭಿವೃದ್ಧಿ ನಿಗಮದ ಹಣದಲ್ಲಿ ಭ್ರಷ್ಟಾಚಾರ ನಡೆದಿದೆ ಎಂದು ಆರೋಪಿಸಿರುವ ಅವರು, ನಾಗೇಂದ್ರ ಅವರ ರಾಜೀನಾಮೆ 'ಕರ್ಮದ ಫಲ' ಎಂದು ಹೇಳಿದ್ದಾರೆ. 'ಕರ್ಮದ ಫಲದಿಂದ ನಾಗೇಂದ್ರ ರಾಜೀನಾಮೆ' ವಾಲ್ಮೀಕಿ ಅಭಿವೃದ್ಧಿ ನಿಗಮದಲ್ಲಿ ನಾಗೇಂದ್ರ ಭ್ರಷ್ಟಾಚಾರ ಮಾಡಿದ್ದಾರೆ ಎಂದು ಆರೋಪಿಸಿದ ಜನಾರ್ದನ ರೆಡ್ಡಿ, ಇದೀಗ ಅವರ ರಾಜೀನಾಮೆ ಕರ್ಮದ ಫಲ ಎಂದು…

6 ದಿನಗಳ ನೇಪಾಳ ಪ್ರವಾಸ ಯಶಸ್ವಿ: ಜಲಪ್ರಳಯದ ನಡುವೆಯೂ ಹಾವೇರಿಯ 12 ಮಂದಿ ಸುರಕ್ಷಿತ

ಹಾವೇರಿ: ನೇಪಾಳದಲ್ಲಿ ಸಂಭವಿಸಿದ ಭೀಕರ ಜಲಪ್ರಳಯದ ಆತಂಕದ ನಡುವೆಯೂ ಹಾವೇರಿ ಜಿಲ್ಲೆಯ 12 ಮಂದಿ ಕನ್ನಡಿಗರು ಸುರಕ್ಷಿತವಾಗಿ ಪ್ರವಾಸ ಮುಗಿಸಿಕೊಂಡು ಇಂದು ಬೆಂಗಳೂರಿಗೆ ವಾಪಸ್ ಆಗುತ್ತಿದ್ದಾರೆ. ಹಾವೇರಿ ಜಿಲ್ಲೆಯ ರಟ್ಟಿಹಳ್ಳಿ ಪಟ್ಟಣದ ಆರು ಕುಟುಂಬಗಳ ಸದಸ್ಯರು ನೇಪಾಳ ಪ್ರವಾಸಕ್ಕೆ ತೆರಳಿದ್ದರು. 6 ಕುಟುಂಬಗಳ 12 ಮಂದಿ ಸುರಕ್ಷಿತ ರಟ್ಟಿಹಳ್ಳಿ ಪಟ್ಟಣದ ವ್ಯಾಪಾರಸ್ಥರು, ಗುತ್ತಿಗೆದಾರರು ಸೇರಿದಂತೆ ಆರು ಕುಟುಂಬಗಳ 12 ಮಂದಿ ನೇಪಾಳ ಪ್ರವಾಸಕ್ಕೆ ತೆರಳಿದ್ದರು. ಪ್ರವಾಸದ ವೇಳೆ ಯಾವುದೇ ತೊಂದರೆ…

ನಾಗೇಂದ್ರ ವಿರುದ್ಧ 35 ಕೇಸ್? ‘ತಪ್ಪು ಮಾಡಿದವರಿಗೆ ಶಿಕ್ಷೆಯಾಗಲೇಬೇಕು’ ಎಂದ ಆರ್. ಅಶೋಕ್

ಬೆಂಗಳೂರು: ಮಾಜಿ ಸಚಿವ ನಾಗೇಂದ್ರ ರಾಜೀನಾಮೆ ವಿಚಾರವಾಗಿ ಪ್ರತಿಪಕ್ಷ ನಾಯಕ ಆರ್. ಅಶೋಕ್ ರಾಜ್ಯ ಸರ್ಕಾರದ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ್ದಾರೆ. ನಾಗೇಂದ್ರ ವಿರುದ್ಧದ ಪ್ರಕರಣಗಳು, ರಾಜೀನಾಮೆ ಹಾಗೂ ವಾಲ್ಮೀಕಿ ಅಭಿವೃದ್ಧಿ ನಿಗಮದ ಹಣದ ಅಕ್ರಮ ವಿಚಾರದಲ್ಲಿ ಬಿಜೆಪಿ ನಡೆಸಿದ ಹೋರಾಟದ ಪರಿಣಾಮವೇ ರಾಜೀನಾಮೆ ಎಂದು ಅವರು ಹೇಳಿದ್ದಾರೆ. ಅಲ್ಲದೆ, ನಾಗೇಂದ್ರ ವಿರುದ್ಧ ಲೋಕಾಯುಕ್ತದಲ್ಲಿ 12 ಪ್ರಕರಣಗಳಿದ್ದು, ಒಟ್ಟಾರೆ 35 ಪ್ರಕರಣಗಳಿವೆ ಎಂದು ಅಶೋಕ್ ಆರೋಪಿಸಿದ್ದಾರೆ. 'ಸುಮ್ಮನೆ ನಾಗೇಂದ್ರ…

ಅಂದು ಆಡಿಷನ್​​ಗಳಲ್ಲಿ ರಿಜೆಕ್ಟ್​​, ಇಂದು ಟಾಕ್ಸಿಕ್​​​ ಸಕ್ಸಸ್​​ಗೆ ಈಕೆನೇ ಕಾರಣ!

After a Very Long time..ಏನ್​ Acting ಗುರು ಅಂತಾ ಅನ್ನಿಸಿದ್ದು ..ಇವತ್ತು ಟಾಕ್ಸಿಕ್​ ಬಗ್ಗೆ ಒಳ್ಳೆಯ ಅಭಿಪ್ರಾಯಗಳೂ ವ್ಯಕ್ತವಾಗುತ್ತಿದ್ದರೆ ಅದಕ್ಕೆ ಪ್ರಮುಖ ಕಾರಣ, ಇದೇ ಕಿಯಾರ..ಕಿಯಾರ ಅಡ್ವಾಣಿ..ಎಂಥಾ ಪ್ರತಿಭಾವಂತ ಕಲಾವಿದೆ.. Once Upon ಟೈಮ್​ ಒಂದು ಪಾತ್ರಕ್ಕಾಗಿ ಸಿಕ್ಕಾಪಟ್ಟೆ ಅಲೆಯುತ್ತಿದ್ದ ನಟಿ..ಎಷ್ಟೇ ಆಡಿಷನ್ಸ್​ ಕೊಟ್ರೂ ರಿಜೆಕ್ಟೆಡ್​ ಎನ್ನುವ ಪದ ಕೇಳಿ ಕೇಳಿ ಬೇಸತ್ತು ಹೋಗಿದ್ದ ಕಿಯಾರ​ ಇವತ್ತು ಟಾಕ್ಸಿಕ್ ಎನ್ನುವ ಪ್ಯಾನ್ ವರ್ಲ್ಡ್​ ಸಿನಿಮಾದ ಮೇನ್​…

ನೇಪಾಳ ದುರಂತ ಮತ್ತಷ್ಟು ಭೀಕರ: ಸಾ*ವಿನ ಸಂಖ್ಯೆ 579ಕ್ಕೆ ಏರಿಕೆ, 2 ಸಾವಿರಕ್ಕೂ ಹೆಚ್ಚು ಮಂದಿ ನಾಪತ್ತೆ!

ನೇಪಾಳದಲ್ಲಿ ಸಂಭವಿಸಿದ ಭೀಕರ ದುರಂತ ದಿಂದ ಸಾ*ವಿನ ಸಂಖ್ಯೆ 579ಕ್ಕೆ ಏರಿಕೆಯಾಗಿದ್ದು, 1,900ಕ್ಕೂ ಹೆಚ್ಚು ಮಂದಿ ನಾಪತ್ತೆಯಾಗಿದ್ದಾರೆ. ಟಿಬೆಟ್ ಸೇರಿದಂತೆ ಗಡಿ ಪ್ರದೇಶದ ಅಂಕಿ-ಅಂಶಗಳನ್ನು ಸೇರಿಸಿದರೆ ನಾಪತ್ತೆಯಾದವರ ಸಂಖ್ಯೆ 2,400ಕ್ಕೂ ಹೆಚ್ಚು ಎಂದು ವರದಿಯಾಗಿದೆ. ರಕ್ಷಣಾ ಕಾರ್ಯಾಚರಣೆ ಮುಂದುವರಿದಿದ್ದು, ಹೊಸ ಪ್ರವಾಹದ ಆತಂಕವೂ ಎದುರಾಗಿದೆ. ಕರ್ನಾಟಕದ ಇನ್ಪೋಸಿಸ್ ನ ಎಕ್ಸಿಕ್ಯೂಟಿವ್ ಲಕ್ಷ್ಯ ಗೋಪಿಶೆಟ್ಟಿ ನಾಪತ್ತೆ ನೇಪಾಳಕ್ಕೆ ವೈಯಕ್ತಿಕ ಉದ್ದೇಶದಿಂದ ತೆರಳಿದ್ದ ಇನ್ಪೋಸಿಸ್…

ವಿದ್ಯಾರ್ಥಿಗಳ ಊಟದಲ್ಲಿ ಅವಧಿ ಮೀರಿದ ಆಹಾರ! 34 ಹಾಸ್ಟೆಲ್ ಕ್ಯಾಂಟೀನ್‌ಗಳ ಮೇಲೆ ಅಧಿಕಾರಿಗಳ ದಾಳಿ

ಬೆಂಗಳೂರು: ವಿದ್ಯಾರ್ಥಿಗಳಿಗೆ ನೀಡಲಾಗುತ್ತಿರುವ ಆಹಾರದ ಗುಣಮಟ್ಟ ಮತ್ತು ನೈರ್ಮಲ್ಯ ಪರಿಶೀಲಿಸಲು ಆಹಾರ ಸುರಕ್ಷತಾ ಇಲಾಖೆ ಅಧಿಕಾರಿಗಳು ನಗರದ 34 ಸರ್ಕಾರಿ ಹಾಗೂ ಖಾಸಗಿ ವೈದ್ಯಕೀಯ ಕಾಲೇಜುಗಳ ಹಾಸ್ಟೆಲ್ ಕ್ಯಾಂಟೀನ್ ಗಳ ಮೇಲೆ ದಾಳಿ ನಡೆಸಿದ್ದಾರೆ. ದಾಳಿ ವೇಳೆ ಹಲವು ಕ್ಯಾಂಟೀನ್ ಗಳಲ್ಲಿ ಆಹಾರ ಸುರಕ್ಷತಾ ನಿಯಮಗಳ ಉಲ್ಲಂಘನೆ ಕಂಡುಬಂದಿದ್ದು, ಅವಧಿ ಮೀರಿದ ಆಹಾರ ಪದಾರ್ಥಗಳನ್ನು ಜಪ್ತಿ ಮಾಡಲಾಗಿದೆ. 34 ಕಾಲೇಜು ಹಾಸ್ಟೆಲ್ ಕ್ಯಾಂಟೀನ್ ಗಳ ಪರಿಶೀಲನೆ ವೈದ್ಯಕೀಯ ಕಾಲೇಜುಗಳ ಹಾಸ್ಟೆಲ್ ಗಳಲ್ಲಿ…

ತುಮಕೂರು ಭೀಕರ ಅಪಘಾತ: ಎರಡು ಕಾರುಗಳ ಮುಖಾಮುಖಿ ಡಿಕ್ಕಿ, ನಾಲ್ವರು ಸಾ*ವು

ತುಮಕೂರು: ಎರಡು ಕಾರುಗಳ ನಡುವೆ ಮುಖಾಮುಖಿ ಡಿಕ್ಕಿಯಾಗಿ ಸಂಭವಿಸಿದ ಭೀಕರ ರಸ್ತೆ ಅಪಘಾತದಲ್ಲಿ ನಾಲ್ವರು ಸ್ಥಳದಲ್ಲೇ ಮೃ*ತಪಟ್ಟಿದ್ದು, ಮೂವರು ಗಂಭೀರವಾಗಿ ಗಾಯಗೊಂಡಿರುವ ಘಟನೆ ತುಮಕೂರು ಜಿಲ್ಲೆಯ ಚಿಕ್ಕನಾಯಕನಹಳ್ಳಿ ತಾಲೂಕಿನ ಗೋಡೆಕೆರೆ ಗೇಟ್ ಬಳಿ ನಡೆದಿದೆ. ಅಪಘಾತದಲ್ಲಿ ಕಾರಿನಲ್ಲಿದ್ದ ಗರ್ಭಿಣಿ ಮಹಿಳೆಗೂ ಗಂಭೀರ ಗಾಯಗಳಾಗಿದ್ದು, ಗಾಯಾಳುಗಳನ್ನು ಚಿಕ್ಕನಾಯಕನಹಳ್ಳಿ ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಎರಡು ಕಾರುಗಳ ನಡುವೆ ಭೀಕರ ಮುಖಾಮುಖಿ ಡಿಕ್ಕಿ ಮಾಹಿತಿ ಪ್ರಕಾರ, ತುರುವೇಕೆರೆ…

ಹಳೇ ಮೆಟ್ರೋ ರೈಲುಗಳಿಗೆ ‘ಸರ್ಜರಿ’! 15 ವರ್ಷಗಳ ಬಳಿಕ BMRCLನಿಂದ Mid-Life Overhaul

ಬೆಂಗಳೂರು: ನಗರದಲ್ಲಿ ಮೆಟ್ರೋ ಪ್ರಯಾಣಿಕರಿಗೆ ಮತ್ತಷ್ಟು ಸುರಕ್ಷಿತ ಹಾಗೂ ಸುಗಮ ಸೇವೆ ಒದಗಿಸಲು BMRCL (Bangalore Metro Rail Corporation Limited) ಮಹತ್ವದ ನಿರ್ವಹಣಾ ಕಾರ್ಯಕ್ಕೆ ಮುಂದಾಗಿದೆ. ಹೊಸ ಮೆಟ್ರೋ ರೈಲುಗಳ ಸೇರ್ಪಡೆ ಬೆನ್ನಲ್ಲೇ, ಹಲವು ವರ್ಷಗಳಿಂದ ಸೇವೆ ಸಲ್ಲಿಸುತ್ತಿರುವ ಹಳೆಯ ಮೆಟ್ರೋ ರೈಲುಗಳಿಗೆ Mid-Life Overhaul (ಮಿಡ್-ಲೈಫ್ ಓವರ್ ಹಾಲ್) ಮಾಡಲು ಸಿದ್ಧತೆ ನಡೆದಿದೆ. ಸುಮಾರು 15 ವರ್ಷಗಳ ಬಳಿಕ ಇದೇ ಮೊದಲ ಬಾರಿಗೆ ಹಳೆಯ ಮೆಟ್ರೋ ರೈಲುಗಳಿಗೆ ದೊಡ್ಡ ಪ್ರಮಾಣದ…

ಪತ್ನಿಯ ಪಾಸ್‌ಪೋರ್ಟ್, ₹10 ಲಕ್ಷ ಹಣ ತೆಗೆದುಕೊಂಡು ಮತ್ತೊಬ್ಬ ಮಹಿಳೆಯೊಂದಿಗೆ ಗಂಡ ಪರಾರಿ? ಸೆನೆಗಲ್​​ನಲ್ಲಿ ಪತ್ನಿ ಪರದಾಟ!

ಶಿವಮೊಗ್ಗ: ವ್ಯಾಪಾರಕ್ಕಾಗಿ ಪಶ್ಚಿಮ ಆಫ್ರಿಕಾದ ಸೆನೆಗಲ್ ದೇಶಕ್ಕೆ ತೆರಳಿದ್ದ ಶಿವಮೊಗ್ಗ ಮೂಲದ ದಂಪತಿಯ ದಾಂಪತ್ಯದಲ್ಲಿ ಇದೀಗ ಬಿರುಕು ಮೂಡಿದೆ ಎನ್ನಲಾಗಿದೆ. ಪತಿ ತನ್ನ ಪಾಸ್ ಪೋರ್ಟ್, ಪತ್ನಿಯ ಪಾಸ್ ಪೋರ್ಟ್ ಹಾಗೂ ಸುಮಾರು ₹10 ಲಕ್ಷ ಹಣವನ್ನು ತೆಗೆದುಕೊಂಡು ಮತ್ತೊಬ್ಬ ಮಹಿಳೆಯೊಂದಿಗೆ ಪರಾರಿಯಾಗಿದ್ದಾನೆ ಎಂದು ಪತ್ನಿ ಆರೋಪಿಸಿದ್ದಾರೆ. ಪತಿ ಪರಾರಿಯಾದ ಬಳಿಕ ವಿದೇಶದಲ್ಲಿ ಸಿಲುಕಿರುವ ಪತ್ನಿ ಜಲಕನ್ಯಾ, ತವರಿಗೆ ಮರಳಲಾಗದೆ ಹಾಗೂ ಸೆನೆಗಲ್ ನಲ್ಲೂ ಉಳಿಯಲಾಗದೆ ಸಂಕಷ್ಟಕ್ಕೆ ಸಿಲುಕಿದ್ದಾರೆ…

ಮಂಡ್ಯ ಪೊಲೀಸರ ಯಡವಟ್ಟು: ಠಾಣೆಯಿಂದ ಬೇಡಿ ಹಾಕಿದ್ದ ಕಳ್ಳ ಎಸ್ಕೇಪ್, ಸಾರ್ವಜನಿಕರ ಕೈಗೆ ಲಾಕ್!

ಮಂಡ್ಯ: ಪೊಲೀಸರ ಕಣ್ತಪ್ಪಿಸಿ ಕೈಗೆ ಬೇಡಿ ಹಾಕಿದ್ದ ಸ್ಥಿತಿಯಲ್ಲೇ ಕಳ್ಳನೊಬ್ಬ ಪೊಲೀಸ್ ಠಾಣೆಯಿಂದ ಪರಾರಿಯಾಗಿರುವ ಘಟನೆ ಮಂಡ್ಯದ ಗಾಂಧಿನಗರದಲ್ಲಿ ನಡೆದಿದೆ. ಠಾಣೆಯಿಂದ ತಪ್ಪಿಸಿಕೊಂಡು ಮನೆಯೊಂದರ ಕಾಂಪೌಂಡ್ ಹಾರುತ್ತಿದ್ದ ವೇಳೆ ಅನುಮಾನಗೊಂಡ ಸ್ಥಳೀಯರು ಆತನನ್ನು ಹಿಂಬಾಲಿಸಿ ಹಿಡಿದು ಪೊಲೀಸರಿಗೆ ಒಪ್ಪಿಸಿದ್ದಾರೆ. ಠಾಣೆಯಿಂದಲೇ ಕಳ್ಳನ ಎಸ್ಕೇಪ್ ಕಳ್ಳತನ ಆರೋಪದಡಿ ವ್ಯಕ್ತಿಯೊಬ್ಬನನ್ನು ಮಂಡ್ಯ ಗ್ರಾಮಾಂತರ ಪೊಲೀಸ್ ಠಾಣೆಗೆ ಪೊಲೀಸರು ಕರೆತಂದಿದ್ದರು. ವಿಚಾರಣೆ ಹಾಗೂ ಕಾನೂನು ಪ್ರಕ್ರಿಯೆ…

ಯಲ್ಲಮ್ಮನ ಹುಂಡಿಯಲ್ಲಿ ವಿದೇಶಿ ಕರೆನ್ಸಿ ಪತ್ತೆ! ಕಲಬುರಗಿ ನಾಗಾವಿ ದೇಗುಲದಲ್ಲಿ ₹16.32 ಲಕ್ಷ ಕಾಣಿಕೆ ಎಣಿಕೆ ವೇಳೆ ಅಚ್ಚರಿ

ಕಲಬುರಗಿ: ಕಲಬುರಗಿ ಜಿಲ್ಲೆಯ ಚಿತ್ತಾಪುರ ಪಟ್ಟಣ ಹೊರವಲಯದಲ್ಲಿರುವ ನಾಗಾವಿ ಯಲ್ಲಮ್ಮ ದೇಗುಲದ ಹುಂಡಿ ಹಣ ಎಣಿಕೆ ವೇಳೆ ವಿವಿಧ ದೇಶಗಳ ವಿದೇಶಿ ಕರೆನ್ಸಿ ಪತ್ತೆಯಾಗಿದ್ದು ಅಚ್ಚರಿಗೆ ಕಾರಣವಾಗಿದೆ. ತಹಶೀಲ್ದಾರ್ ನಾಗಯ್ಯ ಅವರ ನೇತೃತ್ವದಲ್ಲಿ ಕಂದಾಯ ಇಲಾಖೆ ಸಿಬ್ಬಂದಿ ಹುಂಡಿಯಲ್ಲಿದ್ದ ಹಣವನ್ನು ಎಣಿಕೆ ಮಾಡಿದರು. ಈ ವೇಳೆ ಭಾರತೀಯ ಕರೆನ್ಸಿಯ ಜೊತೆಗೆ ವಿವಿಧ ದೇಶಗಳ ನೋಟುಗಳು ಹಾಗೂ ನಾಣ್ಯಗಳು ಪತ್ತೆಯಾಗಿವೆ. ಕೆನಡಾ, ಯುಎಇ, ಯುಎಸ್ ಎ ಕರೆನ್ಸಿ: ನಾಲ್ಕು ದೇಶಗಳ ಕರೆನ್ಸಿ ಪತ್ತೆ ಹುಂಡಿ ಹಣ…

ಕೆಪಿಎಸ್ಸಿಯಲ್ಲಿ ಭಾರೀ ಅಕ್ರಮದ ಆರೋಪ: ದಾಖಲೆ ಬಿಡುಗಡೆ ಮಾಡಿ ಪ್ರಿಯಾಂಕ್ ಖರ್ಗೆ ರಾಜೀನಾಮೆಗೆ ಹೆಚ್​​.ಡಿ. ಕುಮಾರಸ್ವಾಮಿ ಆಗ್ರಹ

ಬೆಂಗಳೂರು: ಕರ್ನಾಟಕ ಲೋಕಸೇವಾ ಆಯೋಗದ KPSC AEE ನೇಮಕಾತಿಗೆ ಸಂಬಂಧಿಸಿದಂತೆ ಗಂಭೀರ ಅಕ್ರಮ ಆರೋಪಗಳು ಕೇಳಿಬಂದಿವೆ. ಕೇಂದ್ರ ಸಚಿವ ಎಚ್.ಡಿ. ಕುಮಾರಸ್ವಾಮಿ ಅವರು ದಾಖಲೆಗಳನ್ನು ಉಲ್ಲೇಖಿಸಿ, ತನಿಖೆ ಪೂರ್ಣಗೊಳ್ಳುವ ಮುನ್ನವೇ ಅಂತಿಮ ಆಯ್ಕೆ ಪಟ್ಟಿ ಪ್ರಕಟಿಸಿದ್ದಾರೆ ಎಂದು ಆರೋಪಿಸಿದ್ದಾರೆ. ಕೆಲ ಅಭ್ಯರ್ಥಿಗಳ ಆಯ್ಕೆ ಪ್ರಕ್ರಿಯೆ ಕುರಿತು ದೂರುಗಳು ಬಂದಿದ್ದರೂ, OMR ಶೇಟ್​, ಕಾರ್ಬನ್​​ ಕಾಪಿ ಮತ್ತು CCTV ದೃಶ್ಯ ಪರಿಶೀಲನೆಗೆ ಸಂಬಂಧಿಸಿದ ಪ್ರಕ್ರಿಯೆ ಪೂರ್ಣಗೊಳ್ಳುವ ಮೊದಲೇ ಅಂತಿಮ ಪಟ್ಟಿ…

ರಾಜ್ಯದಲ್ಲಿ ರೋಗಿಗಳ ಜೀವಕ್ಕೆ ನಕಲಿ-ಕಳಪೆ ಔಷಧಗಳ ಕಂಟಕ! 6 ವರ್ಷದಲ್ಲಿ 98 NSQ Drugs ಪತ್ತೆ

ಬೆಂಗಳೂರು: ರಾಜ್ಯದಲ್ಲಿ ರೋಗಿಗಳ ಆರೋಗ್ಯ ಮತ್ತು ಜೀವಕ್ಕೆ ಕಳಪೆ ಹಾಗೂ ಕಡಿಮೆ ಗುಣಮಟ್ಟದ ಔಷಧಗಳು ಆತಂಕ ಮೂಡಿಸಿವೆ. ಸರ್ಕಾರದ ದಾಖಲೆಗಳ ಪ್ರಕಾರ, 2021ರಿಂದ 2026ರ ಆಗಸ್ಟ್ 18ರವರೆಗೆ ಒಟ್ಟು 98 NSQ - Not of Standard Quality ಔಷಧಗಳು ಪತ್ತೆಯಾಗಿವೆ. ಈ ಪೈಕಿ ಮಾತ್ರೆ ಮತ್ತು ಸಿರಪ್ ರೂಪದ ಔಷಧಗಳು ಹೆಚ್ಚಾಗಿ ಪತ್ತೆಯಾಗಿರುವುದು ಆರೋಗ್ಯ ಇಲಾಖೆಗೆ ಹೊಸ ಸವಾಲಾಗಿ ಪರಿಣಮಿಸಿದೆ. NSQ ಔಷಧಗಳು : ಯಾವ ವರ್ಷ ಎಷ್ಟು ಕಳಪೆ ಔಷಧ ಪತ್ತೆ? ವರ್ಷ ಎನ್ ಎಸ್ ಕ್ಯೂ ಔಷಧಗಳು 2021 16 2022 15…

ನ್ಯೂಸ್ ಫಸ್ಟ್ IMPACT: ಲಕ್ಷ್ಮಣತೀರ್ಥ ನದಿ ಕಲುಷಿತ ಪ್ರಕರಣಕ್ಕೆ ಸಂಸದರ ಎಂಟ್ರಿ!

ಮೈಸೂರು: ಲಕ್ಷ್ಮಣತೀರ್ಥ ನದಿಗೆ ಕಲುಷಿತ ನೀರು ಸೇರುತ್ತಿರುವ ಪ್ರಕರಣಕ್ಕೆ ಸಂಬಂಧಿಸಿದಂತೆ ನ್ಯೂಸ್ ಫಸ್ಟ್ ವರದಿಯ ಬಳಿಕ ಮಹತ್ವದ ಬೆಳವಣಿಗೆ ನಡೆದಿದೆ. ಸಂಸದ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ಹುಣಸೂರಿಗೆ ಭೇಟಿ ನೀಡಿ, ಕಾವೇರಿ ನೀರು ಮತ್ತಷ್ಟು ಕಲುಷಿತಗೊಳ್ಳದಂತೆ ಕ್ರಮ ಕೈಗೊಳ್ಳುವ ಭರವಸೆ ನೀಡಿದ್ದಾರೆ. ಪರಿಶೀಲಿಸಿದ ಸಂಸದ ಯದುವೀರ್​ ಒಡೆಯರ್​​ ಲಕ್ಷ್ಮಣತೀರ್ಥ ನದಿಗೆ ಕಲುಷಿತ ನೀರು ಸೇರುತ್ತಿರುವ ಆರೋಪದ ಕುರಿತು News First ವಿಸ್ತೃತ ವರದಿ ಪ್ರಸಾರ ಮಾಡಿತ್ತು. ವರದಿಯ ಬಳಿಕ ಸಮಸ್ಯೆ…

ಕಲಬುರಗಿಯಲ್ಲಿ ಹೃದಯವಿದ್ರಾವಕ ಘಟನೆ: 4 ವರ್ಷದ ಮಗನನ್ನೇ ಜಲಾಶಯಕ್ಕೆ ಬಿಸಾಡಿ ಕೊಂ*ದ ಪಾಪಿ ತಂದೆ!

ಕಲಬುರಗಿ: ನಾಲ್ಕು ವರ್ಷದ ಸ್ವಂತ ಮಗನನ್ನೇ ಜಲಾಶಯಕ್ಕೆ ಬಿಸಾಡಿ ಕೊ*ಲೆ ಮಾಡಿರುವ ಹೃದಯವಿದ್ರಾವಕ ಘಟನೆ ಕಲಬುರಗಿ ಜಿಲ್ಲೆಯ ಚಿಂಚೋಳಿ ತಾಲೂಕಿನ ಹಸರಗುಂಡಗಿ ಗ್ರಾಮದಲ್ಲಿ ನಡೆದಿದೆ. ಮೃ*ತ ಬಾಲಕನನ್ನು ಗುಂಡೇಶ (4) ಎಂದು ಗುರುತಿಸಲಾಗಿದೆ. ಬಾಲಕನ ತಂದೆ ಸೋಮರಾವ್ ಹೂಗಾರ್ ತನ್ನ ಮಗನನ್ನು ಜಲಾಶಯಕ್ಕೆ ಬಿಸಾಡಿ ಕೊ*ಲೆ ಮಾಡಿದ್ದಾನೆ ಎಂಬ ಆರೋಪ ಕೇಳಿಬಂದಿದೆ. ಆಟವಾಡುತ್ತಿದ್ದ ಮಗನನ್ನು ಕರೆದುಕೊಂಡು ಹೋದ ತಂದೆ ಮಾಹಿತಿಯ ಪ್ರಕಾರ, ಸೋಮರಾವ್ ತನ್ನ ನಾಲ್ಕು ವರ್ಷದ ಮಗ ಗುಂಡೇಶನ ಜೊತೆ ಕೆಲ ಸಮಯ…

ನೇಪಾಳದಲ್ಲಿ ಭೀಕರ ಪ್ರವಾಹ: 469 ಮಂದಿ ಸಾ*ವು, 1,498 ಮಂದಿ ನಾಪತ್ತೆ!

ಕಠ್ಮಂಡು: ನೇಪಾಳದಲ್ಲಿ ಸಂಭವಿಸಿದ ಭೀಕರ ಪ್ರವಾಹ ಮತ್ತು ಪ್ರಕೃತಿ ವಿಕೋಪದಿಂದ ಪರಿಸ್ಥಿತಿ ಅತ್ಯಂತ ಆತಂಕಕಾರಿಯಾಗಿದೆ. ಈ ದುರಂತದಲ್ಲಿ ಇದುವರೆಗೆ 469 ಮಂದಿ ಮೃ*ತಪಟ್ಟಿದ್ದು, ಇನ್ನೂ 1,498ಕ್ಕೂ ಹೆಚ್ಚು ಮಂದಿ ನಾಪತ್ತೆಯಾಗಿದ್ದಾರೆ ಎಂಬ ಮಾಹಿತಿ ಹೊರಬಿದ್ದಿದೆ. ನಾಪತ್ತೆಯಾದವರ ಪತ್ತೆಗಾಗಿ ನೇಪಾಳ ಸರ್ಕಾರ ಮತ್ತು ರಕ್ಷಣಾ ತಂಡಗಳು ವ್ಯಾಪಕ ಹುಡುಕಾಟ ಮತ್ತು ರಕ್ಷಣಾ ಕಾರ್ಯಾಚರಣೆ ಆರಂಭಿಸಿವೆ. ಆದರೆ ಅನೇಕ ಪ್ರದೇಶಗಳಲ್ಲಿ ರಸ್ತೆಗಳು ಮತ್ತು ಸೇತುವೆಗಳು ಕೊಚ್ಚಿಹೋಗಿರುವುದರಿಂದ ರಕ್ಷಣಾ…

ಆರೋಗ್ಯ ನಿರೀಕ್ಷಣಾ ಅಧಿಕಾರಿ ನೇಮಕಾತಿಯಲ್ಲಿ ಸರ್ಕಾರದ ಮಹತ್ವದ ಬದಲಾವಣೆ: ಆಕಾಂಕ್ಷಿಗಳಿಗೆ ಶಾಕ್!

ಆರೋಗ್ಯ ನಿರೀಕ್ಷಣಾ ಅಧಿಕಾರಿ (Health Inspector) ಹುದ್ದೆ ಆಕಾಂಕ್ಷಿಗಳಿಗೆ ಸರ್ಕಾರದ ಹೊಸ ನಿರ್ಧಾರ ಭಾರೀ ಆತಂಕಕ್ಕೆ ಕಾರಣವಾಗಿದೆ. ಹಲವು ವರ್ಷಗಳ ಬಳಿಕ ನಡೆಯುತ್ತಿರುವ ನೇಮಕಾತಿಯಲ್ಲಿ ಶೈಕ್ಷಣಿಕ ಅರ್ಹತೆಯಲ್ಲಿ ಬದಲಾವಣೆ ಮಾಡಲಾಗಿದ್ದು, ಇದುವರೆಗೆ ಪ್ರಮುಖ ಅರ್ಹತೆಯಾಗಿದ್ದ ಡಿಪ್ಲೊಮಾ ಇನ್ ಹೆಲ್ತ್ ಇನ್ಸ್ಪೆಕ್ಟರ್ ಜೊತೆಗೆ ಹೊಸ ಕೋರ್ಸ್ ಗಳನ್ನೂ ಪರಿಗಣಿಸಲು ಸರ್ಕಾರ ಮುಂದಾಗಿದೆ. 9 ವರ್ಷಗಳ ಬಳಿಕ 300 ಹುದ್ದೆಗಳ ನೇಮಕಾತಿ ಆರೋಗ್ಯ ನಿರೀಕ್ಷಣಾ ಅಧಿಕಾರಿ ಹುದ್ದೆಗೆ ಸುಮಾರು ಒಂಬತ್ತು…

101 ತಾಲೂಕು ಬರಪೀಡಿತ ಘೋಷಣೆ; ಸಿಎಂ ಪೋಸ್ಟ್‌ಗೆ ಭಾರೀ ಆಕ್ರೋಶ! ‘ನಮ್ಮ ತಾಲೂಕು ಏಕೆ ಸೇರಿಸಿಲ್ಲ?’ ಎಂದು ಜನರ ಪ್ರಶ್ನೆ

ಬೆಂಗಳೂರು: ರಾಜ್ಯದಲ್ಲಿ ಮಳೆ ಕೊರತೆ ಹಾಗೂ ರೈತರ ಸಂಕಷ್ಟದ ಹಿನ್ನೆಲೆಯಲ್ಲಿ 101 ತಾಲೂಕುಗಳನ್ನು ಬರಪೀಡಿತ ಎಂದು ಘೋಷಿಸಿರುವ ಸರ್ಕಾರದ ಕ್ರಮಕ್ಕೆ ಇದೀಗ ಸಾರ್ವಜನಿಕರಿಂದಲೇ ಪ್ರಶ್ನೆಗಳು ಎದುರಾಗಿವೆ. ಇದನ್ನೂ ಓದಿ: ಗ್ರಾಮೀಣ ಕುಡಿಯುವ ನೀರಿಗೆ ₹67,000 ಕೋಟಿ: ರಾಜ್ಯದ 29 ಸಾವಿರ ಕಾಮಗಾರಿಗಳು ಪ್ರಗತಿಯಲ್ಲಿ -ಈಶ್ವರ್ ಖಂಡ್ರೆ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರು ರಾಜ್ಯದ ಬರ ಪರಿಸ್ಥಿತಿ ಹಾಗೂ ರೈತರ ಸಂಕಷ್ಟದ ಕುರಿತು ತಮ್ಮ X ಖಾತೆಯಲ್ಲಿ ಮಾಹಿತಿ ಹಂಚಿಕೊಂಡಿದ್ದರು. ಈ ಪೋಸ್ಟ್ ಗೆ ಹಲವು…

ಗ್ರಾಮೀಣ ಕುಡಿಯುವ ನೀರಿಗೆ ₹67,000 ಕೋಟಿ: ರಾಜ್ಯದ 29 ಸಾವಿರ ಕಾಮಗಾರಿಗಳು ಪ್ರಗತಿಯಲ್ಲಿ -ಈಶ್ವರ್‌ ಖಂಡ್ರೆ

ಬೆಂಗಳೂರು: ಗ್ರಾಮೀಣ ಪ್ರದೇಶದ ಪ್ರತಿಯೊಂದು ಮನೆಗೂ ಮೇಲ್ಮೈ ನೀರಿನಿಂದ ಶುದ್ಧ ಕುಡಿಯುವ ನೀರು ತಲುಪಿಸುವ ಉದ್ದೇಶದಿಂದ ರಾಜ್ಯದಲ್ಲಿ ಏಕಗ್ರಾಮ ಮತ್ತು ಬಹುಗ್ರಾಮ ಕುಡಿಯುವ ನೀರು ಯೋಜನೆಗಳನ್ನು ಹಂತ ಹಂತವಾಗಿ ಜಾರಿಗೊಳಿಸಲಾಗುತ್ತಿದೆ ಎಂದು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವ ಈಶ್ವರ ಬಿ. ಖಂಡ್ರೆ ತಿಳಿಸಿದ್ದಾರೆ. ಇದನ್ನೂ ಓದಿ: ₹150 ಕೋಟಿ ಬಾಚಿದ 'Toxic': ಮೊದಲ ದಿನವೇ ಯಶ್ ಸಿನಿಮಾಗೆ ಭರ್ಜರಿ ಓಪನಿಂಗ್; ಪೈರಸಿ ಕಾಟವೂ ಶುರು ವಿಧಾನಸೌಧದಲ್ಲಿ ಜಲ ಆಸ್ತಿ ನಿರ್ವಹಣೆ (Water…

₹150 ಕೋಟಿ ಬಾಚಿದ ‘Toxic’: ಮೊದಲ ದಿನವೇ ಯಶ್ ಸಿನಿಮಾಗೆ ಭರ್ಜರಿ ಓಪನಿಂಗ್; ಪೈರಸಿ ಕಾಟವೂ ಶುರು

ಬೆಂಗಳೂರು: ರಾಕಿಂಗ್ ಸ್ಟಾರ್ ಯಶ್ ಅಭಿನಯದ ಬಹುನಿರೀಕ್ಷಿತ 'Toxic: A Fairy Tale for Grown-Ups' ಸಿನಿಮಾ ಬಿಡುಗಡೆಯಾದ ಮೊದಲ ದಿನವೇ ಬಾಕ್ಸ್ ಆಫೀಸ್ ನಲ್ಲಿ ಭರ್ಜರಿ ಸದ್ದು ಮಾಡಿದೆ. ಚಿತ್ರತಂಡದ ಅಧಿಕೃತ ಘೋಷಣೆಯ ಪ್ರಕಾರ, 'Toxic' ಮೊದಲ ದಿನವೇ ವಿಶ್ವದಾದ್ಯಂತ ₹150 ಕೋಟಿಗೂ ಹೆಚ್ಚು ಕಲೆಕ್ಷನ್ ಮಾಡಿದೆ. ಚಿತ್ರಕ್ಕೆ ದೇಶ-ವಿದೇಶಗಳಲ್ಲಿ ಭರ್ಜರಿ ಪ್ರತಿಕ್ರಿಯೆ ವ್ಯಕ್ತವಾಗಿದ್ದು, ಯಶ್ ಅಭಿಮಾನಿಗಳಲ್ಲಿ ಸಂಭ್ರಮ ಮನೆ ಮಾಡಿದೆ. ಇದನ್ನೂ ಓದಿ: Pothole Reporter: ಬೆಂಗಳೂರಿನ ರಸ್ತೆ…

Pothole Reporter: ಬೆಂಗಳೂರಿನ ರಸ್ತೆ ಗುಂಡಿಗಳಿಗೆ Check ಇಡಲು ಬರುತ್ತಿದೆ ಹೊಸ App

ಬೆಂಗಳೂರು: ನಗರದ ರಸ್ತೆಗಳಲ್ಲಿ ವಾಹನ ಸವಾರರಿಗೆ ದೊಡ್ಡ ತಲೆನೋವಾಗಿರುವ Pothole ಸಮಸ್ಯೆಗೆ ತಂತ್ರಜ್ಞಾನದ ಮೂಲಕ ಪರಿಹಾರ ಕಂಡುಕೊಳ್ಳಲು ಹೊಸ App ಸಿದ್ಧವಾಗಿದೆ. ಮುಂಬೈ ಮೂಲದ ಎಂಜಿನಿಯರ್ ಗೌರವ್ ಸೇನ್ ಅವರು 'Pothole Reporter' ಎಂಬ App ಅಭಿವೃದ್ಧಿಪಡಿಸಿದ್ದು, ಇದಕ್ಕೆ ಬಿಡಿಎಯಿಂದ ಮೆಚ್ಚುಗೆ ವ್ಯಕ್ತವಾಗಿದೆ ಎಂದು ತಿಳಿದುಬಂದಿದೆ. ಇದನ್ನೂ ಓದಿ: ಜೈಲಲ್ಲೂ 'Rate Fix'! ಸೆಲ್ ಗೊಂದು ರೇಟ್, ಸವಲತ್ತಿಗೊಂದು ದರ; ಮಂಡ್ಯದಲ್ಲಿ ಭಾರಿ ಆರೋಪ ಸದ್ಯ ಈ ಅಪ್ಲಿಕೇಶನ್ GitHubನಲ್ಲಿ…

KPSC ನೇಮಕಾತಿ ಅಕ್ರಮ: CID ತನಿಖೆಯಲ್ಲಿ ಭಾರೀ ಸ್ಫೋಟಕ ಮಾಹಿತಿ!

ಬೆಂಗಳೂರು: ಕರ್ನಾಟಕ ಲೋಕಸೇವಾ ಆಯೋಗದ (KPSC) ನೇಮಕಾತಿ ಅಕ್ರಮ ಪ್ರಕರಣದ ತನಿಖೆಯನ್ನು CID ಮತ್ತಷ್ಟು ಚುರುಕುಗೊಳಿಸಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಕೆಪಿಎಸ್ಸಿ ಸದಸ್ಯರು, ಸಿಬ್ಬಂದಿ, ಅಧಿಕಾರಿಗಳು ಹಾಗೂ ಆಯ್ಕೆಯಾದ ಅಭ್ಯರ್ಥಿಗಳು ಸೇರಿ 40ಕ್ಕೂ ಹೆಚ್ಚು ಮಂದಿಗೆ ವಿಚಾರಣೆಗೆ ಹಾಜರಾಗುವಂತೆ ನೋಟಿಸ್ ನೀಡಲಾಗಿದೆ ಎಂದು ತಿಳಿದುಬಂದಿದೆ.ತನಿಖೆಯ ಮುಂದಿನ ಹಂತದಲ್ಲಿ ಹಲವು ಮಹತ್ವದ ಮಾಹಿತಿ ಬಹಿರಂಗವಾಗುವ ಸಾಧ್ಯತೆ ಇದ್ದು, KPSC Scam ಪ್ರಕರಣದಲ್ಲಿ ಬಂಧನದ ಆತಂಕ ಹೆಚ್ಚಾಗಿದೆ. KPSC…

ಜೈಲಲ್ಲೂ ‘Rate Fix’! ಸೆಲ್‌ಗೊಂದು ರೇಟ್, ಸವಲತ್ತಿಗೊಂದು ದರ; ಮಂಡ್ಯದಲ್ಲಿ ಭಾರಿ ಆರೋಪ

Mandya News: ವಿಚಾರಣಾಧೀನ ಕೈದಿಗೆ ರಾಜಾತಿಥ್ಯ ನೀಡಿದ ಆರೋಪದ ಬೆನ್ನಲ್ಲೇ ಮಂಡ್ಯ ಜಿಲ್ಲಾ ಕಾರಾಗೃಹದ ಅಧಿಕಾರಿಗಳ ವಿರುದ್ಧ ಮತ್ತೊಂದು ಗಂಭೀರ ಆರೋಪ ಕೇಳಿಬಂದಿದೆ. ಜೈಲಿನಲ್ಲಿ ಕೈದಿಗಳಿಗೆ ವಿಶೇಷ ಸವಲತ್ತು ಕಲ್ಪಿಸಲು 'Rate Fix' ಮಾಡಿ ಹಣ ವಸೂಲಿ ಮಾಡಲಾಗುತ್ತಿದೆ ಎಂಬ ಆರೋಪವಿರುವ ಪತ್ರವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಇದನ್ನೂ ಓದಿ: ನೇಪಾಳ ಜಲಪ್ರಳಯದಲ್ಲಿ 8 ಬೆಂಗಳೂರಿಗರಿಗೆ ಸಂಕಷ್ಟ; ಡಾ.ಜಿ.ಪರಮೇಶ್ವರ್ ಸುಮಾರು 80 ಕೈದಿಗಳ ಹೆಸರಿನಲ್ಲಿ ಬರೆಯಲಾಗಿದೆ ಎನ್ನಲಾದ ಈ…

ನೇಪಾಳ ಜಲಪ್ರಳಯದಲ್ಲಿ 8 ಬೆಂಗಳೂರಿಗರಿಗೆ ಸಂಕಷ್ಟ; ಡಾ.ಜಿ.ಪರಮೇಶ್ವರ್‌

Nepal Flood: ನೇಪಾಳದಲ್ಲಿ ಸಂಭವಿಸಿರುವ ಭೀಕರ ಪ್ರವಾಹ ಹಾಗೂ ನೈಸರ್ಗಿಕ ವಿಕೋಪ (Natural Disaster) ಹಿನ್ನೆಲೆಯಲ್ಲಿ ಪ್ರವಾಸಕ್ಕೆ ತೆರಳಿದ್ದ ಹಲವು ಕನ್ನಡಿಗರು ಸಂಕಷ್ಟಕ್ಕೆ ಸಿಲುಕಿದ್ದಾರೆ. ಬೆಂಗಳೂರಿನ 8 ಮಂದಿ ನೇಪಾಳದಲ್ಲಿ ಸಿಲುಕಿದ್ದಾರೆಂದು ಡಿಸಿಎಂ ಪರಮೇಶ್ವರ್ ಹೇಳಿದ್ದಾರೆ. ಅವರ ರಕ್ಷಣೆಗೆ ಕರ್ನಾಟಕ ಸರ್ಕಾರ ಅಗತ್ಯ ಕ್ರಮ ಕೈಗೊಳ್ಳುತ್ತಿದೆ ಎಂದೂ ಹೇಳಿದ್ದಾರೆ. ಇದನ್ನೂ ಓದಿ: ನೇಪಾಳದಲ್ಲಿ ಭೀಕರ ದುರಂತ: 2,000 ಅಡಿ ಅಗಲದ ಹಿಮನದಿ ಕುಸಿತದಿಂದ ದಿಢೀರ್ ಪ್ರವಾಹ; 162ಕ್ಕೂ ಹೆಚ್ಚು…

ಬರ ಎದುರಿಸಲು ಸರ್ಕಾರ ಸನ್ನದ್ಧ: ಕುಡಿಯುವ ನೀರಿಗೆ ₹306 ಕೋಟಿ ಬಿಡುಗಡೆ

ಬೆಂಗಳೂರು: ನಮ್ಮ ಸರ್ಕಾರ ಈಗಾಗಲೇ ರಾಜ್ಯದ 31 ಜಿಲ್ಲೆಗಳಿಗೆ ₹117 ಕೋಟಿ ಬಿಡುಗಡೆ ಮಾಡಿದೆ. ಇದರ ಜೊತೆಗೆ ಪ್ರತಿ ಗ್ರಾಮೀಣ ಕ್ಷೇತ್ರಕ್ಕೆ ತಲಾ ₹1 ಕೋಟಿಯಂತೆ ₹189 ಕೋಟಿಗಳನ್ನು ಬಿಡುಗಡೆ ಮಾಡಿದ್ದೇವೆ. ಒಟ್ಟಾರೆ ₹306 ಕೋಟಿಗಳನ್ನು ಕುಡಿಯುವ ನೀರಿನ ಉದ್ದೇಶಗಳಿಗಾಗಿ ಬಿಡುಗಡೆ ಮಾಡಿದ್ದೇವೆ. ಬರ ಪರಿಸ್ಥಿತಿಯನ್ನು ನಿಭಾಯಿಸಲು ನಮ್ಮಲ್ಲಿ ಹಣದ ಕೊರತೆಯಿಲ್ಲ ಎಂದು ಉಪ ಮುಖ್ಯಮಂತ್ರಿಗಳು ಹಾಗೂ ಕಂದಾಯ ಸಚಿವರಾದ ಡಾ.ಜಿ.ಪರಮೇಶ್ವರ ಅವರು ಸ್ಪಷ್ಟಪಡಿಸಿದರು. ಮುಂದುವರೆದು, ಜಿಲ್ಲಾಧಿಕಾರಿಗಳ ಬಳಿ…

ಪ್ರಧಾನಿ ಮೋದಿ ಭೇಟಿ ಮಾಡಿದ ಕೇಂದ್ರ ಸಚಿವ ಎಚ್‌.ಡಿ.ಕುಮಾರಸ್ವಾಮಿ: NDA ಬಲವರ್ಧನೆ ಕುರಿತು ಚರ್ಚೆ

ನವದೆಹಲಿ: ಕೇಂದ್ರ ಭಾರಿ ಕೈಗಾರಿಕೆ ಹಾಗೂ ಉಕ್ಕು ಸಚಿವ ಎಚ್.ಡಿ. ಕುಮಾರಸ್ವಾಮಿ ಅವರು ಪ್ರಧಾನಮಂತ್ರಿ ನರೇಂದ್ರ ಮೋದಿ ಅವರನ್ನು ನವದೆಹಲಿಯಲ್ಲಿ ಗೌರವಪೂರ್ವಕವಾಗಿ ಭೇಟಿ ಮಾಡಿದ್ದಾರೆ. ಈ ಸಂದರ್ಭದಲ್ಲಿ ಅವರ ಪುತ್ರ ಹಾಗೂ ಜೆಡಿಎಸ್ ಯುವ ಘಟಕದ ರಾಜ್ಯಾಧ್ಯಕ್ಷ ನಿಖಿಲ್ ಕುಮಾರಸ್ವಾಮಿ ಕೂಡ ಜೊತೆಗಿದ್ದರು. 📍ನವದೆಹಲಿ ರಾಷ್ಟ್ರದ ಗೌರವಾನ್ವಿತ ಪ್ರಧಾನಮಂತ್ರಿಗಳಾದ ಶೀ @narendramodi ಅವರನ್ನು ಅತ್ಯಂತ ಗೌರವಪೂರ್ವಕವಾಗಿ ಭೇಟಿ ಮಾಡಲಾಯಿತು. @JanataDal_S ಪಕ್ಷದ ಯುವ ಘಟಕದ ರಾಜ್ಯಾಧ್ಯಕ್ಷರಾದ…

ಶಿಕ್ಷಣ ಸುಧಾರಣೆಗೆ ಸಂಪುಟ ಉಪ ಸಮಿತಿ ರಚನೆ: ಉಪ ಸಮಿತಿಯಲ್ಲಿ ಯಾರಿದ್ದಾರೆ? ಏನು ಮಾಡ್ತಾರೆ?

Karnataka Education System: ಪ್ರಶ್ನೆಪತ್ರಿಕೆ ಸೋರಿಕೆ, ಪರೀಕ್ಷೆಗಳಲ್ಲಿ ಅಕ್ರಮ ಸೇರಿದಂತೆ ವಿದ್ಯಾರ್ಥಿಗಳು ಎದುರಿಸುತ್ತಿರುವ ಹಲವು ಸಮಸ್ಯೆಗಳ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರ ಮಹತ್ವದ ನಿರ್ಧಾರ ಕೈಗೊಂಡಿದೆ. ವಿದ್ಯಾರ್ಥಿಗಳ ಸಮಸ್ಯೆಗಳು ಹಾಗೂ ಶಿಕ್ಷಣ ಸುಧಾರಣೆಗಳ ಕುರಿತು ಸಮಗ್ರ ಅಧ್ಯಯನ ನಡೆಸಿ ಸರ್ಕಾರಕ್ಕೆ ಶಿಫಾರಸುಗಳನ್ನು ನೀಡಲು ಸಚಿವ ಸಂಪುಟ ಮಟ್ಟದಲ್ಲಿ ಸಂಪುಟ ಉಪ ಸಮಿತಿ ರಚಿಸಿ ಆದೇಶ ಹೊರಡಿಸಲಾಗಿದೆ. ಇದನ್ನೂ ಓದಿ: ವಿದ್ಯಾರ್ಥಿಗಳ ಸಮಸ್ಯೆ, ಶಿಕ್ಷಣ ಸುಧಾರಣೆಗೆ ಸಂಪುಟ…

ಕಸ್ತೂರಿ ರಂಗನ್ ವರದಿಗೆ ಸಿಎಂ ಡಿ.ಕೆ.ಶಿವಕುಮಾರ್‌ ವಿರೋಧ; ನಾಗೇಂದ್ರ ರಾಜೀನಾಮೆ ಬಗ್ಗೆ ಮಹತ್ವದ ಹೇಳಿಕೆ

ಬೆಂಗಳೂರು: ಕಸ್ತೂರಿ ರಂಗನ್ ವರದಿ ಜಾರಿಗೆ ಕೇಂದ್ರ ಸರ್ಕಾರ ಮುಂದಾಗಿರುವುದಕ್ಕೆ ಸಿಎಂ ಡಿ.ಕೆ. ಶಿವಕುಮಾರ್ ತೀವ್ರ ವಿರೋಧ ವ್ಯಕ್ತಪಡಿಸಿದ್ದಾರೆ. ವರದಿಯಿಂದ ಮಲೆನಾಡು ಮತ್ತು ಕರಾವಳಿ ಭಾಗದ ಜನರಿಗೆ ತೊಂದರೆಯಾಗಲಿದ್ದು, ಕೃಷಿ ಹಾಗೂ ಪ್ರವಾಸೋದ್ಯಮದ ಮೇಲೂ ಪರಿಣಾಮ ಬೀರುವ ಸಾಧ್ಯತೆ ಇದೆ ಎಂದು ಹೇಳಿದ್ದಾರೆ. ಇದನ್ನೂ ಓದಿ: ₹600 ಕೋಟಿ ವೆಚ್ಚದ DN ಸಲ್ಯೂಷನ್ಸ್ ಘಟಕಕ್ಕೆ ಸಚಿವ ಎಂ.ಬಿ. ಪಾಟೀಲ್ ಚಾಲನೆ ಕೇಂದ್ರದಿಂದ ಕರಡು ಅಧಿಸೂಚನೆ ಬಂದಿದೆ. ಕರ್ನಾಟಕದ 10 ಜಿಲ್ಲೆಗಳ 34 ತಾಲೂಕುಗಳ 1,446…

₹600 ಕೋಟಿ ವೆಚ್ಚದ DN ಸಲ್ಯೂಷನ್ಸ್ ಘಟಕಕ್ಕೆ ಸಚಿವ ಎಂ.ಬಿ. ಪಾಟೀಲ್‌ ಚಾಲನೆ

ಬೆಂಗಳೂರು: ದೇವನಹಳ್ಳಿ ತಾಲ್ಲೂಕಿನ ಕುಂದಾಣ ಸಾಮಾನ್ಯ ಕೈಗಾರಿಕಾ ಪ್ರದೇಶದಲ್ಲಿ ದಕ್ಷಿಣ ಕೊರಿಯಾ ಮೂಲದ ಡಿ.ಎನ್.ಸೊಲ್ಯೂಷನ್ಸ್ ಕಂಪನಿಯು ₹600 ಕೋಟಿ ವೆಚ್ಚದಲ್ಲಿ ನಿರ್ಮಿಸಿರುವ ನೂತನ ತಯಾರಿಕೆ ಹಾಗೂ ಸಂಶೋಧನೆ ಮತ್ತು ಅಭಿವೃದ್ಧಿ (ಆರ್ & ಡಿ) ಘಟಕವನ್ನು ಬೃಹತ್ ಮತ್ತು ಮಧ್ಯಮ ಕೈಗಾರಿಕಾ ಸಚಿವ ಎಂ.ಬಿ. ಪಾಟೀಲ್ ಬುಧವಾರ ಉದ್ಘಾಟಿಸಿದರು. ಇದನ್ನೂ ಓದಿ: ಕರ್ನಾಟಕದ ಪಿಯು, ಪದವಿ ಕಾಲೇಜುಗಳಲ್ಲಿ ಮತ್ತೆ ವಿದ್ಯಾರ್ಥಿ ಚುನಾವಣೆ? ಈ ಸಂದರ್ಭದಲ್ಲಿ ಮಾತನಾಡಿದ ಅವರು, ʻಮಶೀನ್ ಟೂಲ್ ತಯಾರಿಕೆಗೆ…

ಕರ್ನಾಟಕದ ಪಿಯು, ಪದವಿ ಕಾಲೇಜುಗಳಲ್ಲಿ ಮತ್ತೆ ವಿದ್ಯಾರ್ಥಿ ಚುನಾವಣೆ?

ಬೆಂಗಳೂರು: ಕರ್ನಾಟಕದ ಪಿಯು ಮತ್ತು ಸಂಯೋಜಿತ ಪದವಿ ಕಾಲೇಜುಗಳಲ್ಲಿ ವಿದ್ಯಾರ್ಥಿ ಚುನಾವಣೆಗಳನ್ನು ಮತ್ತೆ ಆರಂಭಿಸಲು ರಾಜ್ಯ ಸರ್ಕಾರ ಚಿಂತನೆ ನಡೆಸಿದೆ. ಈ ಶೈಕ್ಷಣಿಕ ವರ್ಷದಲ್ಲೇ ಚುನಾವಣೆ ನಡೆಯುವ ಸಾಧ್ಯತೆ ಇದೆ. ಆದರೆ ರಾಜಕೀಯ ಪಕ್ಷಗಳು, ವಿದ್ಯಾರ್ಥಿ ಸಂಘಟನೆಗಳ ನೇರ ಬೆಂಬಲ ಮತ್ತು ಹೊರಗಿನವರ ಹಸ್ತಕ್ಷೇಪಕ್ಕೆ ಅವಕಾಶ ಇರುವುದಿಲ್ಲ. ವೈದ್ಯಕೀಯ ಶಿಕ್ಷಣ ಮತ್ತು ಕೌಶಲ್ಯಾಭಿವೃದ್ಧಿ ಸಚಿವ ಡಾ. ಶರಣ ಪ್ರಕಾಶ್ ಪಾಟೀಲ್ ಅವರ ಪ್ರಕಾರ, ಸರ್ಕಾರದ ಆದೇಶ ಮುಂದಿನ 10 ದಿನಗಳಲ್ಲಿ ಹೊರಬರುವ ಸಾಧ್ಯತೆ…

ನೇಪಾಳದಲ್ಲಿ ಭೀಕರ ಜಲಪ್ರಳಯ! 105 ಭಾರತೀಯರು ಸೇರಿ 384 ಮಂದಿ ನಾಪತ್ತೆ; 9 ಜೀವಹಾನಿ

ಕಠ್ಮಂಡು: ನೇಪಾಳ-ಟಿಬೆಟ್ ಗಡಿ ಸಮೀಪದ ರಾಸುವಾ ಜಿಲ್ಲೆಯಲ್ಲಿ (Rasuwa) ಬುಧವಾರ ಬೆಳಗ್ಗೆ ಭೀಕರ ಜಲಪ್ರಳಯ (Flash Flood) ಸಂಭವಿಸಿದ್ದು, ಭಾರಿ ಅನಾಹುತ ಸೃಷ್ಟಿಸಿದೆ. ಸುಮಾರು ಬೆಳಗ್ಗೆ 9 ಗಂಟೆ ವೇಳೆಗೆ ಭೋಟೆ ಕೋಶಿ ನದಿಯಲ್ಲಿ ನೀರಿನ ಮಟ್ಟ ಏಕಾಏಕಿ ಏರಿಕೆಯಾಗಿ ಟಿಮೂರೆ (Timure) ಮತ್ತು ಸ್ಯಾಫ್ರುಬೆಸಿ (Syapru Besi) ಸೇರಿದಂತೆ ಹಲವು ಪ್ರದೇಶಗಳಲ್ಲಿ ಭಾರಿ ಹಾನಿಯಾಗಿದೆ. ಇದನ್ನೂ ಓದಿ: 'ಒಂದು ದಿನದ ಕಾಪ್' ಉಪಕ್ರಮವನ್ನು ಮತ್ತೆ ಜಾರಿಗೆ ತಂದ ಸಂಚಾರ ಪೊಲೀಸರು ನದಿಯ ರಭಸಕ್ಕೆ ಮನೆಗಳು,…

'ಒಂದು ದಿನದ ಕಾಪ್' ಉಪಕ್ರಮವನ್ನು ಮತ್ತೆ ಜಾರಿಗೆ ತಂದ ಸಂಚಾರ ಪೊಲೀಸರು

ಬೆಂಗಳೂರಿನ ಸಂಚಾರವನ್ನು ಪ್ರತಿದಿನ ನಿರ್ವಹಿಸಲು ನಿಜವಾಗಿಯೂ ಏನು ಬೇಕು ಎಂದು ತಿಳಿಯಲು ಬೆಂಗಳೂರು ಸಂಚಾರ ಪೊಲೀಸರು (ಬಿಟಿಪಿ) ನಾಗರಿಕರಿಗೆ ಅವಕಾಶವನ್ನು ನೀಡುತ್ತಿದ್ದಾರೆ. ಅಂದರೆ ಸಂಚಾರ ಪೊಲೀಸರು ತಮ್ಮ 'ಒಂದು ದಿನದ ಕಾಪ್' ಉಪಕ್ರಮವನ್ನು ಪುನಃ ಜಾರಿಗೊಳಿಸಿದ್ದಾರೆ. ಇದರ ಮೂಲಕ ಸಾರ್ವಜನಿಕರು ಸಂಚಾರ ಸಿಬ್ಬಂದಿಯೊಂದಿಗೆ ಸಮಯ ಕಳೆಯಬಹುದು ಮತ್ತು ನಗರದ ಜನರು ತುಂಬಿದ ರಸ್ತೆಗಳ ಸಂಚಾರದಲ್ಲಿನ ಸವಾಲುಗಳನ್ನು ಪ್ರತ್ಯಕ್ಷವಾಗಿ ಕಂಡು ಪರಿಹರಿಸಬಹುದಾಗಿದೆ. ಸಂಚಾರ ಪೊಲೀಸರ ಕೆಲಸವನ್ನು ನಾಗರಿಕರು…

ಬೆಂಗಳೂರು ಏರ್‌ಪೋರ್ಟ್‌ನಲ್ಲಿ ಬಾಯಲ್ಲೇ ಚಿನ್ನ ಸಾಗಾಟ! 82 ಗ್ರಾಂ ಗೋಲ್ಡ್‌ ಕ್ಯಾಪ್ಸೂಲ್‌ ವಶಕ್ಕೆ

ಬೆಂಗಳೂರು: ಚಿನ್ನವನ್ನು ಅಕ್ರಮವಾಗಿ ಸಾಗಿಸಲು ಕಳ್ಳಸಾಗಣೆದಾರರು ಹೊಸ ಹೊಸ ಮಾರ್ಗಗಳನ್ನು ಹುಡುಕುತ್ತಿರುವುದು ಬೆಳಕಿಗೆ ಬರುತ್ತಲೇ ಇದೆ. ಇದೀಗ ಬೆಂಗಳೂರು ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಪ್ರಯಾಣಿಕನೊಬ್ಬ ತನ್ನ ಬಾಯಲ್ಲೇ ಚಿನ್ನದ ಕ್ಯಾಪ್ಸೂಲ್ ಗಳನ್ನು ಅಡಗಿಸಿಕೊಂಡು ಬಂದು ಸಿಕ್ಕಿಬಿದ್ದಿದ್ದಾನೆ. ಇದನ್ನೂ ಓದಿ: KPSC ನೇಮಕಾತಿ ಅಕ್ರಮ: ಸ್ಟ್ರಾಂಗ್ ರೂಂ CCTV ಡೇಟಾ ಡಿಲೀಟ್, OMR ಸ್ಕ್ಯಾನ್ ಹಾರ್ಡ್ ಡಿಸ್ಕ್ ನಾಪತ್ತೆ! ದುಬೈನಿಂದ ಬೆಂಗಳೂರಿಗೆ ಬಂದಿದ್ದ ಮೊಹಮ್ಮದ್…

KPSC ನೇಮಕಾತಿ ಅಕ್ರಮ: ಸ್ಟ್ರಾಂಗ್ ರೂಂ CCTV ಡೇಟಾ ಡಿಲೀಟ್, OMR ಸ್ಕ್ಯಾನ್ ಹಾರ್ಡ್ ಡಿಸ್ಕ್ ನಾಪತ್ತೆ!

ಬೆಂಗಳೂರು: ಕರ್ನಾಟಕ ಲೋಕಸೇವಾ ಆಯೋಗದ (KPSC) ನೇಮಕಾತಿ ಅಕ್ರಮ ಪ್ರಕರಣದ ತನಿಖೆ ತೀವ್ರಗೊಂಡಿರುವ ಬೆನ್ನಲ್ಲೇ ಕೇಂದ್ರ ಕಚೇರಿಯಲ್ಲೇ ನಡೆದಿರಬಹುದಾದ ಭಾರಿ ಗೋಲ್ಮಾಲ್ ಗೆ ಸಂಬಂಧಿಸಿದ ಮತ್ತಷ್ಟು ಆಘಾತಕಾರಿ ಸಂಗತಿಗಳು ಬೆಳಕಿಗೆ ಬಂದಿವೆ ಎನ್ನಲಾಗಿದೆ. ಇದನ್ನೂ ಓದಿ: Toxic ಮೊದಲ ದಿನದ ಕಲೆಕ್ಷನ್ : ಯಶ್ 'ಟಾಕ್ಸಿಕ್'ಗೆ ಭರ್ಜರಿ ಓಪನಿಂಗ್; ಫ್ಯಾನ್ಸ್ ಕೊಟ್ಟ ರಿವ್ಯೂ ಹೇಗಿದೆ? ಪ್ರಶ್ನೆ ಪತ್ರಿಕೆ ಹಾಗೂ OMR Sheetಗಳನ್ನು ಇರಿಸುವ ಸ್ಟ್ರಾಂಗ್ ರೂಂನ CCTV Data ಡಿಲೀಟ್ ಮಾಡಿರುವುದು…

Toxic ಮೊದಲ ದಿನದ ಕಲೆಕ್ಷನ್‌: ಯಶ್ ‘ಟಾಕ್ಸಿಕ್’ಗೆ ಭರ್ಜರಿ ಓಪನಿಂಗ್; ಫ್ಯಾನ್ಸ್ ಕೊಟ್ಟ ರಿವ್ಯೂ ಹೇಗಿದೆ?

ರಾಕಿಂಗ್ ಸ್ಟಾರ್ ಯಶ್ ನಟನೆಯ ಬಹು ನಿರೀಕ್ಷಿತ ಸಿನಿಮಾ 'Toxic: A Fairy Tale for Grown-Ups' ಇಂದು (ಆಗಸ್ಟ್ 26) ವಿಶ್ವದಾದ್ಯಂತ ಭರ್ಜರಿಯಾಗಿ ತೆರೆಕಂಡಿದೆ. 2022ರ 'KGF: Chapter 2' ಬಳಿಕ ಯಶ್ ಅವರನ್ನು ಮತ್ತೆ ದೊಡ್ಡ ಪರದೆಯ ಮೇಲೆ ನೋಡಲು ಅಭಿಮಾನಿಗಳು ಕಾತರದಿಂದ ಕಾಯುತ್ತಿದ್ದರು. ಇದನ್ನೂ ಓದಿ: Shaadi.comನಲ್ಲಿ ಪರಿಚಯ, ಮದುವೆ ಹೆಸರಲ್ಲಿ ₹60 ಲಕ್ಷಕ್ಕೂ ಅಧಿಕ ಖರ್ಚು: ಜಡ್ಜ್ ಆಗ್ತೀನಿ ಎಂದಿದ್ದ ಆರೋಪಿ ಅರೆಸ್ಟ್ ಚಿತ್ರದ ಬಿಡುಗಡೆ ಹಿನ್ನೆಲೆಯಲ್ಲಿ ಕರ್ನಾಟಕ ಸೇರಿದಂತೆ ಹಲವು…

Shaadi.comನಲ್ಲಿ ಪರಿಚಯ, ಮದುವೆ ಹೆಸರಲ್ಲಿ ₹60 ಲಕ್ಷಕ್ಕೂ ಅಧಿಕ ಖರ್ಚು: ಜಡ್ಜ್ ಆಗ್ತೀನಿ ಎಂದಿದ್ದ ಆರೋಪಿ ಅರೆಸ್ಟ್

ಬೆಂಗಳೂರು: ಮದುವೆ ಸಂಬಂಧಕ್ಕಾಗಿ ಬಳಸುವ Shaadi.com ಮೂಲಕ ಪರಿಚಯವಾಗಿ, ತಾನು ವಕೀಲ ಹಾಗೂ ಶೀಘ್ರದಲ್ಲೇ ಜಡ್ಜ್ ಆಗಲಿದ್ದೇನೆ ಎಂದು ನಂಬಿಸಿ ಉದ್ಯಮಿ ಕುಟುಂಬಕ್ಕೆ ವಂಚಿಸಿದ ಆರೋಪದ ಪ್ರಕರಣ ಬೆಂಗಳೂರಿನಲ್ಲಿ ಬೆಳಕಿಗೆ ಬಂದಿದೆ. ಮದುವೆಗೂ ಮುನ್ನವೇ ₹60 ಲಕ್ಷಕ್ಕೂ ಅಧಿಕ ಹಣ ಖರ್ಚು ಮಾಡಿಸಿಕೊಂಡು ಮೋಸ ಮಾಡಿದ ಆರೋಪ ಕೇಳಿಬಂದಿದ್ದು, ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿ ಪ್ರದೀಪ್ ಸೋಲೋಮನ್ ಹಾಗೂ ಆತನ ತಾಯಿ ಕಲಾವತಿಯನ್ನು ಪೊಲೀಸರು ಬಂಧಿಸಿದ್ದಾರೆ. ಈ ಘಟನೆ ಆಡುಗೋಡಿ ಪೊಲೀಸ್ ಠಾಣೆ…

ಬೇಲಿಯೇ ಎದ್ದು ಹೊಲ ಮೇಯ್ದ ಕಥೆ..! ಶಹಾಬಾದ್ ಆರೋಗ್ಯ ಕೇಂದ್ರದ ಸಾಮಗ್ರಿ ಸಾಗಿಸುತ್ತಿದ್ದ ವೈದ್ಯಾಧಿಕಾರಿ

ಕಲಬುರಗಿ: ಸರ್ಕಾರಿ ಆರೋಗ್ಯ ಕೇಂದ್ರದ ಸಾಮಗ್ರಿಗಳನ್ನೇ ಅನುಮತಿ ಇಲ್ಲದೇ ಸಾಗಿಸುತ್ತಿದ್ದ ಆರೋಪ ಕೇಳಿಬಂದಿದ್ದು, 'ಬೇಲಿಯೇ ಎದ್ದು ಹೊಲ ಮೇಯ್ದ ಕಥೆ' ಎಂಬಂತಾಗಿದೆ. ಕಲಬುರಗಿ ಜಿಲ್ಲೆಯ ಶಹಾಬಾದ್ ತಾಲೂಕು ಸಮುದಾಯ ಆರೋಗ್ಯ ಕೇಂದ್ರದಲ್ಲಿ (Community Health Centre) ಈ ಘಟನೆ ನಡೆದಿದೆ. ಇದನ್ನೂ ಓದಿ: ವಿಜಯಪುರ ಭೂತನಾಳ ಕೆರೆಯಲ್ಲಿ 6 ಮೃತದೇಹಗಳು ಪತ್ತೆ; ಓರ್ವ ಮಹಿಳೆ, 3 ಬಾಲಕಿಯರು, 2 ಬಾಲಕರ ದುರ್ಮ*ಣ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ಯೂಸೂಫ್ ನಾಕೇದಾರ ಅವರು ಬೊಲೆರೊ ಪಿಕ್ ಅಪ್…

ಅದಾನಿ ಭೇಟಿಗೆ ಆರ್. ಅಶೋಕ್ ಕೌಂಟರ್: ಡಿ.ಕೆ. ಶಿವಕುಮಾರ್ ವಿರುದ್ಧ ಡಬಲ್ ಸ್ಟಾಂಡ್ ಆರೋಪ

ಬೆಂಗಳೂರು: ಉದ್ಯಮಿ ಹಾಗೂ ಅದಾನಿ ಗ್ರೂಪ್ಸ್ ನ ಅಧ್ಯಕ್ಷ ಗೌತಮ್ ಅದಾನಿ ಅವರು ಸದಾಶಿವನಗರದಲ್ಲಿರುವ ಸಿಎಂ ಡಿ.ಕೆ. ಶಿವಕುಮಾರ್ ಅವರ ನಿವಾಸಕ್ಕೆ ಭೇಟಿ ನೀಡಿ ಚರ್ಚೆ ನಡೆಸಿದ್ದಾರೆ. ಭೇಟಿಯ ಬಳಿಕ ಸಿಎಂ ಡಿ.ಕೆ. ಶಿವಕುಮಾರ್ ಅವರು ಸ್ವತಃ ನಿವಾಸದ ಹೊರಗೆ ಬಂದು ಗೌತಮ್ ಅದಾನಿ ಅವರನ್ನು ಬೀಳ್ಕೊಟ್ಟಿದ್ದಾರೆ. ಗೌತಮ್ ಅದಾನಿ ಅವರ ಭೇಟಿ ರಾಜಕೀಯ ವಲಯದಲ್ಲಿ ಚರ್ಚೆಗೆ ಕಾರಣವಾಗಿದ್ದು, ಈ ವಿಚಾರವಾಗಿ ಬಿಜೆಪಿ ನಾಯಕ ಆರ್. ಅಶೋಕ್ ಅವರು ಡಿ.ಕೆ. ಶಿವಕುಮಾರ್ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. ಅದಾನಿ…

ಅನ್ನಭಾಗ್ಯಕ್ಕೆ ಸರ್ಜರಿ? e-KYC ಮೂಲಕ ಅನರ್ಹರಿಗೆ ಕೊಕ್ ಕೊಡಲು ಸರ್ಕಾರದ ಪ್ಲ್ಯಾನ್!

ಬೆಂಗಳೂರು : ರಾಜ್ಯದ ಅನ್ನಭಾಗ್ಯ ಯೋಜನೆಗೆ ಪರಿಷ್ಕರಣೆಯ ಮುನ್ಸೂಚನೆ ಸಿಕ್ಕಿದೆಯಾ? ಪಡಿತರ ಚೀಟಿದಾರರಿಗೆ e-KYC ಕಡ್ಡಾಯಗೊಳಿಸಿರುವ ಸರ್ಕಾರದ ಕ್ರಮ ಇದೀಗ ಹಲವು ಪ್ರಶ್ನೆಗಳನ್ನು ಹುಟ್ಟುಹಾಕಿದೆ. ರಾಜ್ಯಾದ್ಯಂತ ಪಡಿತರ ಚೀಟಿಗಳ ಅರ್ಹತೆ ಪರಿಶೀಲನೆಗೆ ಮುಂದಾಗಿರುವ ಆಹಾರ ಇಲಾಖೆ, ಅರ್ಹರು ಮತ್ತು ಅನರ್ಹರನ್ನು ಗುರುತಿಸುವ ಉದ್ದೇಶದಿಂದ e-KYC ಪ್ರಕ್ರಿಯೆ ನಡೆಸುತ್ತಿದೆ. ರಾಜ್ಯದಲ್ಲಿ ಕೋಟ್ಯಂತರ ಪಡಿತರ ಫಲಾನುಭವಿಗಳಿದ್ದು, ಈ ಪೈಕಿ ಹೆಚ್ಚಿನ ಸಂಖ್ಯೆಯ ಫಲಾನುಭವಿಗಳ e-KYC ಇನ್ನೂ…

ಉದ್ಯಾನವನಗಳ ಶೇ.5ರಷ್ಟು ಜಾಗ ಬಳಕೆಗೆ ಅವಕಾಶ: ಸರ್ಕಾರದ ತಿದ್ದುಪಡಿ ವಿರುದ್ಧ ತೀವ್ರ ವಿರೋಧ

ಬೆಂಗಳೂರು: ರಾಜ್ಯದ ಸರ್ಕಾರಿ ಉದ್ಯಾನವನಗಳ ಒಟ್ಟು ವಿಸ್ತೀರ್ಣದ ಶೇ.5ರಷ್ಟು ಪ್ರದೇಶವನ್ನು ಇತರೆ ಸಾರ್ವಜನಿಕ ಉದ್ದೇಶಗಳಿಗೆ ಬಳಸಲು ಅವಕಾಶ ಕಲ್ಪಿಸುವ ಉದ್ದೇಶದಿಂದ ಕರ್ನಾಟಕ ಸರ್ಕಾರಿ ಉದ್ಯಾನವನಗಳ ಕಾಯ್ದೆ 1975ಕ್ಕೆ ತಿದ್ದುಪಡಿ ತರಲು ಸರ್ಕಾರ ಮುಂದಾಗಿರುವ ವಿಚಾರ ಇದೀಗ ತೀವ್ರ ರಾಜಕೀಯ ಹಾಗೂ ಪರಿಸರ ವಿವಾದಕ್ಕೆ ಕಾರಣವಾಗಿದೆ. ಉದ್ಯಾನವನಗಳ ಜಾಗವನ್ನು ಮಾರಾಟ, ಗುತ್ತಿಗೆ, ಲೀಸ್ ಅಥವಾ ಇತರೆ ಉದ್ದೇಶಗಳಿಗೆ ಬಳಸಲು ಅವಕಾಶ ಕಲ್ಪಿಸುವುದರಿಂದ ರಾಜ್ಯದ ಪ್ರಮುಖ ಹಸಿರು ಪ್ರದೇಶಗಳಿಗೆ…

ಹೈದರಾಬಾದ್‌ನಲ್ಲಿ ‘ಟಾಕ್ಸಿಕ್’ ಪ್ರೀ-ರಿಲೀಸ್‌ ಕಾರ್ಯಕ್ರಮ: ಅಭಿಮಾನಿಗಳ ಸಾಗರದ ನಡುವೆ ಯಶ್ ಮಾತು

ಹೈದರಾಬಾದ್ : ಮಲ್ಲಾ ರೆಡ್ಡಿ ಯೂನಿವರ್ಸಿಟಿ ಮೈದಾನದಲ್ಲಿ 'ಟಾಕ್ಸಿಕ್' ಸಿನಿಮಾದ ಅದ್ಧೂರಿ ಪ್ರೀ-ರಿಲೀಸ್ ಕಾರ್ಯಕ್ರಮ ನಡೆಯಿತು. ಇದೇ 26ರಂದು ಸಿನಿಮಾ ಬಿಡುಗಡೆಯಾಗಲಿದ್ದು, ಕಾರ್ಯಕ್ರಮದಲ್ಲಿ ಇಡೀ ಚಿತ್ರತಂಡ ಭಾಗವಹಿಸಿತು. ರಾಕಿಂಗ್ ಸ್ಟಾರ್ ಯಶ್ ಅವರನ್ನು ನೋಡಲು ಅಪಾರ ಸಂಖ್ಯೆಯಲ್ಲಿ ಅಭಿಮಾನಿಗಳು ಕಾರ್ಯಕ್ರಮಕ್ಕೆ ಆಗಮಿಸಿದ್ದರು. ಅಭಿಮಾನಿಗಳ ಉತ್ಸಾಹದ ನಡುವೆ ವೇದಿಕೆಗೆ ಆಗಮಿಸಿದ ಯಶ್, ಹೈದರಾಬಾದ್ ನಲ್ಲೂ ಕನ್ನಡದಲ್ಲೇ ತಮ್ಮ ಭಾಷಣವನ್ನು ಆರಂಭಿಸಿದರು. ತೆಲುಗು ರಾಜ್ಯದ ಅಭಿಮಾನಿಗಳಿಗೆ…

ಬಿರಿಯಾನಿಯಲ್ಲಿ ವಿಷ ಬೆರೆಸಿ ಪತ್ನಿಯನ್ನು ಕೊಲ್ಲಲು ಯತ್ನಿಸಿದ ಆರೋಪ

ಬೆಂಗಳೂರು: ಬಿರಿಯಾನಿಯಲ್ಲಿ ವಿಷ ಬೆರೆಸಿ ಪತ್ನಿಯನ್ನು ಕೊಲ್ಲಲು ಯತ್ನಿಸಿದ ಆರೋಪ ಬೆಂಗಳೂರಿನ ಸುದ್ದಗುಂಟೆಪಾಳ್ಯ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಕೇಳಿಬಂದಿದೆ. ಮಸಿಕ್ ಖಾನ್ ಎಂಬ ಪತಿ ವಿರುದ್ಧ ಅವರ ಪತ್ನಿ ಫಿರ್ದೋಸ್ ಖಾನಂ ಆರೋಪ ಮಾಡಿದ್ದಾರೆ. ಕಳೆದ ಏಳು ವರ್ಷಗಳಿಂದ ವರದಕ್ಷಿಣೆ ಕಿರುಕುಳ ನೀಡುತ್ತಿದ್ದರು ಎಂದು ಫಿರ್ದೋಸ್ ಖಾನಂ ಆರೋಪಿಸಿದ್ದಾರೆ. ಘಟನೆ ನಡೆದ ರಾತ್ರಿ ಪತಿ ಹೋಟೆಲ್ ನಿಂದ ಬಿರಿಯಾನಿ ತಂದುಕೊಟ್ಟಿದ್ದು, ಅದನ್ನು ಸೇವಿಸಿದ ಬಳಿಕ ತಮಗೆ ಅಸ್ವಸ್ಥತೆ ಉಂಟಾಗಿದೆ ಎಂದು ಅವರು…

ಡಿಎಂಕೆ ಕಮ್‌ಬ್ಯಾಕ್‌ಗೆ ಸ್ಟಾಲಿನ್ ಮಾಸ್ಟರ್ ಪ್ಲ್ಯಾನ್: ಯುವಜನತೆ, ಮಹಿಳೆಯರತ್ತ ಹೊಸ ಚಿತ್ತ

ತಮಿಳುನಾಡು: ತಮಿಳುನಾಡಿನ ರಾಜಕೀಯದಲ್ಲಿ ಮತ್ತೆ ಬಲಿಷ್ಠವಾಗಿ ಕಮ್ ಬ್ಯಾಕ್ ಮಾಡುವ ಉದ್ದೇಶವನ್ನು ಡಿಎಂಕೆ ನಾಯಕ ಹಾಗೂ ಮಾಜಿ ಮುಖ್ಯಮಂತ್ರಿ ಎಂ.ಕೆ. ಸ್ಟಾಲಿನ್ ವ್ಯಕ್ತಪಡಿಸಿದ್ದಾರೆ. ಕಳೆದ ವಿಧಾನಸಭಾ ಚುನಾವಣೆಯ ಸೋಲಿಗೆ ಪಕ್ಷದ ಪದಾಧಿಕಾರಿಗಳ ಕಾರ್ಯಶೈಲಿಯಲ್ಲಿನ ಲೋಪಗಳೂ ಕಾರಣವಾಗಿವೆ ಎಂದು ಅವರು ಒಪ್ಪಿಕೊಂಡಿದ್ದು, ಪಕ್ಷದ ತಪ್ಪುಗಳನ್ನು ಮುಚ್ಚಿಡದೆ ಬಹಿರಂಗವಾಗಿ ಒಪ್ಪಿಕೊಂಡು ಸರಿಪಡಿಸುವ ಅಗತ್ಯವಿದೆ ಎಂದು ಹೇಳಿದ್ದಾರೆ. ನಮ್ಮ ಪಕ್ಷದ ಸೋಲಿಗೆ ಅನೇಕ ಕಾರಣಗಳಿವೆ. ಅದನ್ನು ಮುಚ್ಚಿಡುವ…

Rashi Bhavishya: ಯಾವ ರಾಶಿಯವರಿಗೆ ಆಕಸ್ಮಿಕವಾಗಿ ಎದೆನೋವು ಕಾಣಿಸಿಕೊಳ್ಳಬಹುದು ? ಯಾರಿಗೆ ಶುಭ? ಯಾರಿಗೆ ಅಶುಭ?

ಮೇಷ ರಾಶಿ ನಿಮ್ಮ ತನ ನಿಮ್ಮನ್ನು ಕಾಪಾಡುತ್ತದೆ ನೀವು ಧರ್ಮಕಾರ್ಯದಲ್ಲಿ ಪಾಲ್ಗೊಳ್ಳುತ್ತೀರಿ ಹಲವಾರು ಜನರ ಟೀಕೆಗೆ ಗುರಿಯಾಗುತ್ತೀರಿ ಆರೋಗ್ಯದಲ್ಲಾಗುವ ವ್ಯತ್ಯಾಸವನ್ನು ಸೂಕ್ಷ್ಮವಾಗಿ ಗಮನಿಸಿ ಹೊರಗಿನ ಆಹಾರದಿಂದ ಆರೋಗ್ಯವನ್ನು ಹಾಳು ಮಾಡಿಕೊಳ್ಳುತ್ತೀರಿ ವ್ಯವಹಾರದಲ್ಲಿ ಸ್ಥಿರತೆ ಹಣಕಾಸಿನ ವ್ಯವಹಾರಕ್ಕೆ ಆದ್ಯತೆ ನೀಡಿ ಸರಿಯಾದ ಶುದ್ದವಾದ ಆಹಾರವನ್ನು ಸೇವನೆ ಮಾಡಿ ಮಹಾಲಕ್ಷ್ಮಿಯನ್ನು ಪ್ರಾರ್ಥನೆಯನ್ನು ಮಾಡಿ ವೃಷಭ ರಾಶಿ ವಿದ್ಯಾರ್ಥಿಗಳಿಗೆ ಆತಂಕವನ್ನುಂಟು ಮಾಡುವ ದಿನ ಹಣದ ಸಮಸ್ಯೆಗಳಿಗೆ…

ಗಣಪತಿ ಹಬ್ಬದ DJಗೆ ಪ್ರಿಯಾಂಕ್‌ ಖರ್ಗೆ ವಾರ್ನಿಂಗ್: ಸುಪ್ರೀಂಕೋರ್ಟ್‌ ನಿಯಮ ಪಾಲಿಸಿ!

ಬೆಂಗಳೂರು: ಗಣಪತಿ ಹಬ್ಬ ಹಾಗೂ ಈದ್ ಮಿಲಾದ್ ಹಬ್ಬಗಳು ಸಮೀಪಿಸುತ್ತಿರುವ ಹಿನ್ನೆಲೆಯಲ್ಲಿ DJ ಬಳಕೆ ಕುರಿತು ಗೃಹ ಸಚಿವ ಪ್ರಿಯಾಂಕ್ ಖರ್ಗೆ ಪ್ರತಿಕ್ರಿಯಿಸಿದ್ದಾರೆ. ಗಣಪತಿ ಹಬ್ಬವಾಗಲಿ, ಈದ್ ಮಿಲಾದ್ ಆಗಲಿ, ಪ್ರತಿಯೊಬ್ಬರೂ ತಮ್ಮ ತಮ್ಮ ಪದ್ಧತಿಗಳಂತೆ ಹಬ್ಬಗಳನ್ನು ಆಚರಿಸಬಹುದು. ಆದರೆ ಎಲ್ಲರೂ ಸುಪ್ರೀಂಕೋರ್ಟ್ ನಿಯಮಗಳನ್ನು ಕಡ್ಡಾಯವಾಗಿ ಪಾಲಿಸಬೇಕು ಎಂದು ಹೇಳಿದ್ದಾರೆ. ಇದನ್ನೂ ಓದಿ: ಬೆಂಗಳೂರಿನ ಏರ್ ಪೋರ್ಟ್ ನಿಂದ ಜಾಗತಿಕ ಮಾರುಕಟ್ಟೆಗೆ 1,226 ಟನ್ ಮಾವಿನಹಣ್ಣು ರಫ್ತು DJ ಬಳಕೆಗೆ…

ಬೆಂಗಳೂರಿನ ಏರ್‌ಪೋರ್ಟ್‌ನಿಂದ ಜಾಗತಿಕ ಮಾರುಕಟ್ಟೆಗೆ 1,226 ಟನ್ ಮಾವಿನಹಣ್ಣು ರಫ್ತು

ಬೆಂಗಳೂರು: ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣವು ಭಾರತದ ಸೀಸನಲ್ ಮಾವಿನಹಣ್ಣು ರಫ್ತಿಗೆ ಪ್ರಮುಖ ಗೇಟ್ ವೇ ಆಗಿ ಹೊರಹೊಮ್ಮಿದೆ. 2026ರ ಏಪ್ರಿಲ್ ನಿಂದ ಜುಲೈವರೆಗೆ ನಾಲ್ಕು ತಿಂಗಳಲ್ಲಿ 1,226 ಮೆಟ್ರಿಕ್ ಟನ್ ಮಾವಿನಹಣ್ಣುಗಳನ್ನು ವಿಮಾನ ನಿಲ್ದಾಣ ನಿರ್ವಹಿಸಿದೆ. ಇದನ್ನೂ ಓದಿ: ಬಿಡದಿ ಟೌನ್ ಶಿಪ್ ಹಿಂದೆ ₹8,000 ಕೋಟಿ ಲೂಟಿ ಆರೋಪ: ಸರ್ಕಾರದ ವಿರುದ್ಧ ಛಲವಾದಿ ನಾರಾಯಣಸ್ವಾಮಿ ಹೊಸ ಬಾ*ಬ್! ಕಳೆದ ವರ್ಷದ ಇದೇ ಅವಧಿಗೆ ಹೋಲಿಸಿದರೆ ಈ ಬಾರಿ ಮಾವಿನಹಣ್ಣು ರಫ್ತು ಪ್ರಮಾಣದಲ್ಲಿ 33%…

ಬಿಡದಿ ಟೌನ್‌ಶಿಪ್ ಹಿಂದೆ ₹8,000 ಕೋಟಿ ಲೂಟಿ ಆರೋಪ: ಸರ್ಕಾರದ ವಿರುದ್ಧ ಛಲವಾದಿ ನಾರಾಯಣಸ್ವಾಮಿ ಹೊಸ ಬಾ*ಬ್!

ಬೆಂಗಳೂರು: ಬಿಡದಿ ಟೌನ್ ಶಿಪ್ ವಿಚಾರದಲ್ಲಿ ರಾಜ್ಯ ಸರ್ಕಾರದ ವಿರುದ್ಧ ವಿಧಾನಪರಿಷತ್ ವಿಪಕ್ಷ ನಾಯಕ ಛಲವಾದಿ ನಾರಾಯಣಸ್ವಾಮಿ ಹೊಸ ಆರೋಪಗಳನ್ನು ಮಾಡಿದ್ದಾರೆ. ಬಿಡದಿ ಬಳಿ ಇರುವ ಸಾವಿರಾರು ಎಕರೆ ಸರ್ಕಾರಿ ಜಮೀನಿನ ಮೇಲೆ ಸರ್ಕಾರ ಕಣ್ಣಿಟ್ಟಿದೆ ಎಂದು ಅವರು ಆರೋಪಿಸಿದ್ದಾರೆ. ಇದನ್ನೂ ಓದಿ: ಧ್ವಜಾರೋಹಣ ವೇಳೆ ಗಾಳಿಯಲ್ಲಿ 2 ಬಾರಿ ಗಾಳಿಯಲ್ಲಿ ಗುಂಡು: ಧಾರವಾಡದಲ್ಲಿ ಆತಂಕ ಸೃಷ್ಟಿಸಿದ ವ್ಯಕ್ತಿ ವಿರುದ್ಧ ಕೇಸ್! 'ಬಿಡದಿ ಟೌನ್ ಶಿಪ್ ಗೆ ಸರ್ಕಾರದ ಹಠ ಏಕೆ?' ಬಿಡದಿ ಟೌನ್ ಶಿಪ್ ವಿಚಾರದಲ್ಲಿ…

ಧ್ವಜಾರೋಹಣ ವೇಳೆ ಗಾಳಿಯಲ್ಲಿ 2 ಬಾರಿ ಗಾಳಿಯಲ್ಲಿ ಗುಂಡು: ಧಾರವಾಡದಲ್ಲಿ ಆತಂಕ ಸೃಷ್ಟಿಸಿದ ವ್ಯಕ್ತಿ ವಿರುದ್ಧ ಕೇಸ್!

ಧಾರವಾಡ: ಸ್ವಾತಂತ್ರ್ಯ ದಿನಾಚರಣೆಯ ಧ್ವಜಾರೋಹಣ ಕಾರ್ಯಕ್ರಮದ ವೇಳೆ ವ್ಯಕ್ತಿಯೊಬ್ಬ ಗಾಳಿಯಲ್ಲಿ ಗುಂಡು ಹಾರಿಸಿದ ಘಟನೆ ತಡವಾಗಿ ಬೆಳಕಿಗೆ ಬಂದಿದೆ. ಧಾರವಾಡ ತಾಲೂಕಿನ ಕುರುಬಗಟ್ಟಿ ಗ್ರಾಮ ಪಂಚಾಯಿತಿ ಎದುರು ಆಗಸ್ಟ್ 15ರಂದು ಈ ಘಟನೆ ನಡೆದಿದ್ದು, ನೂರಾರು ಶಾಲಾ ಮಕ್ಕಳು ಹಾಗೂ ಗ್ರಾಮಸ್ಥರ ನಡುವೆ ಆತಂಕ ಸೃಷ್ಟಿಸಿದೆ. ಇದನ್ನೂ ಓದಿ: ಪಾಕಿಸ್ತಾನಿ ಗ್ಯಾಂಗ್ ಜೊತೆ ಸಂಪರ್ಕ ಆರೋಪ: AC ರಿಪೇರಿ ಕೆಲಸಗಾರ ಸೈಯದ್ ಅಬೂಬಕರ್ ಬಂಧನ! ಧ್ವಜಾರೋಹಣ ಕಾರ್ಯಕ್ರಮದ ವೇಳೆ ಗನ್ ಫೈರಿಂಗ್ ಧ್ವಜಾರೋಹಣ…

ಪಾಕಿಸ್ತಾನಿ ಗ್ಯಾಂಗ್ ಜೊತೆ ಸಂಪರ್ಕ ಆರೋಪ: AC ರಿಪೇರಿ ಕೆಲಸಗಾರ ಸೈಯದ್ ಅಬೂಬಕರ್ ಬಂಧನ!

ದೊಡ್ಡಬಳ್ಳಾಪುರ: ಪಾಕಿಸ್ತಾನಿ ಗ್ಯಾಂಗ್ ಸ್ಟರ್ ಗಳೊಂದಿಗೆ Instagram ಮೂಲಕ ಸಂಪರ್ಕ ಹೊಂದಿದ್ದ ಆರೋಪದ ಮೇಲೆ ದೊಡ್ಡಬಳ್ಳಾಪುರ ನಗರ ಪೊಲೀಸರು ವ್ಯಕ್ತಿಯೊಬ್ಬನನ್ನು ಬಂಧಿಸಿದ್ದಾರೆ. ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೊಡ್ಡಬಳ್ಳಾಪುರ ನಗರದ ಇಸ್ಲಾಂಪುರ ನಿವಾಸಿ ಸೈಯದ್ ಅಬೂಬಕರ್ (28) ಬಂಧಿತ ಆರೋಪಿ ಎಂದು ಪೊಲೀಸರು ತಿಳಿಸಿದ್ದಾರೆ. ಇದನ್ನೂ ಓದಿ: ಫುಟ್ ಪಾತ್ ಮೇಲೆ ಗಾಡಿ ಓಡಿಸಿದ್ರೆ ₹5,000 ದಂಡ: ಬೆಂಗಳೂರಿನಲ್ಲಿ ಹೊಸ Traffic Ruleಗೆ ಸಿದ್ಧತೆ! ಸೆಂಟ್ರಲ್ IB ಮಾಹಿತಿ ಆಧರಿಸಿ ಬಂಧನ…

ಫುಟ್‌ಪಾತ್ ಮೇಲೆ ಗಾಡಿ ಓಡಿಸಿದ್ರೆ ₹5,000 ದಂಡ: ಬೆಂಗಳೂರಿನಲ್ಲಿ ಹೊಸ Traffic Ruleಗೆ ಸಿದ್ಧತೆ!

ಬೆಂಗಳೂರು: ಟ್ರಾಫಿಕ್ ಜಾಮ್ ನಿಂದ ತಪ್ಪಿಸಿಕೊಳ್ಳಲು ಫುಟ್ ಪಾತ್ ಮೇಲೆ ವಾಹನ ಚಲಾಯಿಸುವವರಿಗೆ ಇನ್ಮುಂದೆ ಭರ್ಜರಿ ದಂಡ ಬೀಳುವ ಸಾಧ್ಯತೆಯಿದೆ. ಬೆಂಗಳೂರಿನಲ್ಲಿ Traffic Rules Violation ಮಾಡುವ ವಾಹನ ಸವಾರರಿಗೆ ಬಿಗ್ ಶಾಕ್ ನೀಡಲು ರಾಜ್ಯ ಸರ್ಕಾರ ಮುಂದಾಗಿದೆ. ಇದನ್ನೂ ಓದಿ: ಮೈಸೂರು ಅರಮನೆ ಅಂದಕ್ಕೆ ಮಾರುಹೋದ ಕೇಂದ್ರ ಸಚಿವ: ಅರಮನೆ ಸೌಂದರ್ಯ ಕಂಡು ಪುಳಕಿತರಾದ ರಾಮಮೋಹನ್ ನಾಯ್ಡು! ಫುಟ್ ಪಾತ್ ಮೇಲೆ ವಾಹನ ಚಲಾಯಿಸುವವರಿಗೆ ವಿಧಿಸಲಾಗುತ್ತಿರುವ ದಂಡದ ಮೊತ್ತವನ್ನು ₹500ರಿಂದ…