RSS Amplifier

Blog

COURT BEAT NEWS

Only justice

courtbeatnews.comSource feed ↗10 posts

Live Last read · last published · next check

Latest posts

ಸ್ವಾತಂತ್ರ್ಯ ವೀರ ಸಾವರ್ಕರ್ ವಿವಾದಿತ ಪ್ರಶ್ನೆ: ಶಿಕ್ಷಕರ ಅಮಾನತಿಗೆ ತಡೆ, ವಿಚಾರಣೆ ಮುಂದುವರಿಕೆಗೆ ಕೇರಳ ಹೈಕೋರ್ಟ್ ಆದೇಶ

ಸ್ವಾತಂತ್ರ್ಯ ವೀರ ಸಾವರ್ಕರ್ ವಿವಾದಿತ ಪ್ರಶ್ನೆ: ಶಿಕ್ಷಕರ ಅಮಾನತಿಗೆ ತಡೆ, ವಿಚಾರಣೆ ಮುಂದುವರಿಕೆಗೆ ಕೇರಳ ಹೈಕೋರ್ಟ್ ಆದೇಶ ಸ್ವಾತಂತ್ರ್ಯ ಹೋರಾಟಗಾರ ವಿನಾಯಕ ದಾಮೋದರ ಸಾವರ್ಕರ್ ಕುರಿತು ಪ್ರಶ್ನೆ ರೂಪಿಸಿದ ಸರ್ಕಾರಿ ಶಾಲಾ ಶಿಕ್ಷಕರ ಅಮಾನತು ಆದೇಶಕ್ಕೆ ಒಂದು ತಿಂಗಳ ಅವಧಿಗೆ ಕೇರಳ ಹೈಕೋರ್ಟ್ ತಡೆ ನೀಡಿದೆ. ಆದರೆ, ಶಿಕ್ಷಕರ ವಿರುದ್ಧದ ಶಿಸ್ತುಕ್ರಮದ ವಿಚಾರಣೆಯನ್ನು ಮುಂದುವರಿಸಲು ನ್ಯಾಯಾಲಯ ಅನುಮತಿ ನೀಡಿದೆ. 2026ರಲ್ಲಿ ನಡೆದ “ಸೋಶಿಯಲ್ ಸೈನ್ಸ್ ಕ್ಲಬ್ ಫ್ರೀಡಂ ಕ್ವಿಜ್”…

ಹಿರಿಯ ನಾಗರಿಕರ ರಕ್ಷಣೆಗಾಗಿ ಟ್ರುಬ್ಯೂನಲ್‌ಗಳು ತೆರವು ಆದೇಶ ನೀಡಬಹುದು: ಸುಪ್ರೀಂ ಕೋರ್ಟ್

ಹಿರಿಯ ನಾಗರಿಕರ ರಕ್ಷಣೆಗಾಗಿ ಟ್ರುಬ್ಯೂನಲ್‌ಗಳು ತೆರವು ಆದೇಶ ನೀಡಬಹುದು: ಸುಪ್ರೀಂ ಕೋರ್ಟ್ ಹಿರಿಯ ನಾಗರಿಕರ ಪೋಷಣೆ, ರಕ್ಷಣೆ ಮತ್ತು ಘನತೆಯನ್ನು ಖಚಿತಪಡಿಸಿಕೊಳ್ಳಲು ಅಗತ್ಯವಿದ್ದಲ್ಲಿ, ಪೋಷಕರು ಮತ್ತು ಹಿರಿಯ ನಾಗರಿಕರ ನಿರ್ವಹಣೆ ಮತ್ತು ಕಲ್ಯಾಣ ಕಾಯ್ದೆ, 2007ರ ಅಡಿಯಲ್ಲಿ ರಚಿಸಲಾದ ನ್ಯಾಯಮಂಡಳಿಗಳಿಗೆ (Tribunals) ಮನೆಯಿಂದ ಮಗ ಅಥವಾ ಇತರ ವ್ಯಕ್ತಿಗಳನ್ನು ತೆರವುಗೊಳಿಸುವ ಆದೇಶ ನೀಡುವ ಅಧಿಕಾರವಿದೆ ಎಂದು ಸುಪ್ರೀಂ ಕೋರ್ಟ್ ಮಹತ್ವದ ತೀರ್ಪು ನೀಡಿದೆ. ಸುಪ್ರೀಂ ಕೋರ್ಟ್‌ನ…

ನಾಲ್ಕನೇ ಮಗುವಿಗೆ ಮಾತೃತ್ವ ರಜೆ ಇಲ್ಲ: ಸೇವಾ ನಿಯಮದ ಬಗ್ಗೆ ಹೈಕೋರ್ಟ್ ಹೇಳಿದ್ದೇನು..?

ನಾಲ್ಕನೇ ಮಗುವಿಗೆ ಮಾತೃತ್ವ ರಜೆ ಇಲ್ಲ: ಸೇವಾ ನಿಯಮದ ಬಗ್ಗೆ ಹೈಕೋರ್ಟ್ ಹೇಳಿದ್ದೇನು..? ನಾಲ್ಕನೇ ಮಗುವಿಗೆ ಮಾತೃತ್ವ ರಜೆ ಇಲ್ಲ ಎಂಬ ಉತ್ತರ ಪ್ರದೇಶ ರಾಜ್ಯದ ಸೇವಾ ನಿಯಮವನ್ನು ಅಲಹಾಬಾದ್ ಹೈಕೋರ್ಟ್ ಎತ್ತಿಹಿಡಿದಿದೆ ಎರಡು ಅಥವಾ ಅದಕ್ಕಿಂತ ಹೆಚ್ಚು ಜೀವಂತ ಮಕ್ಕಳನ್ನು ಹೊಂದಿರುವ ಉತ್ತರ ಪ್ರದೇಶದ ಸರ್ಕಾರಿ ಮಹಿಳಾ ನೌಕರರಿಗೆ ನಂತರದ ಮಗುವಿನ ಜನನಕ್ಕೆ ಮಾತೃತ್ವ ರಜೆಯನ್ನು ಪಡೆಯಲು ಹಕ್ಕಿಲ್ಲ; ಹಿಂದಿನ ಮಕ್ಕಳ ಜನನದ ಸಂದರ್ಭದಲ್ಲಿ ಅವರು ಮಾತೃತ್ವ ರಜೆಯನ್ನು ಪಡೆದಿರದಿದ್ದರೂ ಇದೇ ನಿಯಮ…

ಹಿಂದೂ ದೇವತೆಗಳ ಕುರಿತು ವೀಡಿಯೋ: ಕೋಮು ಸೌಹಾರ್ದಕ್ಕೆ ಧಕ್ಕೆ ತರುವ ಆರೋಪದ ಎಫ್‌ಐಆರ್ ರದ್ದು ಅಸಾಧ್ಯ: ಹೈಕೋರ್ಟ್‌

ಹಿಂದೂ ದೇವತೆಗಳ ಕುರಿತು ವೀಡಿಯೋ: ಕೋಮು ಸೌಹಾರ್ದಕ್ಕೆ ಧಕ್ಕೆ ತರುವ ಆರೋಪದ ಎಫ್‌ಐಆರ್ ರದ್ದು ಅಸಾಧ್ಯ: ಹೈಕೋರ್ಟ್‌ ಹಿಂದೂ ದೇವತೆಗಳ ಕುರಿತ ವಿಡಿಯೋ: ಕೋಮು ಸೌಹಾರ್ದತೆಗೆ ಧಕ್ಕೆ ತರುವ ಆರೋಪದ ಎಫ್ಐಆರ್ ಅನ್ನು ರಾಜಿ ಆಧಾರದ ಮೇಲೆ ರದ್ದುಪಡಿಸಲು ಸಾಧ್ಯವಿಲ್ಲ: ಮಧ್ಯಪ್ರದೇಶ ಹೈಕೋರ್ಟ್ ದೂರುದಾರರೊಂದಿಗೆ ರಾಜಿ ಮಾಡಿಕೊಂಡರೂ ಕೋಮು ಸೌಹಾರ್ದತೆ ಮತ್ತು ಸಾರ್ವಜನಿಕ ಶಾಂತಿಗೆ ಸಂಬಂಧಿಸಿದ ಅಪರಾಧಗಳ ಎಫ್ಐಆರ್ ರದ್ದಾಗುವುದಿಲ್ಲ ಎಂದು ಮಧ್ಯಪ್ರದೇಶ ಹೈಕೋರ್ಟ್ ತೀರ್ಪು ನೀಡಿದೆ. ಮಧ್ಯಪ್ರದೇಶ…

ಕೋರ್ಟ್ ಆವರಣದಲ್ಲಿ ವಕೀಲರ ನಡವಳಿಕೆಯೂ ವೃತ್ತಿಪರ ದುರ್ನಡತೆಯಾಗಬಹುದು: ಸುಪ್ರೀಂ ಕೋರ್ಟ್

ಕೋರ್ಟ್ ಆವರಣದಲ್ಲಿ ವಕೀಲರ ನಡವಳಿಕೆಯೂ ವೃತ್ತಿಪರ ದುರ್ನಡತೆಯಾಗಬಹುದು: ಸುಪ್ರೀಂ ಕೋರ್ಟ್ ವಕೀಲರು ತಮ್ಮ ಕಕ್ಷಿದಾರರೊಂದಿಗೆ ಮಾತ್ರವಲ್ಲದೆ, ಎದುರು ಪಕ್ಷದ ವಕೀಲರು ಮತ್ತು ಅವರ ಕಕ್ಷಿದಾರರೊಂದಿಗೂ ಗೌರವಯುತವಾಗಿ ನಡೆದುಕೊಳ್ಳಬೇಕು ಎಂದು ಸುಪ್ರೀಂ ಕೋರ್ಟ್ ಮಹತ್ವದ ಅಭಿಪ್ರಾಯ ವ್ಯಕ್ತಪಡಿಸಿದೆ. ಸುಪ್ರೀಂ ಕೋರ್ಟ್‌ನ ನ್ಯಾಯಮೂರ್ತಿಗಳಾದ ಪ್ರಶಾಂತ್ ಕುಮಾರ್ ಮಿಶ್ರಾ ಮತ್ತು ಚಂದ್ರಶೇಖರ್ ಅವರಿದ್ದ ವಿಭಾಗೀಯ ನ್ಯಾಯಪೀಠ ಈ ಅಭಿಪ್ರಾಯ ವ್ಯಕ್ತಪಡಿಸಿದೆ. ನ್ಯಾಯಾಲಯದ ಆವರಣದಲ್ಲಿ ವಕೀಲರ ನಡವಳಿಕೆಯು…

ಮೌಖಿಕ ಹೇಳಿಕೆ ಆಧಾರದಲ್ಲಿ ಪ್ರಕರಣದ ವರ್ಗಾವಣೆಗೆ ಅರ್ಜಿ: ದಾವೆದಾರರಿಗೆ ದಂಡ ವಿಧಿಸಿದ ಹೈಕೋರ್ಟ್‌

ಮೌಖಿಕ ಹೇಳಿಕೆ ಆಧಾರದಲ್ಲಿ ಪ್ರಕರಣದ ವರ್ಗಾವಣೆಗೆ ಅರ್ಜಿ: ದಾವೆದಾರರಿಗೆ ದಂಡ ವಿಧಿಸಿದ ಹೈಕೋರ್ಟ್‌ ವಿಚಾರಣಾ ನ್ಯಾಯಾಧೀಶರ ಮೌಖಿಕ ಹೇಳಿಕೆಗಳ ಆಧಾರದ ಮೇಲೆ ಪ್ರಕರಣವನ್ನು ವರ್ಗಾಯಿಸಲು ಕೋರಿದ ದಾವೆದಾರರಿಗೆ ದೆಹಲಿ ಹೈಕೋರ್ಟ್ ₹25,000 ದಂಡ ವಿಧಿಸಿದೆ. ತನ್ನ ಪ್ರಕರಣವನ್ನು ನ್ಯಾಯಾಧೀಶರು ನ್ಯಾಯಯುತವಾಗಿ ತೀರ್ಮಾನಿಸುವುದಿಲ್ಲ ಎಂದು ಆರೋಪಿಸಿ, ಅರ್ಜಿದಾರರು ಕರ್ಕಾರ್ಡೂಮಾ ಜಿಲ್ಲಾ ನ್ಯಾಯಾಲಯದಿಂದ ಮೊಕದ್ದಮೆಯನ್ನು ವರ್ಗಾಯಿಸುವಂತೆ ಕೋರಿದರು. ಪಕ್ಷಪಾತದ ಭೀತಿಯ ಮೇಲೆ ವಿಚಾರಣಾ ನ್ಯಾಯಾಲಯದಿಂದ…

ಪರ್ಯಾಯ ನಿವೇಶನದ ಕ್ರಯಪತ್ರಕ್ಕೆ ಮುದ್ರಾಂಕ, ನೋಂದಣಿ ಶುಲ್ಕ ಅನಗತ್ಯ: ಹೈಕೋರ್ಟ್ ಆದೇಶ

ಪರ್ಯಾಯ ನಿವೇಶನದ ಕ್ರಯಪತ್ರಕ್ಕೆ ಮುದ್ರಾಂಕ, ನೋಂದಣಿ ಶುಲ್ಕ ಅನಗತ್ಯ: ಹೈಕೋರ್ಟ್ ಆದೇಶ "ಸಾರ್ವಜನಿಕ ಉದ್ದೇಶಕ್ಕಾಗಿ ಸರಕಾರ ಅಥವಾ ಮಹಾನಗರ ಪಾಲಿಕೆಗಳು ಭೂ ಸ್ವಾಧೀನ ಮಾಡಿಕೊಂಡಾಗ ಭೂಮಿ ಕಳೆದು ಕೊಂಡ ಭೂ ಮಾಲೀಕರಿಗೆ ಪರಿಹಾರದ ರೂಪದಲ್ಲಿ ನೀಡುವ ಪರ್ಯಾಯ ನಿವೇಶನದ ಕ್ರಯಪತ್ರಕ್ಕೆ ಯಾವುದೇ ಮುದ್ರಾಂಕ ಶುಲ್ಕ, ನೋಂದಣಿ ಶುಲ್ಕ ವಿಧಿಸುವಂತಿಲ್ಲ'' ಎಂದು ಹೈಕೋರ್ಟ್ ಆದೇಶಿಸಿದೆ. ಕರ್ನಾಟಕ ಹೈಕೋರ್ಟ್‌ನ ಧಾರವಾಡ ಪೀಠದ ನ್ಯಾಯಮೂರ್ತಿ ಸಚಿನ್ ಶಂಕರ್ ಮಗದುಮ್ ಅವರಿದ್ದ ಏಕಸದಸ್ಯ ಪೀಠ ಈ ಆದೇಶ ನೀಡಿದೆ.…

ಸೇವಾ ವಿಷಯದಲ್ಲಿ ಮಧ್ಯಪ್ರವೇಶ: ವಿವರಣೆ ನೀಡಲು ಎಸ್ಸಿ ಎಸ್ಟಿ ಆಯೋಗಕ್ಕೆ ಹೈಕೋರ್ಟ್ ನಿರ್ದೇಶನ

ಸೇವಾ ವಿಷಯದಲ್ಲಿ ಮಧ್ಯಪ್ರವೇಶ: ವಿವರಣೆ ನೀಡಲು ಎಸ್ಸಿ ಎಸ್ಟಿ ಆಯೋಗಕ್ಕೆ ಹೈಕೋರ್ಟ್ ನಿರ್ದೇಶನ ಸೇವಾ ವಿಷಯಕ್ಕೆ ಸಂಬಂಧಿಸಿದ ವಿಚಾರದಲ್ಲಿ ಮಧ್ಯಪ್ರವೇಶ ಮಾಡಿರುವ ಹಿನ್ನೆಲೆಯಲ್ಲಿ ಅಫಿಡವಿಟ್ ಮೂಲಕ ನ್ಯಾಯಾಲಯಕ್ಕೆ ವಿವರಣೆ ನೀಡಲು ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡ ಆಯೋಗಕ್ಕೆ ಕರ್ನಾಟಕ ಹೈಕೋರ್ಟ್ ನಿರ್ದೇಶನ ನೀಡಿದೆ. ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡ ಆಯೋಗದ ಆದೇಶ ಪ್ರಶ್ನಿಸಿ ದಾಮುಲ್ ಪರ ಅದರ ವ್ಯವಸ್ಥಾಪಕ ನಿರ್ದೇಶಕ ದೇವಪ್ಪ ಕಳಸದ ಸಲ್ಲಿಸಿರುವ ಅರ್ಜಿಯನ್ನು ವಿಚಾರಣೆ…

ಭೂಸ್ವಾಧೀನ ಕಾಯ್ದೆ: ಭೂಮಾಲೀಕರಿಗೆ ಪರಿಹಾರದ ಮೊತ್ತದಲ್ಲಿಸಮಾನತೆ ನೀಡಿದ ಸುಪ್ರೀಂ: ಅಸಹಜ ವಿಳಂಬದ ಬಡ್ಡಿ ನಿರಾಕರಣೆ

ಭೂಸ್ವಾಧೀನ ಕಾಯ್ದೆ: ಭೂಮಾಲೀಕರಿಗೆ ಪರಿಹಾರದ ಮೊತ್ತದಲ್ಲಿಸಮಾನತೆ ನೀಡಿದ ಸುಪ್ರೀಂ: ಅಸಹಜ ವಿಳಂಬದ ಬಡ್ಡಿ ನಿರಾಕರಣೆ ಅಸಹಜ ವಿಳಂಬದ ಹೊರತಾಗಿಯೂ ಭೂಮಾಲೀಕರಿಗೆ ಪರಿಹಾರ ಮೊತ್ತದಲ್ಲಿ ಸಮಾನತೆಯನ್ನು ನೀಡಿದ ಸುಪ್ರೀಂ ಕೋರ್ಟ್; 4,427 ದಿನಗಳ ವರೆಗಿನ ವಿಳಂಬದ ಅವಧಿಯ ಬಡ್ಡಿಯನ್ನು ನಿರಾಕರಿಸಿದೆ. ಕರ್ನಾಟಕದ ಬಾಗಲಕೋಟೆ ಜಿಲ್ಲೆಯ ಮುಧೋಳ ಗ್ರಾಮದ ಸರ್ವೆ ಸಂಖ್ಯೆ 161/2 ರಲ್ಲಿ 7 ಎಕರೆ 12 ಗುಂಟೆ ಕೃಷಿ ಭೂಮಿಯನ್ನು ಸ್ವಾಧೀನಪಡಿಸಿಕೊಳ್ಳುವ ಬಗ್ಗೆ ವಿವಾದ ಉದ್ಭವಿಸಿದೆ . ಯೋಜನೆಯಿಂದ…

ಜಸ್ಟಿಸ್ ವರ್ಮಾ ನಿವಾಸದಲ್ಲಿ ನಗದು ಪತ್ತೆ ಪ್ರಕರಣ: ಎಫ್‌ಐಆರ್, ತನಿಖೆ ಕೋರಿದ್ದ ಅರ್ಜಿ ತಿರಸ್ಕರಿಸಿದ ಸುಪ್ರೀಂ

ಜಸ್ಟಿಸ್ ವರ್ಮಾ ನಿವಾಸದಲ್ಲಿ ನಗದು ಪತ್ತೆ ಪ್ರಕರಣ: ಎಫ್‌ಐಆರ್, ತನಿಖೆ ಕೋರಿದ್ದ ಅರ್ಜಿ ತಿರಸ್ಕರಿಸಿದ ಸುಪ್ರೀಂ ಮಾಜಿ ಹೈಕೋರ್ಟ್ ನ್ಯಾಯಮೂರ್ತಿ ಯಶವಂತ್ ವರ್ಮಾ ಅವರ ನಿವಾಸದಲ್ಲಿ ಪತ್ತೆಯಾದ ಎನ್ನಲಾದ ಅಪಾರ ನಗದು ಪ್ರಕರಣಕ್ಕೆ ಸಂಬಂಧಿಸಿದಂತೆ ಎಫ್ಐಆರ್ ಹಾಗೂ ತನಿಖೆ ಕೋರಿ ಸಲ್ಲಿಸಿದ್ದ ಅರ್ಜಿಯನ್ನು ಸುಪ್ರೀಂ ಕೋರ್ಟ್ ತಿರಸ್ಕರಿಸಿದೆ. ಅಲಹಾಬಾದ್ ಹೈಕೋರ್ಟ್ ನ ಮಾಜಿ ನ್ಯಾಯಮೂರ್ತಿ ಯಶವಂತ್ ವರ್ಮಾ ಅವರ ನಿವಾಸದಲ್ಲಿ ಬೆಂಕಿ ಅವಘಡದ ಬಳಿಕ ಅಪಾರ ಪ್ರಮಾಣದ ನಗದು ಪತ್ತೆಯಾದ ಎನ್ನಲಾದ…